Ta. Ra. Su.
ಶಿಲ್ಪಶ್ರೀ
ಶಿಲ್ಪಶ್ರೀ
Publisher - ಹೇಮಂತ ಸಾಹಿತ್ಯ
- Free Shipping Above ₹400
- Cash on Delivery (COD) Available*
Pages - 168
Type - Paperback
Couldn't load pickup availability
ಆಧುನಿಕ ಕನ್ನಡ ಸಾಹಿತ್ಯ ಕಂಡ ಗದ್ಯ ಶಿಲ್ಪಿ ತ.ರಾ.ಸು. ಅವರ ಭಾಷೆಯಲ್ಲಿ ತಾರುಣ್ಯದ ಹರಿತವಿದೆ, ಶೈಲಿಯಲ್ಲಿ ಜೇನಿನ ಸಿಹಿತನವಿದೆ, ಸಮಕಾಲೀನ ಪ್ರಜ್ಞೆ, ಸಂಸ್ಕೃತಿಯ ಪ್ರೇಮವಿದೆ. ಅವರ ಬರೆಹಗಳಲ್ಲಿ ಜಾನಪದೀಯ ಸೊಗಡಿದೆ. ಇತಿಹಾಸವನ್ನು ವೈಭವೀಕರಿಸುವ ಜಾಳ್ಮೆಯಿದೆ. ಗದ್ಯವನ್ನು ಕಾವ್ಯದೆತ್ತರ-ಕ್ಕೊಯ್ಯುವ ಅಸಾಮಾನ್ಯ ಪ್ರತಿಭೆಯಿದೆ. ಅವರು ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಕಾಲಖಂಡದ ಯಾವುದೇ ಕೃತಿ ಬರೆಯಲಿ ಅದರಲ್ಲಿ ಅವರು ಬದುಕನ್ನು ಇಡಿಯಾಗಿ, ಸಮಗ್ರವಾಗಿ ನೋಡುವುದನ್ನು ಕಾಣುತ್ತೇವೆ. ಅವರು ರಚಿಸಿದ ಪಾತ್ರಗಳು ಗಾಳಿಯಲ್ಲಿ ಹಾರಾಡುವ ತರಗೆಲೆಗಳಲ್ಲ. ಈ ಭುವಿಯಲ್ಲಿ ಬದುಕಿದ ಜೀವಂತ ವೃತ್ತಾಂತಗಳು. ಈ ನೆಲದ ನಕ್ಷತ್ರಗಳು.
ಚಿತ್ರದುರ್ಗದ ಪಾಳೆಯಗಾರರ ಕುರಿತು ಕಂಬನಿಯ ಕುಯಿಲಿನಿಂದ ದುರ್ಗಾಸ್ತಮಾನದ ವರೆಗೆ ಕಾದಂಬರಿಯ ಮಾಲೆಯನ್ನೇ ಬರೆದು ಅದೊಂದು ಮಹಾಸಾಮ್ರಾಜ್ಯವೆನ್ನುವಂತೆ ಚಿತ್ರಿಸಿ ಕಾದಂಬರಿಯ ಶಕ್ತಿಯನ್ನು ತೋರಿಸಿಕೊಟ್ಟರು. ಈ ಮಾಲಿಕೆಯ ಶಿಖರಪ್ರಾಯವಾದ ದುರ್ಗಾಸ್ತಮಾನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.
ಐತಿಹಾಸಿಕ ವಸ್ತುವನ್ನು ಚರಿತ್ರೆ ಮತ್ತು ಕಲ್ಪನೆಯ ಎರಕದಲ್ಲಿ ಸಜೀವಗೊಳಿಸುವ ಅವರ ಕಲೆಗಾರಿಕೆ ಕಾದಂಬರಿಯ ಜೀವಧ್ವನಿ. ಅದು ಈ ರಸಾನುಭವಿಯ ಭಾವಧ್ವನಿಯೂ ಹೌದು.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.