Dr. Beluru Raghunandan
ಶರ್ಮಿಷ್ಠೆ
ಶರ್ಮಿಷ್ಠೆ
Publisher - ಕಾನ್ಕೇವ್ ಮೀಡಿಯಾ
- Free Shipping Above ₹400
- Cash on Delivery (COD) Available*
Pages -
Type - Paperback
Couldn't load pickup availability
ರಘುನಂದನ್
ಶರ್ಮಿಷ್ಠೆ
ದೇವಯಾನಿಯರ ಕಥೆಯಲ್ಲಿ ಮನುಷ್ಯರ ಮನದಾಳದಲ್ಲಿ ಹುದುಗಿರುವ ಆದಿಮ ವೈರುಧ್ಯ, ಪ್ರತಿರೋಧ ಮತ್ತು ವಿರೋಧಾಭಾಸಗಳು ಹಾಸು ಹೊಕ್ಕಾಗಿರುವುದರಿಂದ, ಅದು ಆಧುನಿಕ ಭಾರತೀಯ ಸಾಹಿತ್ಯ ನಾಟಕಗಳಲ್ಲಿ ಹೊಸ ಹೊಸ ಬಗೆಗಳಲ್ಲಿ ಮರುಕಳಿಸುತ್ತಾ ಬರುತ್ತಿವೆ. ಕನ್ನಡ ರಂಗಭೂಮಿಯಲ್ಲಿ ಈ ಹಿಂದೆ ಆದ್ಯರಂಗಚಾರ್ಯರು ಮತ್ತು ಗಿರೀಶ್ ಕಾರ್ನಾಡರು ಈ ಬಗೆಯ ನಾಟಕ ರಚನೆ ಮಾಡಿ ಅವು ರಂಗ ಪುಯೋಗಗಳಿಗೂ ಒಳಗಾಗಿವೆ. ಬೇಲೂರು ರಘುನಂದನ ಅವರು ಈ ಹಳೆಯ ವಸ್ತುವನ್ನು ಹೊಸ ದೃಷ್ಟಿಯಿಂದ ನೋಡಿದ್ದಾರೆ. ಇದು ಆದ್ಯರಂಗಾಚಾರ್ಯರ ನಾಟಕದಂತೆ ವೈಚಾರಿಕ ನಾಟಕವಲ್ಲ. ಅಥವಾ ಗಿರೀಶ್ ಕಾನ್ನಾಡರ ಯಯಾತಿಯಂತೆ ಪಾಶ್ಚಿಮಾತ್ಯ ಅಸ್ತಿತ್ವವಾದಿ ಸಿದ್ಧಾಂತಕ್ಕೆ ಮಾಡಿದ ಭಾರತೀಯ ಅನುವಾದವಲ್ಲ. ಪ್ರಸ್ತುತ ಕೃತಿಯಲ್ಲಿ ಕಥೆಯೊಳಗಿನ ಪಾತ್ರ ಸನ್ನಿವೇಶಗಳ ವೈರುಧ್ಯ. ಮತ್ತು ಆಳವಿಸ್ತಾರಗಳನ್ನು ನೀಡಿ ಈ ವ್ಯಸನಗಳ ಕಥೆಗೆ ಒಂದು ಇತ್ಯಾತ್ಮಕ ಅಂತ್ಯವನ್ನು ನೀಡಲು ರಘುನಂದನರು ಪ್ರಯತ್ನಿಸಿದ್ದಾರೆ. ಮೂಲ ಕತೆಯ ಜಾಡನ್ನೇ ಹಿಡಿದು ಮುಂದುವರೆದು ಪರಿಣಾಮದಲ್ಲಿ ಪೂರ್ತಿ ಬದಲಾವಣೆ ಮಾಡಿದ್ದಾರೆ. ಸಂಘಕ್ಷ ಅಂತಿಮವಾಗಿ ಸಹಬಾಳ್ವೆಯಲ್ಲಿ ಕೊನೆಗೊಳ್ಳುತ್ತದೆ. ಈ ಅಂತ್ಯವನ್ನು ಬಲವಂತವಾಗಿ ಹೇರದೆ ಮೂಲ ಕತೆಯ ನೂಲುಗಳನ್ನು ಹೊಸ ಬಗೆಯ ನೇಯ್ಗೆಯಲ್ಲಿ ಅಳವಡಿಸಿರುವುದು ಮೆಚ್ಚಿನ ವಿಷಯ. ಸಾಹಿತ್ಯವಾಗಿ ಶಕ್ತವಾಗಿರುವ ನಾಟಕ ಕೃತಿ ರಂಗಕೃತಿಯಾಗಿಯೂ ಬೆಳಗಲಿ ಎಂದು ಹಾರೈಸುತ್ತೇನೆ
-ಎಚ್.ಎಸ್.ಶಿವಪ್ರಕಾಶ್
Share

Subscribe to our emails
Subscribe to our mailing list for insider news, product launches, and more.