Skip to product information
1 of 2

R. K. Shanubhog

ಸುನಾಮಿಯ ಸುಳಿಯಲ್ಲಿ

ಸುನಾಮಿಯ ಸುಳಿಯಲ್ಲಿ

Publisher - ಮನೋಹರ ಗ್ರಂಥಮಾಲಾ

Regular price Rs. 60.00
Regular price Rs. 60.00 Sale price Rs. 60.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 78

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಐವತ್ತೇಳು ವರ್ಷ ವಯಸ್ಸಿನ ರಾಜಗೋಪಾಲ ಕೃಷ್ಣರಾವ್ ಶಾನಭೋಗ (ಆರ್. ಕೆ. ಶಾನಭೋಗ) ಧಾರವಾಡದವರು. ಇವರು ಬರೆದಿರುವ ಸುಮಾರು ನೂರೈವತ್ತು ಮಕ್ಕಳ ಕವನಗಳು, ಕತೆ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಣಗೊಂಡಿವೆ.

ಶಾನಭೋಗರ ನಾಲ್ಕು ಪುಸ್ತಕಗಳು ಈ ವರೆಗೆ ಪ್ರಕಟಗೊಂಡಿವೆ. ಇವರ ಮೊದಲ ಪ್ರಕಟಿತ ಮಕ್ಕಳ ನಾಟಕ 'ಅಪೂರ್ವ'ಕ್ಕೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು "ಮಕ್ಕಳ ರತ್ನ" ಪ್ರಶಸ್ತಿ ಪಡೆದಿದೆ.

ಇವರ ನಾಟಕ "ಪಾರಿತೋಷ" ಸುಮಾರು ಹದಿನಾಲ್ಕು ಪ್ರದರ್ಶನಗಳನ್ನು ಉತ್ತರ ಕರ್ನಾಟಕದ ವಿವಿಧ ಊರುಗಳಲ್ಲಿ ಪ್ರದರ್ಶನ ಕಂಡಿದೆ.

ಇನ್ನು ಮಕ್ಕಳ ಸಾಹಿತ್ಯದಲ್ಲಿ ವಿರಳವಾಗಿರುವ 'ಪ್ರವಾಸ ಕಥನ' ಮತ್ತು ಕಿರು ಕಾದಂಬರಿಯನ್ನು ಬರೆಯುವ ಉದ್ದೇಶವಿಟ್ಟುಕೊಂಡಿದ್ದಾರೆ. 

ಆರ್.ಕೆ ಶಾನಭೋಗ ಮಕ್ಕಳ ಸಾಹಿತ್ಯದ ಹಲವಾರು ಕಾರ್ಯಕ್ರಮಗಳನ್ನು ಆಕಾಶವಾಣಿ ಕೇಂದ್ರದ ಮೂಲಕ ನಡೆಸಿಕೊಟ್ಟಿದ್ದಾರೆ. ೨೦೦೧ನೇ ವರ್ಷದ ಸಾಹಿತ್ಯ ಅಕಾಡೆಮಿಯ ಮಕ್ಕಳ ಸಾಹಿತ್ಯ ಸಂಚಿಕೆಯ ಗೌರವ ಸಂಪಾದಕರೂ ಆಗಿದ್ದರು. ಇವರ ಕವನ 'ಕಡಲತೀರ' ಮಹಾರಾಷ್ಟ್ರ ರಾಜ್ಯದ ಎಂಟನೆಯ ತರಗತಿಯ ಪಠ್ಯಪುಸ್ತಕದ ಪಠನ ಕವನವಾಗಿ ಕಳೆದೆರಡು ವರ್ಷಗಳಿಂದಲೂ ಪಠಿಸಲಾಗುತ್ತಿದೆ.

View full details