Satyesh N. Bellur
ಸ್ಫೂರ್ತಿಯ ಚಿಲುಮೆ ಸರ್ ಎಂ. ವಿಶ್ವೇಶ್ವರಯ್ಯ
ಸ್ಫೂರ್ತಿಯ ಚಿಲುಮೆ ಸರ್ ಎಂ. ವಿಶ್ವೇಶ್ವರಯ್ಯ
Publisher - ಸಾವಣ್ಣ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 116
Type - Paperback
Couldn't load pickup availability
ಸಾಧಕರಲ್ಲಿ ಎರಡು ವಿಧ. ತಮ್ಮ ಸಾಧನೆಗೂ ಹಾಗೂ ತಾವು ಬದುಕಿದ ಪರಿಗೂ ಅಪಾರ ವ್ಯತ್ಯಾಸ ಇರುವವರು ಒಬ್ಬರಾದರೆ, ತಾವು ಸಾಧನೆಗೈದ ರೀತಿಯಲ್ಲಿಯೇ ಬದುಕಿಬಾಳಿದವರು ಇನ್ನೊಬ್ಬರು. ನಮ್ಮ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಎರಡನೆಯ ಗುಂಪಿನಲ್ಲಿರುವ ಅಗ್ರಮಾನ್ಯರಲ್ಲಿ ಒಬ್ಬರು.
ಈ ಕೃತಿ ಸರ್ ಎಂ.ವಿ. ಅವರ ಕುರಿತಾಗಿ. ಆದರೆ ಇಲ್ಲಿ ಅವರ ಬದುಕಿನ ವಿವರಗಳು ಇಲ್ಲ. ಅವರ ವೈಯಕ್ತಿಕವಾದ ವಿಚಾರಗಳಿಲ್ಲ. ಸೂಕ್ಷ್ಮವಾಗಿ ಹೇಳುವುದಾದರೆ, ಈ ಕೃತಿ ಅವರ ಬಯೋಡೇಟ ಅಲ್ಲವೇ ಅಲ್ಲ. ಈ ಎಲ್ಲ ಸಂಗತಿಗಳೂ ಗೂಗಲ್ನಲ್ಲಿ ಲಭ್ಯ. ಹಾಗದ್ದಿರೆ, ಈ ಕೃತಿಯಲ್ಲಿ ಇರುವುದಾದರೂ ಏನು?
ಸರ್ ಎಂ.ವಿ. ಅವರ ಬದುಕಿನಲ್ಲಿ ಅವರಿಗೆ ಎದುರಾದ ಅನೇಕ ಸವಾಲುಗಳ, ಸನ್ನಿವೇಶಗಳ ಉಲ್ಲೇಖವಿದೆ. ಅವುಗಳನ್ನು ಅವರು ಎದುರಿಸಿದ ರೀತಿ, ಬಲು ಕ್ಲಿಷ್ಟವಾದ ಯೋಜನೆಗಳನ್ನು ಸರಾಗವಾಗಿ ನಿಭಾಯಿಸಿದ ಪರಿ, ಇವೆಲ್ಲಕ್ಕೂ ಮೂಲವಾಗಿ ಅವರು ತಮ್ಮ ಜೀವನದಲ್ಲಿ ರೂಢಿಸಿಕೊಂಡದ್ದಿ ಮನಸ್ಥಿತಿ ಹಾಗೂ ಕಾರ್ಯವೈಖರಿ ಈ ಕೃತಿಯ ಜೀವಾಳ. ಸರ್ ಎಂ.ವಿ. ಅವರ ಕುರಿತು ಇಂತಹ ಸಂಗತಿಗಳನ್ನು ಓದಿದಾಗ ಕೇವಲ ಮನಸ್ಸಿಗೆ ಹಾಯ್ ಎನ್ನಿಸುವುದು ಮಾತ್ರವಲ್ಲ, ಇಲ್ಲಿನ ಪ್ರತಿಯೊಂದು ಲೇಖನದಿಂದಲೂ ನಮ್ಮೆಲ್ಲರ ಬದುಕಿಗೆ ಒಂದು ಪಾಠ ದೊರೆತೀತು. ನಮ್ಮ ಬದುಕಿನ ಮಾರ್ಗದಲ್ಲಿ ಬೆಳಕು ಕಂಡೀತು. ಹಾಗಾಗಿ, ಇಲ್ಲಿನ ಪ್ರತಿಯೊಂದು ಲೇಖನದಲ್ಲಿಯೂ ಸರ್ ಎಂ.ವಿ. ಅವರು ನಮ್ಮ ಯಶಸ್ಸಿಗೆ ನೀಡಿರುವ ಕಲಿಕೆ ಇದೆ. ಇದನ್ನು ಓದುವುದರಿಂದ ನಿನ್ನೆಗಿಂತ ಇಂದು, ಇಂದಿಗಿಂತ ನಾಳೆ ನಾವೆಲ್ಲ ಚೆಂದದಲ್ಲಿ ಬದುಕುತ್ತ ನಮ್ಮ ನಮ್ಮ ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಹೊಂದುವುದರಲ್ಲಿ ಸಂಶಯವಿಲ್ಲ.
ಇಂತಹ ಅತ್ಯಮೂಲ್ಯವಾದ ಕಲಿಕೆಗೆ ನಮಗಿರುವ ಕೆಲವೇ ಕೆಲವು ಮಹಿಮರಲ್ಲಿ- ಸರ್ ಎಂ.ವಿ. ಅವರು ಉತ್ತುಂಗದಲ್ಲಿ.
ಏಕೆಂದರೆ ಎಂದೆಂದಿಗೂ ಅವರ ಸಾಧನೆ, ಯುವಜನತೆಗೆ ಬೋಧನೆ.Share

Subscribe to our emails
Subscribe to our mailing list for insider news, product launches, and more.