Jayanth Kaikini
Publisher - ಅಂಕಿತ ಪುಸ್ತಕ
- Free Shipping above ₹200
- Cash on Delivery (COD) Available
Pages -
Type -
Couldn't load pickup availability
‘ತೂಫಾನ್ ಮೇಲ್’ ಸಾಹಿತಿ ಜಯಂತ ಕಾಯ್ಕಿಣಿ ಅವರ ಕಥಾಸಂಕಲನ. ಈ ಪುಸ್ತಕಕ್ಕೆ ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಬೆನ್ನುಡಿ ಬರೆದಿದ್ದಾರೆ. ಇಲ್ಲಿಯ ಕತೆಗಳ ಕುರಿತು ಬರೆಯುತ್ತಾ ಮಾನವೀಯ ಅಂತರಂಗವನ್ನು ಗ್ರಹಿಸುವ ಜಯಂತ ಕಾಯ್ಕಿಣಿಯವರ ನೋಟ ವಿಶಿಷ್ಟವಾದದ್ದು. ಸಣ್ಣ ಊರಿನಿಂದ ಬಂದವರಾಗಿದ್ದೂ ಜಯಂತ ನಗರ ಜೀವನವನ್ನು ನೋಡುವ ಬಗೆ ಕನ್ನಡಕ್ಕೆ ಹೊಸತಾಗಿದೆ. ಅವರ ಕತೆಗಳ ಕಳಕಳಿ, ಚಲನೆಯ ಲಯ, ಹೊಮ್ಮುವ ಚೈತನ್ಯ ಎಲ್ಲ ಅವರದೇ ಆಗಿದೆ. ಓದಬೇಕು ಅನ್ನಿಸುವ ಅಪರೂಪದ ಸೆಳೆತದ ಲೇಖಕ ಜಯಂತ’ ಎಂದಿದ್ದಾರೆ ಕಾರ್ನಾಡ್.
ಈ ಕೃತಿಯಲ್ಲಿ ಕಾಯ್ಕಿಣಿ ಅವರ ನೋ ಪ್ರೆಸೆಂಟ್ಸ್ ಪ್ಲೀಸ್, ಕಣ್ಮರೆಯ ಕಾಡು, ಪಾರ್ಟನರ್, ಭಾಮಿನಿ ಸಪ್ತಪದಿ, ಕನ್ನಡಿ ಇಲ್ಲದ ಊರಲ್ಲಿ, ತೂಫಾನ್ ಮೇಲ್, ಬಕುಲ ಗಂಧ, ಬಾವಿಯಲ್ಲೊಂದು ಬಾಗಿಲು, ಗೇಟ್ ವೇ, ಟಿಕ್ ಟಿಕ್ ಗೆಳೆಯ ಹಾಗೂ ಒಪೆರಾ ಹೌಸ್ ಹೀಗೆ ಹನ್ನೊಂದು ಕತೆಗಳು ಸಂಕಲನಗೊಂಡಿವೆ.
