Skip to product information
1 of 2

Dr. Ambaprasad Tejaswi

ಶ್ರೀ ಪ್ರತ್ಯಂಗಿರಾ ವಜ್ರ ಕವಚ ಸ್ತೋತ್ರ

ಶ್ರೀ ಪ್ರತ್ಯಂಗಿರಾ ವಜ್ರ ಕವಚ ಸ್ತೋತ್ರ

Publisher - ಶ್ರೀನಿಧಿ ಪ್ರಕಾಶನ

Regular price Rs. 50.00
Regular price Rs. 50.00 Sale price Rs. 50.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 90

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಪರಿಪೂರ್ಣವಾದ ಈ ನಮ್ಮ ಬ್ರಹ್ಮಾಂಡವನ್ನು ಪಾಲಿಸುತ್ತಿರುವ ಆದಿಶಕ್ತಿ ಅಂಶಗಳಾದ ಜಗನ್ಮಾತೆ, ಜಗಜ್ಜನನಿ, ಶ್ರೀಚಕ್ರಪುರವಾಸಿನಿಗೆ ನಮೋನ್ನಮಃ

ಶಕ್ತಿಸ್ವರೂಪಿಣಿಯಾದ ದೇವಿಯು ಲೋಕಕಲ್ಯಾಣಾರ್ಥವಾಗಿ ಅದೆಷ್ಟೋ ಅವತಾರಗಳನ್ನು ಧರಿಸಿದ್ದಾಳೆ. ಅವುಗಳಲ್ಲಿ ಶ್ರೀ ಪ್ರತ್ಯಂಗಿರಾ ದೇವಿಯ ಅವತಾರವು ಸರ್ವಶ್ರೇಷ್ಠವಾಗಿದೆ. ಆದಿಯಲ್ಲಿ ವಿಕ್ರಮಾದಿತ್ಯನು ಈಕೆಯ ಆರಾಧನಾನುಷ್ಠಾನ -ದಿಂದಲೇ ಅತಿ ಭಯಂಕರವಾದ ಬೇತಾಳವನ್ನು ವಶಿಸಿ, ಸರ್ವಥಾ ವಿಜಯವನ್ನು ಸಾಧಿಸಿದ.

ದಶ ಮಹಾವಿದ್ಯೆಗಳಲ್ಲಿ ಛಿನ್ನಮಸ್ತಾ ಸ್ವರೂಪಿಣಿಯಾಗಿಯೂ, ನವದುರ್ಗೆಯರಲ್ಲಿ ಚಂದ್ರಘಂಟಾಳಾಗಿಯೂ, ಸಪ್ತಮಾತೃಕೆಯರಲ್ಲಿ ಚಂಡೀ ಅವತಾರಳಾಗಿರುವವಳು ಪರಾಂಬಿಕೆಯಾದ ಸಾಕ್ಷಾತ್ ಶ್ರೀ ಪ್ರತ್ಯಂಗಿರಾ ಅಮ್ಮನವರೇ. ಸಕಲ ಬಲಿಹರಣಕ್ಕೂ ಈಕೆಯೇ ಸಾಕ್ಷೀಭೂತಳು. ಉಗ್ರನರಸಿಂಹನಿಗೂ ಈಕೆಯೇ ಆರಾಧ್ಯದೈವ. ನಿತ್ಯ ಯೌವನೆಯಾದ್ದರಿಂದಲೇ ಈಕೆಯು ಷೋಡಶೀ ರೂಪಿಣಿಯಾಗಿ ಅಲಂಕಾರಪ್ರಿಯಳಾಗಿದ್ದಾಳೆ.

ಹಿರಣ್ಯಕಶಿಪುವಿನ ಸಂಹಾರದ ನಂತರ ನೃಸಿಂಹಾವತಾರಿ ಶ್ರೀ ಮಹಾವಿಷ್ಣುವು ಮಹಾ ಉಗ್ರರೂಪ ತಳೆದಿರಲು ಬ್ರಹ್ಮಾಂಡವೇ ಕಂಪಿಸುವಂತಾಯಿತು. ಆಗ ಪರಮೇಶ್ವರನು ಲೋಕಕಲ್ಯಾಣಾರ್ಥವಾಗಿ ಪಕ್ಷಿರೂಪದ ಅವತಾರವಾದ ಶರಭೇಶ್ವರನ ರೂಪ ತಳೆದನು. ತನ್ನ ಒಂದು ರೆಕ್ಕೆಯಲ್ಲಿ ಶ್ರೀ ಶೂಲಿನಿ ಭದ್ರಕಾಳಿಯನ್ನೂ ಮತ್ತೊಂದು ರೆಕ್ಕೆಯಲ್ಲಿ ಶ್ರೀ ದೇವಿ ಪ್ರತ್ಯಂಗಿರೆಯನ್ನು ಧರಿಸಿ, ಉಗ್ರನಾರಸಿಂಹನನ್ನು ಶಾಂತಗೊಳಿಸಿದ. ತನ್ಮೂಲಕ ಸಮಸ್ತ ಜೀವರಾಶಿಗಳನ್ನು ಪರಿಪಾಲಿಸುವ ಹೊಣೆಹೊತ್ತ ಮಾತೃ ಸ್ವರೂಪಿಣಿಯೇ ಶ್ರೀ ಪ್ರತ್ಯಂಗಿರೆ.

View full details