T S P Sharma
ಶ್ರೀ ಗಾಯತ್ರಿ ಮಂತ್ರ (ಮಹಿಮೆ - ಅಷ್ಟ್ತೋತರ -ಸ್ತೋತ್ರ )
ಶ್ರೀ ಗಾಯತ್ರಿ ಮಂತ್ರ (ಮಹಿಮೆ - ಅಷ್ಟ್ತೋತರ -ಸ್ತೋತ್ರ )
Publisher - ಶ್ರೀನಿಧಿ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 56
Type - Paperback
Couldn't load pickup availability
ವೇದಗಳು ನಮ್ಮ ಸಂಸ್ಕೃತಿಯ ಮೂಲವಾಗಿದೆ. ವೇದಗಳಲ್ಲಿನ ಮಂತ್ರಗಳಲ್ಲಿ ಗಾಯತ್ರಿ ಮಂತ್ರಕ್ಕೆ ವಿಶೇಷ ಮಹತ್ವವಿದೆ. ಇದನ್ನು ಮಂತ್ರರಾಜ ಎಂದು ಹೇಳಲಾಗಿದೆ. ಪರಮಾತ್ಮನ ಮಂತ್ರ ರೂಪವೇ ಗಾಯತ್ರಿ ಮಂತ್ರವಾಗಿದೆ.
'ಗಾಯತ್ರಿ ಛಂದಸಾಮಹಂ '
"ವೇದಭಾಗದಲ್ಲಿ ನಾನು ಗಾಯತ್ರಿ ಮಂತ್ರ ರೂಪಿ'' ಎಂಬುದು ಶ್ರೀ ಕೃಷ್ಣನ ಮಾತು. ಗೀತೆಯಲ್ಲಿ ಭಗವಂತ ಗಾಯತ್ರಿಯನ್ನು ಸೂಕ್ಷ್ಮವಾಗಿ ಬಣ್ಣಿಸಿರುವುದು ಹೀಗೆಯೆ.
ಗಾಯತ್ರಿ ಪೂಜೆಯಲ್ಲಿ ಹಲವು ಬಗೆ. ಮಂತ್ರದೇವತೆ, ತ್ರಿಮೂರ್ತಿ ರೂಪಿಣಿ, ಪರಬ್ರಹ್ಮರೂಪಿಣಿ, ಸಂಧ್ಯಾದೇವತೆ, ಶಕ್ತಿದೇವತೆಯಾಗಿ ಗಾಯತ್ರಿ ಮಾತೆ ಧರ್ಮರಕ್ಷಣೆ ಮಾಡುತ್ತಿದ್ದಾಳೆ.
ಮಹಿಮಾನ್ವಿತ ಗಾಯತ್ರಿಯ ಬಗ್ಗೆ ಸಾಕಷ್ಟು ಸೋತ್ರ ಸಾಹಿತ್ಯವಿದೆ. ಈ ಸಂಗ್ರಹದಲ್ಲಿ ಗಾಯತ್ರಿ ಮಂತ್ರದ ಮಹತ್ವ, ವಿವರಣೆ ಹಾಗು ಕೆಲವು ಪ್ರಮುಖ ಸ್ತೋತ್ರಗಳನ್ನು ಅರ್ಥಸಹಿತ ನೀಡಲಾಗಿದೆ. ವೇದರೂಪಿಣಿ ಗಾಯತ್ರಿಯನ್ನು ಭಕ್ತಿಯಿಂದ ಸಂಧ್ಯಾವಂದನೆ ಜಪಗಳ ಮೂಲಕ ಆರಾಧಿಸುವ ಆಸ್ತಿಕ ಜನತೆ ಈ ಪುಸ್ತಕವನ್ನು ಸ್ವಾಗತಿಸಲೆಂದು ಕೋರುತ್ತೇನೆ.
ಬೆಂಗಳೂರು
- ಟಿ. ಎಸ್. ಪಿ. ಶರ್ಮಾ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.