1
/
of
2
Dr. K. S. Narayanacharya
ಉರ್ವಶೀ ಪುರೂರವ
ಉರ್ವಶೀ ಪುರೂರವ
Publisher - Sahithya Prakashana
Regular price
Rs. 360.00
Regular price
Rs. 360.00
Sale price
Rs. 360.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages - 312
Type - Paperback
Gift Wrap
Rs. 15.00
Gift Box
Rs. 225.00
Couldn't load pickup availability
ಕಥೆಯೂ ಬಹು ಮೂಲದ್ದಾಗಿದ್ದು, ಆಯಾಮಗಳಲ್ಲಿ, ಎಳೆಗಳಲ್ಲಿ, ಹೆಣಿಕೆಗಳಲ್ಲಿ ಅದನ್ನು ಈಗಣ ವಾಚಕರಿಗೆ ಹೊಂದಿಸಿ ಉಣಬಡಿಸಬೇಕಾಗಿದೆ. ಇಲ್ಲಿ ಶ್ರೀಮನ್ನಾರಾಯಣನ ನಾಭೀ ಕಮಲದಿಂದ ಚತುರ್ಮುಖ ಬ್ರಹ್ಮನು ಜನಿಸಿದ. ಬ್ರಹ್ಮನಿಂದ ಅತ್ರಿ, ಸೋಮ, ದುರ್ವಾಸರು ಜನಿಸಿದರು. ಸೋಮನಿಂದ (ಚಂದ್ರನಿಂದ) ಕ್ರಮವಾಗಿ ಬುಧ, ಇಳಾ, ಪುರೂರವ, ಮುಂದೆ ಚಂದ್ರವಂಶದ ದೊರೆಗಳ ಪರಂಪರೆ - ಇದೊಂದು ಎಳೆ. ಇದೇ ಮುಖ್ಯ. ಮತ್ತೊಂದರಲ್ಲಿ ಉಪರಿಚರ ವಸುವಿನ ವೃತ್ತಾಂತ, ಮತ್ಸ್ಯಗಂಧಿಯ ಚರಿತ್ರೆ, ಇದು ಒಂದು ಎಳೆ.
ಇನ್ನೊಂದರಲ್ಲಿ ಮಹಾಭಿಷ, ಶಂತನು, ಗಂಗೆ, ಇವರ ಪರಂಪರೆಯಲ್ಲಿ ಭೀಷ್ಮ ಜನನ ಮಹಾಭಾರತದಲ್ಲಿ ಬೆಸೆದುಕೊಂಡದ್ದು ಮತ್ತೊಂದು ಎಳೆ. ಮಗದೊಂದರಲ್ಲಿ ಸತ್ಯವತಿಯಲ್ಲಿ ಪರಾಶರರಿಂದ ಜನಿಸಿದ ವ್ಯಾಸರ ಕಥೆಯೂ ಇದೆ. ಈ ಹಂದರದಲ್ಲಿ ಭರತ, ವಿಶ್ವಾಮಿತ್ರ, ಶಕುಂತಲೆ,
ಈ ಪರಂಪರೆಯೂ ನಹುಷ, ಯಯಾತಿ, ಯದು, ಪುರು, ತುರ್ವಸು, ಅನು, ಧ್ರುಹ್ಯುಗಳ ಕಥೆಯೂ ಇದೆ. ನಡುವೆ ಅಗಸ್ತರ ವೃತ್ತಾಂತ, ವಸಿಷ್ಠ, ಜಮದಗ್ನಿ, ಪರಶುರಾಮ, ಹೈಹಯರು ಬ್ರಹ್ಮ-ಕ್ಷತ್ರ ತಾಕಲಾಟದ ಅನರ್ಥ ಘಟನೆಗಳೂ ಬರುತ್ತವೆ. ಎಲ್ಲವನ್ನೂ ಏಕಕಾಲಕ್ಕೆ ಹೇಳಲು ಬರೆಯಲು ಸಾಧ್ಯವಿಲ್ಲದೆ, ಎಳೆ ಎಳೆಯಾಗಿ ಬಿಡಿಸಿ ಬರೆಯಬೇಕಾದ ಕ್ಲಿಷ್ಟತೆ ಇಲ್ಲದೆ. ಮೊದಲು ಪುರೂರವ-ಉರ್ವಶೀ ವೃತ್ತಾಂತ ಋಗ್ವೇದೋಕ್ತವಾದುದು ಮರ್ಮಗಳ ಸಹಿತ ಇಲ್ಲಿ ಬಿನ್ನವಿಸಲ್ಪಡುತ್ತದೆ. ಕಥೆಯ ರೀತಿ, ಕಾದಂಬರಿಯಂತೆ, ಅನೇಕ ಅಧ್ಯಾಯಗಳಲ್ಲಿ ಹಂಚಿ ಹರಿಯಲಿದೆ.
-ಕೆ. ಎಸ್. ನಾರಾಯಣಾಚಾರ್ಯ (ಭೂಮಿಕೆಯಿಂದ)
Share

Subscribe to our emails
Subscribe to our mailing list for insider news, product launches, and more.