Cheemanahalli Rameshababu
ಟೈರ್ಸಾಮಿ
ಟೈರ್ಸಾಮಿ
Publisher -
- Free Shipping Above ₹400
- Cash on Delivery (COD) Available*
Pages - 231
Type - Paperback
Couldn't load pickup availability
ಓದುಗನನ್ನು ತನ್ಮಯಗೊಳಿಸಿಕೊಂಡು, ನೈಜತೆಯ ಭಾವನೆಯನ್ನು ಹುಟ್ಟಿಸುವುದು ಕಥನದ ಪ್ರಾಥಮಿಕ ಲಕ್ಷಣ ಮಾತ್ರವಲ್ಲ; ಇದು ಕಥನದ ಜೀವಂತಕೆಯೂ ಹೌದು ರಮೇಶಬಾಬು ಅವರ ಟೈರ್ಸಾಮಿ ಇಂಥ ಪ್ರಖರವಾದ ಜೀವಂತಿಕೆಯನ್ನು ತನ್ನ ಉದ್ದಕ್ಕೂ ಪ್ರದರ್ಶಿಸುತ್ತದೆ. ಇಂಥದನ್ನು ಸಾಧಿಸುವುದು, ಕಥನಗಾರಿಕೆ ಕುರಿತ ಬಹುದೊಡ್ಡ ಪರೀಕ್ಷೆಯೊಂದರಲ್ಲಿ ಸಾಫಲ್ಯ ಪಡೆದುದರ ದ್ಯೋತಕವಾಗಿರುತ್ತದೆ. ಇಂಥ ಕಥೆಗಾರ, ಕಥೆಗಾರಿಕೆಯ ಬಗೆಗೆ ಅಪಾರ ನಂಬಿಕೆಯಿಂದ ತೊಡಗಿಕೊಳ್ಳುತ್ತಾನೆ ರಮೇಶಬಾಬು ಅಂತ ಕಥೆಗಾರರಲ್ಲಿ ಒಬ್ಬರು
ಈ ಮೊದಲ ಪರೀಕ್ಷೆಯಲ್ಲಿ ಗೆದ್ದು ಹೊರಡುವ ಕಥೆಗಾರನು. ಕಥನಗಾರಿಕೆಯಲ್ಲಿ ಬಳಸುವ ಭಾಷೆಯು ಅತ್ಯಂತ ಸಹಜ, ಅಲಾಜಾಲವಾದದ್ದು ಆಗಿರುತ್ತದೆ. ಹೇಗೆಂದರೆ ಮೀನುಗಳು ಅಳಿಯಾದ ಪರೋವರವೊಂದರ ನೀರಿನಲ್ಲಿ ನಿರಾತಂಕವಾಗಿ, ಯಾವ ಅಡೆತಡೆಗಳಿಲ್ಲದೆ ಅಲೆಗಳನ್ನೆಚ್ಛಿಸದೇ ಈಜುತ್ತವಲ್ಲ, ಹಾಗೆ ರಮೇಶಬಾಬು ತಮ್ಮ ಈ ಕಾದಂಬರಿಯುದ್ದಕ್ಕೂ ಇಂಥ ನಿರೂಪಣೆಯನ್ನು ಸಾಧಿಸುತ್ತಾರೆ. ಕಾದಂಬರಿಯಲ್ಲಿ ಬರುವ, ಸಾವನ್ನು ಕುರಿತ, ಪಾರಲೌಕ ಡಿಸ್ಕೋರ್ ನಂತಹ, ಗುರುತರವಾದ ನಿರೂಪಣೆಯಲ್ಲಿ ತೊಡಗುವ ಭಾಷೆಯೂ ಪಾರಿಭಾಷೆಯ ಯಾವ ಗಡಚುತನವನ್ನೂ ತೋರದೆ, ಅಳಿಯಾದ ನೀರಿನಂತೆ ಪಾರದರ್ಶಕವಾಗಿರುವುದನ್ನು ನೋಡಬಹುದು.
ರಾಘವೇಂದ್ರ ಪಾಟೀಲ
ಸಾಮಾನ್ಯವಾಗಿ ಊರೊಂದರ ವೃತ್ತಾಂತ ತೆರೆದುಕೊಳ್ಳುವುದು ಅರಳೀಮರದ ಅಡಿಯಲ್ಲಿ, ಆದರೆ '' ಕೃತಿ ತೆರೆದುಕೊಳ್ಳುವುದು ಹುಣಸೇಮರದ ಬುಡದಲ್ಲಿ ಹುಣಸೆಯ ಹುಳಿ ಮನುಷ್ಯರ ಭಾವಜಗತ್ತಿನ ರಸಕಸಿಗಳನ್ನು ಸೂಚಿಸುವಂತಿದೆ ವೈಲ್ಲಾಮಿ ಓಡಿಸುವ ಸೈಕಲ್ಲಿನ ವೈರು ಬದುಕಿನ ಗತಿ ಮತ್ತು ಅವನತಿಯನ್ನು ಸೂಚಿಸುವಂತಿದೆ. ಕೈಯ ನಿರ್ದೇಶನಕ್ಕೆ ತಕ್ಕಂತೆ ಚಲಿಸುವ ವೈರು, ಕೈ ದಣಿದೊಡನೆ ನಿಶ್ಚಲವಾಗುತ್ತದೆ ಓಟದ ಪುಳಕ ಹಾಗೂ ಇದ್ದಕ್ಕಿದ್ದಂತೆ ಒದಗುವ ನಿಶ್ಚಲತೆ ಬದುಕಿನ ಎರಡು ತುಡಿಗಳೇ ಆಗಿವೆ.
ಕಾದಂಬರಿಯ ಎರಡನೇ ಗಮನಾರ್ಹ ಅಂಶ ನಿರೂಪಣಾ ತಂತ್ರಕ್ಕೆ ಸಂಬಂಧಿಸಿದ್ದು. ನಟರಾಜ ಎನ್ನುವ ಪತ್ರಕರ್ತ ಹಾಗೂ ಸತೀಶ ಎನ್ನುವ ಕಾದಂಬರಿಕಾರನ ಕಣ್ಣಲ್ಲಿ ಟೈರ್ಸಾಮಿ ಬದುಕು ತೆರೆದುಕೊಳ್ಳುತ್ತದೆ. ಪತ್ರಕರ್ತನ ಕಣ್ಣು ವಸ್ತುಸ್ಥಿತಿಯದಾದರೆ, ಕಾದಂಬರಿಕಾರನದು ವಾಸ್ತವದ ಜೊತೆಗೆ ಕಲ್ಪನೆಯನ್ನು ಕಸಿ ಮಾಡುವಂತಹದ್ದು ಹೀಗೆ, ಕಾದಂಬರಿಕಾರನ ಸ್ವಾತಂತ್ರ್ಯದ ಜೊತೆಗೆ ವಸ್ತುಸ್ಥಿತಿಯ ಹಂಬಲಕ್ಕೂ ಕೃತಿಯಲ್ಲಿ ಅವಕಾಶವಿದೆ. ಇದರಿಂದಾಗಿ ನಿರ್ದಿಷ್ಟ ಅಂತರದಲ್ಲಿ ನಿಂತು, ಸಂಯಮದಿಂದ ಕಥೆಯನ್ನು ನಿರೂಪಿಸುವುದು ಸಾಧ್ಯವಾಗಿದೆ.
ಚ.ಹ.ರಘುನಾಥ
Share

Subscribe to our emails
Subscribe to our mailing list for insider news, product launches, and more.