G. S. Aamur
Publisher - ಮನೋಹರ ಗ್ರಂಥಮಾಲಾ
Regular price
Rs. 130.00
Regular price
Rs. 130.00
Sale price
Rs. 130.00
Unit price
per
- Free Shipping Above ₹200
- Cash on Delivery (COD) Available
Pages - 112
Type - Paperback
ಹಿಂದೆ ಮಹಾಭಾರತವನ್ನು 'ಲೋಕಯಾತ್ರೆ'ಯಾಗಿ ನಿರೂಪಿಸಿದ ಆಮೂರರು ಈಗ ಗೀತೆಯನ್ನೂ ವಿಶಿಷ್ಟವಾಗಿಯೇ ನೋಡಿದ್ದಾರೆ. ಸುಮಾರು ಎಪ್ಪತ್ತೈದು ವರ್ಷಗಳ ನಿಡುಗಾಲದ ಸಂಸ್ಕೃತ ಕನ್ನಡ ಇಂಗ್ಲಿಷ್ ಸಾಹಿತ್ಯ ಸಂಸರ್ಗದಿಂದ ಮನೋಬುದ್ಧಿಗಳ ಪರಿಪಕ್ವವಾದ ವ್ಯಕ್ತಿತ್ವವೊಂದು ಸಮತಾ ಸ್ಥಿತಿಯಲ್ಲಿ ಗೀತೆಯನ್ನು ಸ್ವವಿಶಿಷ್ಟವಾಗಿಯೇ ಅರ್ಥೈಸಿದ್ದನ್ನು ಇಲ್ಲಿ ಕಾಣಬಹುದಾಗಿದೆ. ಆಮೂರರ ದೃಷ್ಟಿಯಲ್ಲಿ ಭಗವದ್ಗೀತೆ ಶ್ರೀಕೃಷ್ಣನ ಯೋಗಶಾಸ್ತ್ರ' ಯುತಿ(ಕೂಡಿಕೆ) ಮತ್ತು ಸಮಾಧಿ(ನಿತ್ಯದಲ್ಲಿ ನೆಲೆನಿಲ್ಲುವಿಕೆ) ಈ ಎರಡೂ ನೆಲೆಗಳಲ್ಲಿ ಯೋಗ ಶಬ್ದದ ವಿಸ್ತರವನ್ನು ಆಮೂರರು ಗುರುತಿಸಿದ್ದಾರೆ.
ಕರ್ಮ ಭಕ್ತಿ ಮತ್ತು ಜ್ಞಾನ ಇವು ಬೇರೆ ಬೇರೆ ಮಾರ್ಗಗಳಾಗಿರದೆ ಒಂದು ಇನ್ನೊಂದನ್ನು ಅವಲಂಬಿಸಿವೆ ಅಥವಾ ಒಳಗೊಂಡಿವೆ. 'ಈ ಮಾರ್ಗಗಳು ಸ್ವತಂತ್ರವಾಗಿಲ್ಲ. ಅವು ಒಂದನ್ನೊಂದು ನಿಯಂತ್ರಿಸುತ್ತವೆ.' ಎನ್ನುವುದು ಆಮೂರರ ನಿಲುವು. 'ಅರ್ಥನಿರ್ಧಾರಣವಲ್ಲದೆ ಅರ್ಥಗ್ರಹಿಕೆ ಮಾತ್ರ ತನ್ನ ಉದ್ದೇಶ' ಎನ್ನುವ ಎಚ್ಚರ, ವಿನಯ ಇಲ್ಲ. ವ್ಯಕ್ತವಾಗಿದೆ.
ಗೀತೆಯನ್ನು ಸಂದರ್ಭ (Context) ಮತ್ತು ಪಠ್ಯ (Text) ಎಂದು ವಿಭಜಿಸಿ ನೋಡಿರುವುದು ತೀರ ಹೊಸದು. ನಮ್ಮ ಅಧ್ಯಯನ ಪರಂಪರೆಯಲ್ಲಿ ಸಾಂಖ್ಯಕ್ಕೂ ಪ್ರಮುಖ ಸ್ಥಾನ ಇದೆ ಎನ್ನುವುದು ಆಮೂರರ ಸಮಚಿತ್ತದ ಗ್ರಹಿಕೆಗೆ ಉತ್ತಮ ನಿದರ್ಶನ.
ಕರ್ಮ ಭಕ್ತಿ ಮತ್ತು ಜ್ಞಾನ ಇವು ಬೇರೆ ಬೇರೆ ಮಾರ್ಗಗಳಾಗಿರದೆ ಒಂದು ಇನ್ನೊಂದನ್ನು ಅವಲಂಬಿಸಿವೆ ಅಥವಾ ಒಳಗೊಂಡಿವೆ. 'ಈ ಮಾರ್ಗಗಳು ಸ್ವತಂತ್ರವಾಗಿಲ್ಲ. ಅವು ಒಂದನ್ನೊಂದು ನಿಯಂತ್ರಿಸುತ್ತವೆ.' ಎನ್ನುವುದು ಆಮೂರರ ನಿಲುವು. 'ಅರ್ಥನಿರ್ಧಾರಣವಲ್ಲದೆ ಅರ್ಥಗ್ರಹಿಕೆ ಮಾತ್ರ ತನ್ನ ಉದ್ದೇಶ' ಎನ್ನುವ ಎಚ್ಚರ, ವಿನಯ ಇಲ್ಲ. ವ್ಯಕ್ತವಾಗಿದೆ.
ಗೀತೆಯನ್ನು ಸಂದರ್ಭ (Context) ಮತ್ತು ಪಠ್ಯ (Text) ಎಂದು ವಿಭಜಿಸಿ ನೋಡಿರುವುದು ತೀರ ಹೊಸದು. ನಮ್ಮ ಅಧ್ಯಯನ ಪರಂಪರೆಯಲ್ಲಿ ಸಾಂಖ್ಯಕ್ಕೂ ಪ್ರಮುಖ ಸ್ಥಾನ ಇದೆ ಎನ್ನುವುದು ಆಮೂರರ ಸಮಚಿತ್ತದ ಗ್ರಹಿಕೆಗೆ ಉತ್ತಮ ನಿದರ್ಶನ.