V Ravishankara Hegade
ಶ್ರೀ ವೇದವ್ಯಾಸ ಪ್ರಣೀತ - ಶ್ರೀ ಭಾರತ ಸಾವಿತ್ರಿ
ಶ್ರೀ ವೇದವ್ಯಾಸ ಪ್ರಣೀತ - ಶ್ರೀ ಭಾರತ ಸಾವಿತ್ರಿ
Publisher -
- Free Shipping Above ₹400
- Cash on Delivery (COD) Available*
Pages - 52
Type - Paperback
Couldn't load pickup availability
ವಿದ್ವಾನ್ ರವಿಶಂಕರ ಹೆಗಡೆ ಅವರು 14 ಮಾರ್ಚ್ 1994 ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದೊಡ್ನಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ ಶಂಭುಲಿಂಗ ಹೆಗಡೆ, ತಾಯಿ ಸುವರ್ಣಾ. ಇವರು ತಮ್ಮ ಪ್ರಾಥಮಿಕ, ಪ್ರೌಢಶಾಲಾ ಹಾಗೂ ಪದವಿಪೂರ್ವ ವಿದ್ಯಾಭ್ಯಾಸವನ್ನು ಶಿರಸಿಯಲ್ಲಿ ಪೂರೈಸಿದರು. ಶ್ರೀ ರಾಜರಾಜೇಶ್ವರೀ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಕೃಷ್ಣ ಯಜುರ್ವೇದ ಹಾಗೂ ಪೂರ್ವಮೀಮಾಂಸಾ ಶಾಸ್ತ್ರದಲ್ಲಿ ಪದವಿಯನ್ನು ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. ಯಕ್ಷಗಾನ ತಾಳಮದ್ದಲೆ, ನಾಟಕ ಹಾಗೂ ಗಮಕ ವಾಚನದ ಹವ್ಯಾಸಿ ಕಲಾವಿದರಾದ ಇವರು ಕಳೆದ ಮೂರು ವರ್ಷಗಳಿಂದ ಕನ್ನಡ ಹಾಗೂ ಸಂಸ್ಕೃತದ ಪತ್ರಿಕೆಗಳಲ್ಲಿ ಅಂಕಣ ಮತ್ತು ಲೇಖನಗಳನ್ನು ಬರೆಯುತ್ತಾ ಬಂದಿದ್ದಾರೆ. ಮಂಗಳೂರು, ಕಾರವಾರ ಆಕಾಶವಾಣಿಗಳಲ್ಲಿ ಇವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ವೃತ್ತಿಯಲ್ಲಿ ಸಂಸ್ಕೃತ ಉಪನ್ಯಾಸಕರಾದ ಇವರು ಉತ್ತಮ ವಾಗ್ನಿಯೂ ಆಗಿದ್ದು, ಧಾರ್ಮಿಕ ಹಾಗೂ ಸಾಮಾಜಿಕ ವಿಷಯಗಳ ಕುರಿತು ನೂರಾರು ಉಪನ್ಯಾಸಗಳನ್ನು ರಾಜ್ಯದಾದ್ಯಂತ ನೀಡಿರುತ್ತಾರೆ. ಮಡದಿ ಪ್ರತಿಮಾ ಹಾಗೂ ಮಗಳು ಪ್ರಗಲ್ದಾರ ಜೊತೆ ಸಾಂಸಾರಿಕ ಜೀವನವನ್ನು ನಡೆಸುತ್ತಿದ್ದಾರೆ. ಪ್ರಸ್ತುತ ಇವರು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹಭಾಗಿತ್ವದ ಹೆಚ್.ಕೆ.ಎಸ್ ಪದವಿ ಪೂರ್ವ ಕಾಲೇಜು ಹಾಸನದಲ್ಲಿ ಸಂಸ್ಕೃತ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ
Share

Subscribe to our emails
Subscribe to our mailing list for insider news, product launches, and more.