Skip to product information
1 of 2

Dr. Sukanya Soonagahalli

ವಿಜ್ಞಾನ ಗಂಗೆಯ ಹರಿಸಿದ ಭಗೀರಥರು

ವಿಜ್ಞಾನ ಗಂಗೆಯ ಹರಿಸಿದ ಭಗೀರಥರು

Publisher - ಸಾಹಿತ್ಯ ಲೋಕ ಪ್ರಕಾಶನ

Regular price Rs. 320.00
Regular price Sale price Rs. 320.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 278

Type - Paperback

Gift Wrap
Gift Wrap Rs. 15.00

ಸಾಹಿತ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯ (8) ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಭಾಷೆಗೆ ಬಂದಿವೆ ಎಂದು ನಾವೆಲ್ಲ ಎದೆಯುಬ್ಬಿಸಿ ಹೇಳಿಕೊಳ್ಳುತ್ತ ಬಂದಿದ್ದೇವೆ. ವಿಜ್ಞಾನವನ್ನು ಜನಪ್ರಿಯಗೊಳಿಸುವ ಕಾಯಕದಲ್ಲಿ ಕೂಡ ಕರ್ನಾಟಕಕ್ಕೆ ಲಭಿಸಿದಷ್ಟು ರಾಷ್ಟ್ರ ಪ್ರಶಸ್ತಿಗಳು (ವಿಜ್ಞಾನ ಸಂವಹನಕಾರರು-9, ವಿಜ್ಞಾನ ಸಂಸ್ಥೆಗಳು-3) ಬೇರಾವ ಭಾಷೆಗೂ ಸಿಕ್ಕಿಲ್ಲ. ಇವನ್ನು ಗೆದ್ದು ತಂದ ಸಂವಹನಕಾರರ ಬಗ್ಗೆ ನಮಗೆ ಅಷ್ಟಾಗಿ ಪರಿಚಯವಿಲ್ಲ. ಏಕೆಂದರೆ, ಇವರೆಲ್ಲ ವಿಜ್ಞಾನವನ್ನು ಜನಕ್ಕೆ ಪರಿಚಯಿಸುತ್ತ ತಾವು ನೇಪಥ್ಯದ ಕತ್ತಲಲ್ಲೇ ಉಳಿದವರು.

'ಕತ್ತಲ ಖಂಡ' ಎಂದೇ ಹೆಸರಾಗಿದ್ದ ಆಫ್ರಿಕಾದಿಂದ ಇದೀಗ ಈ 9 ಸಾಧಕರ ಮತ್ತು 3 ಸಂಸ್ಥೆಗಳ ಬಗ್ಗೆ ಈ ಪುಸ್ತಕದ ಮೂಲಕ ಬೆಳಕು ಮೂಡಿಬಂದಿದೆ. ಕೀನ್ಯಾ ದೇಶದಲ್ಲಿ ನೆಲೆಸಿರುವ ಕನ್ನಡತಿ ಡಾ. ಸುಕನ್ಯಾ ಸೂನಗಹಳ್ಳಿಯವರು ಛಲಕ್ಕೆ ಬಿದ್ದವರಂತೆ ಇವರೆಲ್ಲರ ಬಗ್ಗೆ ದುರ್ಲಭ ಮಾಹಿತಿಗಳನ್ನು ಸಂಗ್ರಹಿಸಿ ಸರಳ ಶೈಲಿಯಲ್ಲಿ ಇಲ್ಲಿ ನಿರೂಪಿಸಿದ್ದಾರೆ. ಸುಕನ್ಯಾ ಅವರು ಸ್ವತಃ ಸಸ್ಯರೋಗ ವಿಜ್ಞಾನದಲ್ಲಿ ಪಿಎಚ್.ಡಿ. ಪಡೆದು, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿ, ವಿಜ್ಞಾನ ಸಾಹಿತ್ಯದ ತಮ್ಮ ಮೊದಲ ಕೃತಿಗೇ ಪ್ರಶಸ್ತಿಯನ್ನೂ ಗಳಿಸಿದವರು.

ವಿಜ್ಞಾನ-ತಂತ್ರಜ್ಞಾನದ ಸ್ವಾರಸ್ಯಗಳನ್ನು ಕನ್ನಡದಲ್ಲೇ ಕಟ್ಟಿಕೊಟ್ಟರೆ ಕನ್ನಡವೂ ಬೆಳೆಯುತ್ತದೆ; ಕನ್ನಡದ ಮಕ್ಕಳೂ ವಿಜ್ಞಾನಿಗಳಾಗಿ ಬೆಳಗಲು ಅವಕಾಶ ಸೃಷ್ಟಿಯಾಗುತ್ತದೆ. ಹಾಗೆ ವಿಜ್ಞಾನ ರಂಗದಲ್ಲಿ ಮೇಲೇರಲು ಬಯಸುವ ಕನ್ನಡಿಗರಿಗೆ ಸೋಪಾನಗಳಾಗಿ ಈ ಒಂಬತ್ತೂ ಸಾಧಕರು ಕೆಲಸ ಮಾಡಿದ್ದಾರೆ. ಕನ್ನಡವನ್ನೂ ಶ್ರೀಮಂತಗೊಳಿಸಿದ್ದಾರೆ. ವಿಜ್ಞಾನ ಸಂವಹನ ಹೇಗಿರಬೇಕು ಎಂಬ ಮಾದರಿಯನ್ನು ಇತರೆ ಭಾಷೆಗಳಿಗೆ ಹಾಕಿಕೊಟ್ಟಿದ್ದಾರೆ. ಇವರ ಪರಿಶ್ರಮ, ತನ್ಮಯತೆ ಹೇಗಿತ್ತೆಂಬುದು ಈ ಅಪರೂಪದ ಕೃತಿಯಲ್ಲಿದೆ.

— ನಾಗೇಶ್ ಹೆಗಡೆ (ವಿಜ್ಞಾನ ಲೇಖಕರು)

View full details