Skip to product information
1 of 2

S. Pranesh

ಶ್ರೀ ಗಣಪತಿ ಅಥರ್ವಶೀರ್ಷಮ್

ಶ್ರೀ ಗಣಪತಿ ಅಥರ್ವಶೀರ್ಷಮ್

Publisher - ಶ್ರೀನಿಧಿ ಪ್ರಕಾಶನ

Regular price Rs. 20.00
Regular price Rs. 20.00 Sale price Rs. 20.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 28

Type - Paperback

Gift Wrap
Gift Wrap Rs. 15.00

ಅಥರ್ವಶೀರ್ಷ ಶ್ರೀ ಮಹಾಗಣಪತಿ ಮಂತ್ರವು ಗಣೇಶಾಥರ್ವ ಶೀರ್ಷ ಅಥವಾ ಗಣಪತ್ಯುಪನಿಷತ್ ಎಂದು ಪ್ರಖ್ಯಾತವಾಗಿರುವ ಮಂತ್ರವಾಗಿದ್ದು ಗಣಪತಿಯ ಉಪಾಸನೆಗೆ ಅತ್ಯಂತ ಶ್ರೇಷ್ಠವಾಗಿರುತ್ತದೆ. ಇದನ್ನು ಗುರು ಮುಖೇನ ಉಪದೇಶ ಪಡೆದು ಅನುಸಂಧಾನ ಮಾಡಬೇಕು. ಒಂದು ವೇಳೆ ಸರಿಯಾಗಿರುವ ಗುರುವು ದೊರಕದಿದ್ದ ಪಕ್ಷದಲ್ಲಿ ಸಾಕ್ಷಾತ್ ಸೂರ್ಯ ಭಗವಾನನ್ನೇ ಗುರುವೆಂದು ಭಾವಿಸಿ ಮಂತ್ರಗಳನ್ನು ಕಲಿತು ಉಚ್ಛರಿಸಬೇಕು. ಈ ಮಂತ್ರಗುಚ್ಛದಲ್ಲಿ ಒಟ್ಟು ಹದಿನಾರು ಮಂತ್ರಗಳಿರುತ್ತವೆ.

ಮೊದಲನೆಯ ಪ್ರಾರಂಭದ ಮತ್ತು ಕೊನೆಯ ಮಂತ್ರಗಳು ಶಾಂತಿ ಸೂಕ್ತವಾಗಿರುತ್ತದೆ. ನಂತರದ ಹತ್ತು ಮಂತ್ರಗಳು ಗಣಪತಿಯ ಮಹಾನ್ ರೂಪವನ್ನು, ಅತಿಶಯವಾಗಿರುವ ಗುಣಗಳನ್ನು ವರ್ಣಿಸುವ ಉಪನಿಷತ್ ವಾಕ್ಯಗಳಾಗಿದ್ದು ಮಂತ್ರಗುಚ್ಛದ ಪ್ರಮುಖ ತಿರುಳಿನ ಭಾಗವಾಗಿರುತ್ತದೆ.

ನಂತರದ ನಾಲ್ಕು ಮಂತ್ರಗಳು ಗಣೇಶಾಥರ್ವಶೀರ್ಷ ಮಂತ್ರ ಪಠಣೆಯನ್ನು ಶ್ರದ್ದೆಯಿಂದ ಪಠಿಸಿದಲ್ಲಿ ದೊರೆಯುವ ಫಲಗಳು ಏನೆಂಬುದನ್ನು ವಿವರಿಸುತ್ತದೆ.

ಗಣೇಶಾಥರ್ವಶೀರ್ಷದಲ್ಲಿ ಗಣಪತಿಯನ್ನು ಪರಬ್ರಹ್ಮ ಸ್ವರೂಪನೆಂದು ಸಾರಲಾಗಿದ್ದು, ಅಮೋಘವಾಗಿರುವ ಗಣಪತಿಯ ಶಕ್ತಿ, ಅನಂತ ವಿಶ್ವರೂಪ ದರ್ಶನಗಳಿಂದ ಸ್ತುತಿಸಲ್ಪಟ್ಟಿರುತ್ತದೆ. ಗಣಪತಿಯ ಉಪಾಸನೆಯ ವಿಧಿ ವಿಧಾನಗಳು, ಕಾಲ, ಕ್ರಮ, ವ್ರತ, ಹೋಮ ಮುಂತಾದವುಗಳ ಬಗ್ಗೆ ಹಾಗೂ ಉಪಾಸನೆಯಿಂದ ದೊರಕುವ ಫಲಗಳು ಏನೆಂಬುದನ್ನು ಕೊನೆಯ ನಾಲ್ಕು ಮಂತ್ರಗಳ ಫಲಶೃತಿಯಲ್ಲಿ ತಿಳಿಸಲ್ಪಟ್ಟಿದೆ. ಅಥರ್ವಶೀರ್ಷ ಗಣಪತಿ ಮಂತ್ರವನ್ನು ಸಾಕ್ಷಾತ್ಕರಿಕೊಂಡ ಗಣಕ ಋಷಿಯು, ಅದನ್ನು ತನ್ನಲ್ಲಿಯೇ ಇಟ್ಟುಕೊಳ್ಳದೆ ಜನಸಾಮಾನ್ಯರ ಕಷ್ಟಗಳನ್ನು ನಿವಾರಿಸಿಕೊಳ್ಳಲು ಜಗತ್ತಿಗೆ ಕೊಡುಗೆಯಾಗಿ ನೀಡಿರುತ್ತಾರೆ. ಗಣೇಶಾಥರ್ವಶೀರ್ಷ ಮಂತ್ರವು ನಿಚ್ಚದ್ದಾಯತ್ರಿ ಚಂದಸ್ಸಿನಲ್ಲಿ ಇರುತ್ತದೆ.

ಕಲಿಯುಗದಲ್ಲಿ ಜನರ ಕಷ್ಟ ಪರಂಪರೆಗಳನ್ನು ಶೀಘ್ರವಾಗಿ ಪರಿಹರಿಸಿ ವರವನ್ನು ಈಯುವ ಶ್ರೀ ಮಹಾ ಗಣಪತಿಯನ್ನು ಪ್ರಾರ್ಥಿಸಿ ಪೂಜಿಸಲು ಅಥರ್ವಶೀರ್ಷ ಮಹಾ ಗಣಪತಿ ಮಂತ್ರವು ಸರ್ವ ಶ್ರೇಷ್ಠವಾಗಿರುತ್ತದೆ.

ಇದನ್ನು ಎಲ್ಲರೂ ಪಾರಾಯಣ ಮಾಡಿ ಸುಕೃತ ಫಲವನ್ನು ಪಡೆಯಲು ಅನುವಾಗುವಂತೆ ದಪ್ಪಕ್ಷರದಲ್ಲಿ ಮುದ್ರಿಸಿ, ಅರ್ಥವ್ಯಾಪ್ತಿಯನ್ನು ನನ್ನಿಂದ ಬರೆಸಿ ಪ್ರಚುರ ಪಡಿಸುತ್ತಿರುವ "ಶ್ರೀನಿಧಿ ಪಬ್ಲಿಕೇಷನ್ಸ್" ಸಂಸ್ಥೆಗೆ ಶುಭವಾಗಲಿ.

View full details