Gunjuru Ramachandra Shastry
ಶ್ರೀ ಸ್ವರ್ಣಗೌರಿ ವ್ರತ ಕಥೆ
ಶ್ರೀ ಸ್ವರ್ಣಗೌರಿ ವ್ರತ ಕಥೆ
Publisher - ಶ್ರೀನಿಧಿ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 64
Type - Paperback
Couldn't load pickup availability
ವ್ರತ ಸೂಚನೆಗಳು
* ವ್ರತವನ್ನು ಆಚರಿಸುವಲ್ಲಿ ದೃಢ ಚಿತ್ತರಾಗಿರಬೇಕು.
* ಪೂಜಾ ಮಂಟಪವನ್ನು ತಳಿರು ತೋರಣ, ಬಾಳೇಕಂಬ, ರಂಗವಲ್ಯಾದಿಗಳಿಂದ ಸಿಂಗರಿಸಬೇಕು.
* ತನ್ನ ಶಕ್ತಿಗೆ ಲೋಪಬರದಂತೆ ಸಹಿ ಭಕ್ಷ್ಯಗಳನ್ನೂ, ಆಯಾಕಾಲದಲ್ಲಿ ದೊರೆಯತಕ್ಕ ಹಣ್ಣುಗಳನ್ನು
* ನಿವೇದಿಸಬೇಕಲ್ಲದೆ ಪೂಜೆಗೆ ಆಯಾಕಾಲಕ್ಕೆ ದೊರೆಯತಕ್ಕ ಹೂಗಳನ್ನು ಸಿದ್ಧಪಡಿಸಿರಬೇಕು.
* ಆವಾಹನಾ ಕಲಶಗಳನ್ನು ಸಾಕ್ಷಾತ್ ದೇವತಾಮೂರ್ತಿಗಳೆಂದೇ ಭಾವಿಸಬೇಕು. ಯಾವುದೇ ಕಾರಣಕ್ಕೂ ಆವಾಹನೆಯ ನಂತರ ಪೂಜಾ ಸಮಾಪ್ತಿಗೆ ಮೊದಲು ಕಲಶ, ವಿಗ್ರಹ, ಚಿತ್ರಪಟಗಳನ್ನು ಕದಲಿಸಬಾರದು.
* ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಒಂದು ದಿನ ಮುಂಚಿತವಾಗಿಯೇ ಸರಿಯಾದ ಕ್ರಮದಲ್ಲಿ ಹೊಂದಿಸಿಕೊಂಡು ಸಿದ್ಧವಾಗಿಟ್ಟುಕೊಂಡರೆ ವ್ರತವು ಸುಗಮವಾಗಿ ನೆರವೇರಲು ಸಹಕಾರಿಯಾಗುವುದು.
- ಪೂಜಾ ಮಂಟಪದಲ್ಲಿ ದೇವಾತಮೂರ್ತಿಯನ್ನು ಅಥವಾ ಆವಾಹನಾ ಕಲಶವನ್ನು ಪೂರ್ವಕ್ಕೆ ಅಭಿಮುಖವಾಗಿಡುವುದು ಉತ್ತಮ. ಉತ್ತರ ದಿಕ್ಕಿಗಿಡುವುದು ಮಧ್ಯಮ.
- * ಕಲಶದಲ್ಲಿ ನೀರು ತುಂಬಿ, ತುಳಸಿ, ಬಟ್ಲಡಿಕೆ, ನಾಣ್ಯ, ಪಂಚಪಲ್ಲವ (ಅಶ್ವಥ,ಆಲ, ಮಾವು, ತುಳಸಿ, ಅತ್ತಿಗಿಡದ ಚಿಗುರು) ಹಾಕಿ ಕಲಶವನ್ನು ಅಲಂಕರಿಸಬೇಕು. ನಂತರ ಕಲಶದ ಮೇಲೆ ಅರಿಶಿನ, ಕುಂಕುಮ ಹಚ್ಚಿದ ಜುಟ್ಟಿರುವ ಒಳ್ಳೆಯ ತೆಂಗಿನಕಾಯಿಯನ್ನು ಕೂರಿಸಿ ನಂತರ ಕಲಶವನ್ನು ಆಭರಣ, ಮಂಗಳದ್ರವ್ಯಾದಿಗಳಿಂದ ಅಲಂಕರಿಸಬೇಕು.
* ಪ್ರತಿಯೊಂದು ಸಲ ನೀರಾಜನ ಮಾಡುವಾಗಲೂ ಪ್ರತ್ಯೇಕ ಬತ್ತಿಗಳನ್ನೇ ಬಳಸಬೇಕು.
Share

Subscribe to our emails
Subscribe to our mailing list for insider news, product launches, and more.