Kusuma Ayarahalli
ಯೇಳ್ಕಳಕ್ ಒಂದೂರು
ಯೇಳ್ಕಳಕ್ ಒಂದೂರು
Publisher - ಅವ್ವ ಪುಸ್ತಕಾಲಯ
- Free Shipping Above ₹400
- Cash on Delivery (COD) Available*
Pages - 124
Type - Paperback
Couldn't load pickup availability
ಊರು ಅಂದರೆ ಬೇರು. ಮಾತ್ರವಲ್ಲ, ಅದೊಂದು ನೆನಪಿನ ಗಣಿ. ಹಿಂದೆ ಊರ ಸಂತೆಗೆ ಯಾರದೋ ಕೈ ಹಿಡಿದು ಹೋಗುತ್ತಾ ತಪ್ಪಿಸಿಕೊಳ್ಳುವ ಭಯದಲ್ಲಿ ಕಾಲು ಬೀಸಿ ಹಾಕುತ್ತಾ ನಮ್ಮವರಿದ್ದಾರೆ ತಾನೆ? ಅಂತ ಯಾವುದೋ ಗುರುತು ಹಿಡಿದು ನೋಡುತ್ತಾ ಇದ್ದ ಸಮಯದಿಂದ ಸಂತೆಯಿಂದ ಬಿಡಿಸಿಕೊಂಡ ಕೈ ಕಾಲು ಮೆದುಳುಗಳು ದೊಡ್ಡ ನಗರಗಳ ದುಬಾರಿ ಮಾಲ್ ಎದುರು ನಿಂತು, ಮೆಟ್ಟಿಲು ಹತ್ತುವ ಕಷ್ಟವೂ ಇಲ್ಲದೇ ಕೈ ತೋರಿಸಿದರೆ ನಲ್ಲಿ ನೀರು ತಾನಾಗೇ ಬರುವ ಮಾಯೆಗೆ ಎದುರಾಗುತ್ತಾ ಒಂದು ಸುತ್ತಿಗಿಷ್ಠೆಂಬ ಕಾಗಡಿಯಾಟದಿಂದ ಕಾರ್ಡು ಉಜ್ಜಿ ಗಂಟೆಗಿಷ್ಟೆಂದು ಕಂಪ್ಯೂಟರಲೇ ಸ್ಕೂಟರು, ಕಾರು ಓಡಿಸುತ್ತಾ ಕುಡಿದ ನೀರೂ ಅಲ್ಲಾಡದಂತೆ ಕುರ್ಚಿಯಲ್ಲೆ ಕೂತು ಓಡಿ ಯಾರನೋ ಸೋಲಿಸುವ ಬೆರಗಿಗೆ ಕಂಗೆಡುತ್ತಾ ಹೃದಯವೆಂಬುದು ಆಗಾಗ ಯಾವುದೋ ಸಮಾಧಾನಕ್ಕಾಗಿ ಮತ್ತೆ ಮತ್ತೆ ನೆನಪನ್ನೆ ಆಶ್ರಯಿಸುತ್ತದೆ.
ಇದಕ್ಕೊಂದು ಬಲವಾದ ಕಾರಣವಿದೆ. ಅದು ನಮ್ಮ ತಲೆಮಾರಿನ ಕಾಲಮಾನ. ಹಿಂದೆ ಎಷ್ಟೋ ತಲೆಮಾರುಗಳು ಹುಟ್ಟಿ ಅಳಿದಿವೆ ಆದರೆ ನಾವು, ಪತ್ರಗಳ ಕಾಲದಲ್ಲಿ ಟಿವಿ, ಫೋನು, ಕಾಲದಲ್ಲಿ ಕರೆಂಟೂ ಇರದ ಊರುಗಳಲ್ಲಿ ಹುಟ್ಟಿ ಈಗ ಎಐ ವರೆಗೂ ಎಲ್ಲವನ್ನೂ ಸಿನೆಮಾದಂತೆ ನೋಡುತ್ತಾ ಬಂದವರು. ಬದಲಾವಣೆಯ ಸಂಕಟ, ಸಂಭ್ರಮ ಎರಡನ್ನೂ ಕಂಡವರು. ಹಾಗಾಗಿಯೇ ನಾವು ಒಂತರಾ ಭಾವುಕರು, ಇಲ್ಲಿರಲಾರದವರು ಅಲ್ಲಿಗೆ ಹೋಗಲಾರದವರು. ಹಾಗಿತ್ತು ಹೀಗಾಗಿದೆ. ಮತ್ತೆ ಹೇಗಾಗುವುದೋ ಎಂಬ ಕತೆ ಕೇಳಿದಷ್ಟೂ ಹೇಳಲು ಬರವಿಲ್ಲದವರು. ಇವೆಲ್ಲ ಸ್ಥಿತ್ಯಂತರ ಕಾಲದ ಚೆಲುವ ನೆನಪುಗಳು ಮತ್ತು ಚಡಪಡಿಕೆಗಳು.
ಆದಿ ಅಂತ್ಯಗಳಿಲ್ಲದ ಕಾಲಚಕ್ರದಲ್ಲಿ ನಮ್ಮ ಬದುಕಿನ ಅವಧಿ ಎಷ್ಟು ಮಹಾ? ಆದರೆ ಸುಮ್ಮನೇ ಇಣುಕಿದರೆ ಹೊರಗಿರುವಷ್ಟೇ ಲೋಕ ಒಳಗೂ ಬಿಚ್ಚಿದಷ್ಟೂ ಪದರ ಪದರವಾಗಿ ನಮ್ಮನ್ನೆ 'ಅರೆ ಇದೆಲ್ಲಿತ್ತು?' ಅಂತ ಅಚ್ಚರಿಗೊಳಿಸುವ ಚಿತ್ರಗಳು. ಅಂತಹ ಕೆಲವು ಚಿತ್ರಗಳನ್ನು ಕ್ಲಿಕ್ ಅನಿಸಿ ಇಲ್ಲಿ ಕೊಟ್ಟಿದ್ದೇನೆ.
Share

Subscribe to our emails
Subscribe to our mailing list for insider news, product launches, and more.