Girimane Shyamarao
Publisher - ಗಿರಿಮನೆ ಪ್ರಕಾಶನ
- Free Shipping Above ₹200
- Cash on Delivery (COD) Available
Pages - 207
Type - Paperback
ನಮಸ್ಕಾರ-
ಮಲೆನಾಡು ಎಂದರೆ ಪ್ರಕೃತಿ ಮತ್ತು ಪ್ರಾಣಿಗಳೊಂದಿಗೆ ಹೊಸೆದುಕೊಂಡ ಬದುಕು. ಅಲ್ಲಿ ಮನುಷ್ಯರಿಗಿಂತ ಹೆಚ್ಚಾಗಿ ಪ್ರಾಣಿಗಳೇ ಬದುಕು ಕಟ್ಟಿಕೊಂಡಿರುತ್ತವೆ, ಅವಕ್ಕೆ ಮನುಷ್ಯರಿಗಿಂತ ವಿಭಿನ್ನವಾದ ಅವುಗಳದ್ದೇ ಆದ ಬದುಕಿದೆ. ಗುಹೆ, ಕಾಡು, ಪೊದೆ, ಮರದ ಪೊಟರೆ-ಟೊಂಗೆ, ಕಲ್ಲಿನ ಸಂದುಗೊಂದುಗಳು ಎಲ್ಲೆಂದರಲ್ಲಿ, ಕೊನೆಗೆ ತೇವಾಂಶವಿರುವ ಮಣ್ಣಿನೊಳಗೂ ಕೋಟ್ಯನುಕೋಟಿ ಜೀವಿಗಳು ಬದುಕು ಸವೆಸುತ್ತವೆ. ಆದರೆ ದೇವರು ನಮಗೆ ಕೊಟ್ಟ ಬುದ್ಧಿಯ ಬಲದಿಂದ ನಾವು ಅವುಗಳನ್ನು ನಿಯಂತ್ರಿಸುವುದರ ಜೊತೆಗೆ ಅವುಗಳ ನಾಶವನ್ನೂ ಮಾಡುತ್ತಿದ್ದೇವೆ.
'ಪ್ರಾಣಿ ಮತ್ತು ಮನುಷ್ಯರ ನಡುವಿನ ತಣ್ಣಗಿನ ಸಂಘರ್ಷದಲ್ಲಿ ಅಳಿವು ಉಳಿವಿನ ಪ್ರಶ್ನೆ ಅವಕ್ಕೆ ಮಾತ್ರ ಕೊನೆಗೂ ಅದರಲ್ಲಿ ಗೆದ್ದೆ ಎಂದು ಬೀಗುವುದು ಮನುಷ್ಯನೇ'
'ಆದರೆ ಅದು ಗೆದ್ದು ಸೋಲುವ ಪರಿ ಎನ್ನುವುದು ಮಾತ್ರ ಅವನಿಗೆ ತಿಳಿಯುತ್ತಿಲ್ಲ'
ಇದು ಮಲೆನಾಡಿನ ರೋಚಕಕತೆಗಳ ಸರಣಿಯ ಹದಿನೇಳನೆಯ ಕಂತು. ಇದರ ಜೊತೆಗೇ ಮನೋವೈಜ್ಞಾನಿಕ ಕಾದಂಬರಿಗಳ ಸರಣಿ ಕೂಡಾ ಮುಂದುವರೆಯುತ್ತಿದೆ.
-ಗಿರಿಮನೆ ಶ್ಯಾಮರಾವ್