Dr. Naga H. Hubli
ವಿದ್ಯಾವಂತ ವೇಶ್ಯೆಯ ಆತ್ಮಕಥೆ
ವಿದ್ಯಾವಂತ ವೇಶ್ಯೆಯ ಆತ್ಮಕಥೆ
Publisher - ಛಂದ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 186
Type - Paperback
Couldn't load pickup availability
ಈ ಆತ್ಮಕಥೆ ಓದುಗರನ್ನು ವಿಚಲಿತಗೊಳಿಸುತ್ತದೆ. ಸಿರಿವಂತ ಮನೆತನದ ಹುಡುಗಿ ಮಾನದಾ, ಬಾಳಿನ ವಿಚಿತ್ರ ಸನ್ನಿವೇಶದ ಸುಳಿಗೆ ಸಿಕ್ಕು ವೇಶ್ಯಾವೃತ್ತಿಗೆ ಇಳಿದ ಕಥನವಿದು. ಈಕೆಯ ಸಾರ್ವಜನಿಕ ಬದುಕು ಬೆಂಗಳೂರು ನಾಗರತ್ನಮ್ಮ ಅವರ ಧೀಮಂತ ಬದುಕನ್ನೂ, ಕಾರಂತರ 'ಮೈಮನಗಳ ಸುಳಿಯಲ್ಲಿ' ಕಾದಂಬರಿಯ ಮಂಜುಳೆಯ ವೈಯಕ್ತಿಕ ತೊಳಲಾಟದ ಬದುಕನ್ನೂ ನೆನಪಿಸುತ್ತದೆ. ಆದರೆ ಮಾನದಾ, ವೇಶ್ಯಾಜೀವನವು ನೈತಿಕವಾಗಿ ಶಪಿತ ಬದುಕೆಂದೂ ಅದರಿಂದ ಮಹಿಳೆಯರು ಹೊರಬರಬೇಕೆಂದೂ ಹೋರಾಡಿದವಳು; ಮಂಜುಳೆಯು ಗಂಡಾಳಿಕೆಯ ಕೌಟುಂಬಿಕ ವ್ಯವಸ್ಥೆಯಲ್ಲಿರುವ ಮಹಿಳೆ ಸ್ವಾತಂತ್ರ್ಯಹೀನ ಬದುಕು ನಡೆಸುತ್ತಿರುವುದನ್ನೂ ಕಾಣಿಸಬಲ್ಲವಳು. ಮಾನದಾಳ ವೈಯಕ್ತಿಕ ಬಾಳಿನ ಜತೆಗೆ ಹಲವು ಚಾರಿತ್ರಿಕ ಕಥನಗಳೂ ಹೆಣಿಗೆಗೊಂಡಿವೆ.
ಈಕೆ ಟ್ಯಾಗೋರ್, ಗಾಂಧಿ, ಚಿತ್ತರಂಜನ ದಾಸ್ ಮುಂತಾದ ರಾಷ್ಟ್ರನಾಯಕರ ಜತೆ ಪರೋಕ್ಷ ಒಡನಾಟವಿದ್ದ ಮಹಿಳೆ. ಇಲ್ಲಿ 20ನೇ ಶತಮಾನದ ಮೊದಲ ಘಟ್ಟದ ಬಂಗಾಳಿ ಕುಲೀನರ ಜೀವನಕ್ರಮ, ಅವರ ಪಾಶ್ಚಿಮಾತ್ಯ ಜೀವನಶೈಲಿಯ ಚಿತ್ರಣಗಳಿವೆ; ವೇಶ್ಯಾವೃತ್ತಿ ಪಾನನಿಷೇಧ ಮುಂತಾದ ಸಮಾಜ ಸುಧಾರಣ ಚಳವಳಿಗಳ ಚಿತ್ರಗಳಿವೆ; ಭಾರತದ ಸ್ವಾತಂತ್ರ್ಯ ಹೋರಾಟದ ಚಿತ್ರಗಳಿವೆ. ಈ ಎರಡೂ ಆಂದೋಲನಗಳು ಎಂತೆಂತಹ ಅಜ್ಞಾತ ಮತ್ತು ವೈರುದ್ಧ್ಯಕರ ಧಾರೆಗಳನ್ನು ಒಳಗೊಂಡಿದ್ದವು ಎಂಬುದರ ಚಿತ್ರಣವು ದಂಗುಬಡಿಸುತ್ತದೆ.
