Dr. D. V. Guruprasad
ತ್ರಿಕೋಣ ಪ್ರೇಮ ತಂದ ದುರಂತ
ತ್ರಿಕೋಣ ಪ್ರೇಮ ತಂದ ದುರಂತ
Publisher - Sahithya Prakashana
- Free Shipping Above ₹400
- Cash on Delivery (COD) Available*
Pages - 112
Type - Paperback
Couldn't load pickup availability
ನಾನು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಮಯದಿಂದಲೂ ಅಂದರೆ ಹಲವಾರು ದಶಕಗಳ ಹಿಂದಿನಿಂದಲೂ ವ್ಯಕ್ತಪಡಿಸುತ್ತಿರುವ ಸ್ಪಷ್ಟ ನಿಲುವೇನೆಂದರೆ ಅಪರಾಧ ತಡೆ ಅಪರಾಧ ಪತ್ತೆಗಿಂತ ಬಹುಮುಖ್ಯ ಎನ್ನುವುದನ್ನು ಅಪರಾಧವಾದ ನಂತರ ಅದನ್ನು ಪತ್ತೆ ಮಾಡುವುದಕ್ಕಿಂತ ಅಪರಾಧವಾಗದಂತೆ ಎಚ್ಚರವಹಿಸುವುದೇ ಅತ್ಯಂತ ಉತ್ತಮ ಉಪಾಯ. ಈ ಕಾರಣಕ್ಕಾಗಿ ನಾನು ಸಾರ್ವಜನಿಕರಿಗೆ ಬಗೆಬಗೆಯ ಅಪರಾಧಗಳ ಬಗ್ಗೆ ಹಾಗೂ ಅಪರಾಧಿಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಾ ಬರುತ್ತಿದ್ದೇನೆ. ಇವನ್ನು ಬಿಡಿ ಲೇಖನಗಳ ಮೂಲಕವೂ, ಅಂಕಣಗಳ ಮೂಲಕವೂ, ಪುಸ್ತಕಗಳ ಮೂಲಕವೂ ಹಂಚಿಕೊಳ್ಳುತ್ತಾ ಬಂದಿದ್ದೇನೆ.
ಸುಮಾರು ನಾಲ್ಕೂವರೆ ವರ್ಷಗಳಿಂದ ನಾನು 'ವಿಜಯವಾಣಿ' ಪತ್ರಿಕೆಯಲ್ಲಿ ಪ್ರತಿ ಭಾನುವಾರವೂ 'ಆ ಕ್ಷಣ' ಎಂಬ ಹೆಸರಿನ ಅಂಕಣವನ್ನು ಬರೆಯುತ್ತಿದ್ದೇನೆ.
ಈ ಅಂಕಣದ ಪ್ರತಿ ಲೇಖನದಲ್ಲೂ ಒಂದು ವಿಶೇಷವಾದ ಹಾಗೂ ಕುತೂಹಲಕರವಾದ ಅಪರಾಧದ ಬಗ್ಗೆ ತಿಳಿಸಿ, ಆ ಅಪರಾಧ ಹೇಗಾಯಿತು.
ಅಪರಾಧಿಗಳಿಗೆ ಯಾವ ಶಿಕ್ಷೆಯಾಯಿತು, ಮತ್ತು ಯಾವ ಕ್ಷಣದಲ್ಲಿ ಅಪರಾಧವಾಗುತ್ತದೆ ಮುಂತಾದ ಮಾಹಿತಿಗಳನ್ನು ಓದುಗರಿಗೆ ಕೊಡುತ್ತಾ ಬಂದಿದ್ದೇನೆ.
ಪ್ರತಿ ಲೇಖನದ ಕೊನೆಯಲ್ಲಿ ಹಿರಿಯರೊಬ್ಬರ ವಾಣಿಯನ್ನು ಕೊಡುತ್ತಿದ್ದೇನೆ. ಈ ನನ್ನ ಅಂಕಣ ಸಾಕಷ್ಟು ಜನಪ್ರಿಯವಾಗಿದ್ದು, ಪ್ರತಿ ವಾರವೂ ನನಗೆ ಈ ಮೇಲ್ ಮೂಲಕ ಬಹಳಷ್ಟು ಮೆಚ್ಚುಗೆಯ ಪತ್ರಗಳು ಬರುತ್ತಿವೆ.
-ಡಾ| ಡಿ. ವಿ. ಗುರುಪ್ರಸಾದ್, (ಲೇಖಕರ ಮಾತಿನಲ್ಲಿ...)
ತ್ರಿಕೋಣ ಪ್ರೇಮ
Share

Subscribe to our emails
Subscribe to our mailing list for insider news, product launches, and more.