B. Jeyamohan, To Kannada : Shanti. K. Appanna
ತಳಾತಳ
ತಳಾತಳ
Publisher - ಛಂದ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 252
Type - Paperback
Couldn't load pickup availability
ಜೆಯಮೋಹನ್ ಭಾರತದ, ಅಷ್ಟೇ ಅಲ್ಲ ಜಗತ್ತಿನ ಒಬ್ಬ ಅಪ್ರತಿಮ ಕತೆಗಾರ. ಅವರು ಬರೆದಿದ್ದನ್ನು ಓದಿ ಹುಚ್ಚು ಹಿಡಿದವನಂತೆ ಅಲೆದಿದ್ದೆ. ಒಂದೋ ಅವರಂತೆಯೇ ಬರೆಯಬೇಕು, ಇಲ್ಲವೇ ಅವರನ್ನು ಕೊಂದು ಬಿಡಬೇಕು ಎಂದು ಯೋಚಿಸಿದ್ದೆ.
-ಕಮಲಹಾಸನ್
ಜೆಯಮೋಹನ್ ಅವರು ಸತ್ಯಕ್ಕೆ ಮುಸುಕೆಳೆಯದೆ, ಅದರ ಉಗ್ರ ಸ್ವರೂಪವನ್ನು ಹಸಿಯಾಗಿಯೇ ನಮ್ಮಮುಂದಿಡುತ್ತಾರೆ. ಅವರ ಕೃತಿಗಳನ್ನು ಓದದಿದ್ದರೆ ಸಮಕಾಲೀನ ಭಾರತವನ್ನು ಕುರಿತ ನಮ್ಮ ಅರಿವು ಅಪೂರ್ಣವಾಗಿ ಉಳಿಯುತ್ತದೆ.
-ವಿವೇಕ ಶಾನಭಾಗ
ಮನುಷ್ಯ ವರ್ತನೆಯ ತಳಾತಳವನ್ನು ದರ್ಶಿಸುವ ಕಾದಂಬರಿ ಇದು. ಪ್ರತಿ ಪಾತ್ರವೂ ಬಾಹ್ಯದಲ್ಲಿ ನಮ್ಮನಿಮ್ಮೊಂದಿಗೆ ಸುಳಿದಾಡುವ ವ್ಯಕ್ತಿಗಳಂತೆ ಕಂಡರೂ ಅವರ ಭಾವಲೋಕವು ಮಾತ್ರ ನಮ್ಮ ಊಹೆಗೂ ದಕ್ಕದ ಪಾತಾಳಲೋಕದಲ್ಲಿರುತ್ತದೆ. ಅಲ್ಲಿ ಕತ್ತಲೆಗೂ ಬೆಳಕಿಗೂ ಹೇಳಿಕೊಳ್ಳುವ ವ್ಯತ್ಯಾಸವಿಲ್ಲ, ಹಾಗೇ ಬದುಕಿಗೂ ಸಾವಿಗೂ. ಈ ಪಾತ್ರಗಳನ್ನು ಸ್ವೀಕರಿಸುವ ಬಗೆ ಹೇಗೆ?
ಬಲು ಭಿನ್ನವಸ್ತುವಿನ ತೀಕ್ಷ್ಯನಿರೂಪಣೆಯ ಕಾದಂಬರಿ ಇದು. ಕನ್ನಡ ಓದುಗರು ಗಮನಿಸಲೇಬೇಕಾದ ಕೃತಿಯಿದು.
-ಎಂ.ಆರ್. ದತ್ತಾತ್ರಿ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.