Srinivasa Murthy N. S.
Publisher -
- Free Shipping
- Cash on Delivery (COD) Available
Couldn't load pickup availability
ಕರ್ನಾಟಕ ರಾಜ್ಯ ಕಲೆಗಳ ನಾಡು, ಇಲ್ಲಿನ ಹಲವು ಕಲೆಗಳ ನಡುವೆ ವಾಸ್ತು ಶಿಲ್ಪವೂ ಒಂದು. ದೇವಾಲಯಗಳ ನಿರ್ಮಾಣದ ಪರಂಪರೆ ಕದಂಬರ ಕಾಲದಿಂದ ಇಲ್ಲಿಯವರೆಗೆ ವಿಸ್ಕೃತವಾಗಿ ಬೆಳೆದು ಬಂದಿದೆ. ದೇವಾಲಯ ಎಂದಾಗ ನಮಗೆ ನೆನಪಾಗುವುದು ಹಂಪೆ, ಬೇಲೂರು, ಹಳೇಬೀಡು, ಬಾದಾಮಿ, ಪಟ್ಟದಕಲ್ಲಿನಂತಹ ಪ್ರಸಿದ್ಧ ದೇವಾಲಯಗಳು. ಆದರೆ ಅಷ್ಟೇ ಅದ್ಭುತವಾದ ದೇವಾಲಯಗಳು ಅಥವಾ ಶಿಲ್ಪಗಳು ಜನರ ಗಮನಕ್ಕೆ ಬರದೇ ಹೋಗಿರುವುದು ದುರಂತ. ಅಂತಹ ದೇವಾಲಯಗಳನ್ನ ಪರಿಚಯಿಸುವ ದೃಷ್ಟಿಯಿಂದ ಪತ್ರಿಕೆಗೆ ಅಂಕಣಗಳನ್ನು ಬರೆಯಲಾರಂಭಿಸಿದೆ. ನನ್ನ ದೇವಾಲಯದ ಪಯಣದಲ್ಲಿ ನಾಡಿನ ಸುಮಾರು 1600 ಕ್ಕೂ ಅಧಿಕ ದೇವಾಲಯ ಭೇಟಿ ನೀಡಿ ಅದನ್ನ ಸಂಶೋಧನಕ್ಕೆ ಸೀಮಿತಗೊಳಿಸದೇ ಜನರಿಗೆ ತಲುಪಿಸುವ ಪ್ರಯತ್ನದಲ್ಲಿ ಬಂದ ಅಂಕಣಗಳು.
ಇದುವುರೆಗೆ ಸುಮಾರು 350 ಕ್ಕೂ ಅಧಿಕ ಅಂಕಣಗಳು ಬಂದ ಕಾರಣ ಅಯ್ದ 100 ಅಂಕಣ ಬರಹಗಳನ್ನು ಇಲ್ಲಿ ಸೇರಿಸಲಾಗಿದೆ. ಜನಮಾನಸದಲ್ಲಿರುವ ಪ್ರಸಿದ್ಧ ದೇವಾಲಯಗಳನ್ನ ಹೊರತುಪಡಿಸಿ ನೋಡಲೇ ಬೇಕಾದ ಹಲವು ದೇವಾಲಯಗಳ ಪರಿಚಯ ಇಲ್ಲಿದೆ. ಪುಸ್ತಕದ ಮಿತಿಯ ಕಾರಣ ಇನ್ನು ಉಳಿದ ದೇವಾಲಯಗಳ ಪರಿಚಯ ಮುಂದಿನ ಭಾಗದಲ್ಲಿ ಬರಲಿದೆ.
-ಶ್ರೀನಿವಾಸಮೂರ್ತಿ .ಎನ್. ಎಸ್.
ಪ್ರಕಾಶಕರು - ಕಮಲ ಎಂಟರ್ ಪ್ರೈಸಸ್
