Skip to product information
1 of 1

K. Srinivasa Reddy

ವಿಸ್ತಾರ

ವಿಸ್ತಾರ

Publisher -

Regular price Rs. 225.00
Regular price Rs. 225.00 Sale price Rs. 225.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಕುತೂಹಲಗಳು ನಮ್ಮ ಬದುಕಿನಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತವೆ. ನಮ್ಮ ಹಳೆಯ ವಾಡಿಕೆಯ ಲೆಕ್ಕಚಾರಗಳನ್ನು ಸರಿಸಿ ಹೊಸ ರೀತಿಯ ಲೆಕ್ಕಾಚಾರಗಳಿಗೆ ನಾಂದಿಯಾಗುತ್ತವೆ. ನಾವು ಹೊಸ ರೀತಿಯಲ್ಲಿ ಆಲೋಚಿಸತೊಡಗುತ್ತೇವೆ. ಹೊಸ ಹೊಸ ಸಾಧ್ಯತೆಗಳು ನಮ್ಮ ಗಮನಕ್ಕೆ ಬರುತ್ತವೆ. ನಮ್ಮಲ್ಲಿ ಭರವಸೆ ಮೂಡಿಸುತ್ತವೆ. ನಾವು ವೈಬ್ರೆಂಟ್ ಆಗುತ್ತೇವೆ. ನಮ್ಮ ಸೃಜನಶೀಲತೆ ಪ್ರತಿಭೆಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.
ಕೆ. ಶ್ರೀನಿವಾಸ ರೆಡ್ಡಿ ಅವರು 2006 ರಲ್ಲಿ ಕರ್ನಾಟಕ ನಾಗರಿಕ ಸೇವೆಗೆ ಸೇರಿ ಪ್ರಸ್ತುತ ಕೃಷಿ ಮಾರಾಟ ಇಲಾಖೆಯ ಚಿತ್ರದುರ್ಗ ಜಿಲ್ಲೆಯ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕಂದಿನಿಂದಲೂ ಕತೆ, ಕವನ, ನಾಟಕ, ಹಾಡುಗಾರಿಕೆಯಲ್ಲಿ ಆಸಕ್ತಿಯನ್ನು ಹೊಂದಿರುವ ಇವರು, ವಿಶೇಷವಾಗಿ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಇವರ 'ಒಂದು ಹೆಜ್ಜೆ ಮುಂದೆ', 'ಹನಿಗಳು' ಪುಸ್ತಕಗಳು ಪ್ರಕಟವಾಗಿವೆ. ಈಗ 'ವಿಸ್ತಾರ' ಎಂಬ ಕೃತಿಯನ್ನು ರಚಿಸಿ, ಪ್ರಕಟಿಸಿದ್ದಾರೆ. ಈ ಕೃತಿಯಲ್ಲಿ 108 ಲೇಖನಗಳಿದ್ದು, ಪುಸ್ತಕದ ಹೆಸರೇ ಹೇಳುವಂತೆ ಇವು ನಮ್ಮ ಮನಸ್ಸು ವಿಸ್ತಾರಗೊಳ್ಳುವುದಕ್ಕೆ, ನಮ್ಮ ಆಲೋಚನೆಗಳು ವೈವಿಧ್ಯಮಯಗೊಳ್ಳುವುದಕ್ಕೆ, ಸೃಜನಶೀಲವಾಗುವುದಕ್ಕೆ, ನವನವೀನಗೊಳ್ಳುವುದಕ್ಕೆ ಸಂಬಂಧಿಸಿವೆ.
View full details