ಯಾವ ಸೋಗೂ ಇಲ್ಲದೆ ತನ್ನ ಮುಗ್ಧತೆ, ಕಾಮುಕತೆ, ಧೈರ್ಯ, ಚಾಲಾಕಿತನ, ಔದಾರ್ಯಗಳನ್ನು ಚಿತ್ರಿಸುವ ಈ ಕಥನವು ಓದುಗರಲ್ಲಿ ಏಕಕಾಲಕ್ಕೆ ಅನುಭೂತಿ, ಗೌರವ, ಸಂಕಟವನ್ನು ಹುಟ್ಟಿಸಬಲ್ಲದು. ಅದ್ಭುತ ಚಿತ್ರಕ ಶಕ್ತಿಯುಳ್ಳ ಇದನ್ನು ಟ್ಯಾಗೋರರ, ಶರಚ್ಚಂದ್ರರ ಕಾದಂಬರಿಗಳಂತೆ ಓದಬಹುದು. ಕನ್ನಡದಲ್ಲಿ ಇಂತಹ ಆತ್ಮಕಥೆಗಳಿಲ್ಲ.
-ಡಾ. ರಹಮತ್ ತರೀಕೆರೆ
Share

ಕನ್ನಡ ಭಾಷೆಯ ಕೆಲವು ಕಾದಂಬರಿಗಳಲ್ಲಿ ವೇಶ್ಯೆಯರ ಜೀವನ, ವೇಶ್ಯೆಯವರ ಉಲ್ಲೇಖ ಮತ್ತು ವೇಶ್ಯೆ ಎನ್ನುವ ಪದಬಳಕೆ ಇದ್ದರೂ ಇಂತಹ ಒಂದು ಆತ್ಮಕಥೆ ಇಲ್ಲವೆಂದು ನನ್ನ ಅನಿಸಿಕೆ.
ವೇಶ್ಯೆಯೊಬ್ಬಳು ತನ್ನ ಜೀವನದ ಎಲ್ಲಾ ಘಟನೆಗಳನ್ನು ಹಂಚಿದರೆ ಮಾತನಾಡುವವರ ಬಾಯಿಗೆ ಬೇಲಿಯೇ ಸರಿ.
ವೇಶ್ಯೆ ಎನ್ನುವ ಪದ ಕೇಲಿದ ಕೂಡಕೆ ಉಂಟಾಗುವ ಕುತೂಹಲ (ಅಸಹ್ಯವೆನ್ನುವವರ ಮಸಸ್ಸನ್ನು ತಿಳಿದೇ ಹೇಳಬಲ್ಲೆ – ಅದು ಅಸಹ್ಯವಲ್ಲ “ಕುತೂಹಲ”)ವನ್ನು ತಣಿಸ ಬಹುದಾ ಗೊತ್ತಿಲ್ಲ ಆದರೂ ಈ ಆತ್ಮಕಥೆಯೂ ತಿಳಿದ ವಿಷಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದಕ್ಕಾಗಿಯೇ ಬರೆದಿರುವಂತೆ ತೋರುತ್ತದೆ.
ಪ್ರತಿಷ್ಠಿತ ಕುಟುಂಬದ ಹೆಣ್ಣುಮಕ್ಕಳು ಹೇಗೆಲ್ಲ ವೇಶ್ಯಾವಾಟಿಕೆ ದಾರಿಗೆ ಹೋಗುತ್ತಾರೆ, ವಿದ್ಯಾವಂತ ಮಹಿಳೆ ಆದರೇನು ಅವಿದ್ಯಾವಂತ ಮಹಿಳೆಯಾದರೇನು……. ಹೀಗೆ ಹಲವಾರು ವಿಚಾರಗಳ ಬಗ್ಗೆ ತಿಳಿಸಿಕೊಟ್ಟ ಮಾನದಾ ದೇವಿ ಪ್ರಣೀತ ಅವರ “ವಿದ್ಯಾವಂತ ವೇಶ್ಯೆಯ ಆತ್ಮಕಥೆ”ಯನ್ನು ನೇರ ಬಂಗಾಳಿಯಿಂದ ಕನ್ನಡ ಭಾಷೆಗೆ ಅನುವಾದ ಮಾಡಿದ ಡಾ.ನಾಗ ಎಚ್ ಹುಬ್ಳಿ ಯವರು ಕನ್ನಡ ಸಾಹಿತ್ಯ ಓದುಗ ಲೋಕಕ್ಕೆ ಹೊಸ ಅರಿವನ್ನು ಮೂಡಿಸಿದ್ದಾರೆ.
Subscribe to our emails
Subscribe to our mailing list for insider news, product launches, and more.