Skip to product information
1 of 1

Maasti Venkatesha Iyyangar

ಉತ್ತರಕಾಂಡ ವಿಚಾರ

ಉತ್ತರಕಾಂಡ ವಿಚಾರ

Publisher -

Regular price Rs. 70.00
Regular price Rs. 70.00 Sale price Rs. 70.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
ಪ್ರಕಾಶಕರ ಅರಿಕೆ

ಮಾಸ್ತಿ ಸಾಹಿತ್ಯ ಸಂಪದದ ಪ್ರಕಟನೆಗಳಲ್ಲಿನ ಈ ''ರಾಮಾಯಣ ಸರಣಿ'' ಎಂಬ ಸಂಕಲನವು ರಾಮಾಯಣವನ್ನು ಕುರಿತ ಮಾಸ್ತಿಯವರ ಚಿಂತನೆಯ ಒಂದು ಸಮಗ್ರ ಸ್ವರೂಪ ಎನ್ನಬಹುದು. ಮಾಸ್ತಿಯವರು ನೀಡಿದ ರಾಮಾಯಣದ ಮೇಲಿನ ಉಪನ್ಯಾಸಗಳನ್ನು ಕೇಳಿದ ಕೆಲವು ಹಿರಿಯ ಸಾಹಿತಿಗಳು. ಇವು ಪ್ರಕಟವಾಗಲೇಬೇಕೆಂಬ ಆಗ್ರಹವನ್ನು ವ್ಯಕ್ತಪಡಿಸಿದ್ದರಿಂದ ೧೯೩೮ರಲ್ಲಿ ''ಆದಿಕವಿ ವಾಲ್ಮೀಕಿ' ಮೊದಲ ಬಾರಿಗೆ ಪ್ರಕಟವಾಯಿತು ಎಂದು ಅಜ್ಜ ಮಾಸ್ತಿ ಬರೆದಿದ್ದಾರೆ. ಈ ಕೃತಿಯೊಂದಿಗೆ, ಶ್ರೀರಾಮ ಪಟ್ಟಾಭಿಷೇಕ' (೧೯೭೨), ಸಂಕ್ಷಿಪ್ತ ವಾಲ್ಮೀಕಿ ರಾಮಾಯಣ (೧೯೮೧), ಎಂಬ ಇನ್ನೆರಡು ಪ್ರಮುಖ ಕೃತಿಗಳೂ, ಉತ್ತರಕಾಂಡ ವಿಚಾರ (೧೯೮೧) ಎಂಬ ದೀರ್ಘ ಪ್ರಬಂಧವೂ, ಪ್ರಕಟವಾಗಿದ್ದವು. ಈ ನಾಲ್ಕು ಕೃತಿಗಳೊಂದಿಗೆ ಶ್ರೀರಾಮನನ್ನು ಕುರಿತು ರಚಿಸಿದ 'ರಾಮನವಮಿ' ಎಂಬ ಕವನ, ''ನಾಮಮಹಿಮೆ' ಎಂಬ ತಿಳಿಹಾಸ್ಯದ ಕಥನ ಕವನ ಎರಡನ್ನು 'ಕಾವ್ಯಾರಾಮ' ಎಂಬ ಶೀರ್ಷಿಕೆಯಡಿ ಕೂಡಿಸಿ, ಎಂ.ವಿ.ಜೆ.ಕೆ, ಟ್ರಸ್ಟಿನ ಈ ರಾಮಾಯಣ ಸರಣಿಯ ಐದು ಕೃತಿಗಳ ಸಚಿತ್ರ ಗಣಕ ಪ್ರಕಟಣ ಆಗುತ್ತಿವೆ. ಮಹರ್ಷಿ, ಕವಿ ವಾಲ್ಮೀಕಿಗೆ ಸಮರ್ಪಿತವಾದ ಪೂಜನರೂಪದ ಅಷ್ಟಷಟ್ನದಿಗಳು ಮೂರನ್ನು 'ಮಲಾರ'ದಿಂದ (೧೯೩೩) 'ಆದಿಕವಿ ವಾಲ್ಮೀಕಿ' ಕೃತಿಗೆ ಮೊದಲಲ್ಲಿ ಸೇರಿಸಿದೆ.
View full details