Skip to product information
1 of 2

Jagadeesh G I

ವಿಶ್ವಮಾನವ ಕುವೆಂಪು

ವಿಶ್ವಮಾನವ ಕುವೆಂಪು

Publisher -

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 156

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಕುವೆಂಪು ವೈಜ್ಞಾನಿಕ ಮನೋಭಾವವನ್ನು ಪ್ರಬಲವಾಗಿ ಪ್ರತಿಪಾದಿಸುತ್ತಾರೆ.
ಬಡತನ, ಮೌಡ್ಯ ಪ್ರಗತಿ, ವೈಜ್ಞಾನಿಕ ಮನೋಭಾವ ಇವುಗಳು
ಒಂದಕ್ಕೊಂದು ಸಂಬಂಧವುಳ್ಳಂಥವೆಂಬುದು ಅವರ ನಂಬಿಕೆ. ಅವರದು
ಸಮಾಜವಾದಿ ನಿಲುವಿನ ಘೋಷಣೆ. 'ಸರ್ವರಿಗೂ ಸಮಬಾಳು!
ಸರ್ವರಿಗೆ ಸಮಪಾಲು' ಎಂಬ ನವಯುಗವಾಣಿಯ ಘೋಷಣೆ.
ಇದು ಅವರ ನವಭಾರತದ ಹೊಸಬಾಳಿನ ಸಾರ. ಇಲ್ಲಿ ಅವರು
ಸ್ಪಷ್ಟವಾಗಿ ಶೋಷಿತರ ಪರವಾಗಿ ನಿಂತು ಬದಲಾವಣೆಗೆ ಕರೆಕೊಡುತ್ತಾರೆ.
ಮನುಜಮತ-ವಿಶ್ವಪಥ ಪರಿಕಲ್ಪನೆ ಕುವೆಂಪು ಪ್ರತಿಪಾದಿಸಿದ ಬಹುಮುಖ್ಯ ತಾತ್ವಿಕ ನಿಲುವು. ಅವರ ಸಾಮಾಜಿಕ ಸಂಘರ್ಷ ಬಹುಪಾಲು ರೂಪಗೊಂಡಿರುವುದು ವರ್ಣವ್ಯವಸ್ಥೆಯ ವಿರೋಧದಲ್ಲಿ. ಮತ್ತು ಭಾರತೀಯ ಸಮಾಜದಲ್ಲಿನ ಶ್ರೇಣೀಕರಣ ವ್ಯವಸ್ಥೆಯ ವಿರುದ್ಧ. ಇವರ ಸಾಮಾಜಿಕ ಆಸಕ್ತಿ ಅನೇಕ ಮೂಲಗಳಿಂದ ಪ್ರೇರಣೆ ಪಡೆದು ಅನೇಕ ನೆಲೆಗಳಲ್ಲಿ ವ್ಯಕ್ತವಾಗಿದ್ದರೂ ಅದರ ಕೇಂದ್ರದಲ್ಲಿ ಕನ್ನಡ-ಕರ್ನಾಟಕ-ರೈತ. "ಕನ್ನಡ ಅಳಿಸೆವು, ಕರ್ನಾಟಕ ಬಿಡೆವು, ಈ ಇಡೀ ಕರ್ನಾಟಕಕ್ಕೆ ರೈತನೇ ಯಜಮಾನ" ಎನ್ನುವ ದಾಟಿ ಕುವೆಂಪು ಅವರದು

View full details