Shantha Nagraj
Publisher -
Regular price
Rs. 70.00
Regular price
Sale price
Rs. 70.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ತಮ್ಮ ಮಕ್ಕಳು ಇತರರಿಗಿಂತ ಹೆಚ್ಚು ಜಾಣರೆನಿಸಿಕೊಳ್ಳ ಬೇಕು, ಒಳ್ಳೆಯ ವಿದ್ಯಾವಂತರಾಗಬೇಕು, ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ, ಕೀರ್ತಿವಂತರಾಗಿ ಬಾಳಬೇಕು ಎಂದು ಹೆತ್ತವರು ಅಪೇಕ್ಷಿಸುವುದು ಸಹಜ. ಹೀಗೆ ತಮ್ಮ ಮಕ್ಕಳ ಒಳಿತನ್ನು ಬಯಸುವ ಅತ್ಯುತ್ಸಾಹದಲ್ಲಿ ಮಕ್ಕಳಿಗೂ ಅವರದೇ ಆದ ಒಲವು ಮತ್ತು ಆಶಯಗಳು ಇರುತ್ತವೆ ಎಂಬ ಸೂಕ್ಷ್ಮ ವಿಚಾರವನ್ನೇ ಮರೆತುಬಿಡುತ್ತಾರೆ. ಹೆತ್ತವರು ಹೇಳಿದ್ದನ್ನು ಮಕ್ಕಳು ಅನುಸರಿಸಬೇಕು ಎಂಬ ಕೆಟ್ಟ ಹಟಕ್ಕೆ ಬಿದ್ದು ಮಕ್ಕಳ ಸೂಕ್ಷ್ಮ ಮನಸ್ಸನ್ನು ಘಾಸಿಗೊಳಿಸುತ್ತಾರೆ. ಈ ಒತ್ತಡ ಅವರ ವ್ಯಕ್ತಿತ್ವದ ಮೇಲೆ ಹಾನಿಕಾರಕ ಪರಿಣಾಮ ಉಂಟುಮಾಡುತ್ತದೆ.
ಶಾಲಾ ಮಕ್ಕಳ ಪೋಷಕರು ತಮ್ಮ ಮಕ್ಕಳ ನಡವಳಿಕೆಗಳನ್ನು, ಒಲವನ್ನು ಅರಿತುಕೊಂಡು, ಹೆತ್ತವರೆಂಬ ಕಾರಣಕ್ಕೆ ಅವರ ಮೇಲೆ ಮಾನಸಿಕ ಒತ್ತಡ ಹಾಕದೆ, ಮಕ್ಕಳ ವ್ಯಕ್ತಿತ್ವ ಅರಳುವಂತೆ ಮಾಡಲು ಹೇಗೆ ಸಹಾಯಕರಾಗ ಬಹುದು ಎಂಬುದನ್ನು ತಿಳಿಸಿಕೊಡುವ ಈ ಕೃತಿಯನ್ನು ಶ್ರೀಮತಿ ಶಾಂತಾ ನಾಗರಾಜ್ ರಚಿಸಿದ್ದಾರೆ. ಶಿಕ್ಷಕಿಯಾಗಿ ಅನುಭವ ಇರುವ ಇವರ ಹಲವು ಕೃತಿಗಳು ಪ್ರಕಟವಾಗಿವೆ. ಅಂಕಣಕಾರ್ತಿಯಾಗಿ, ಆಪ್ತ ಸಮಾಲೋಚಕರಾಗಿ, ರಂಗ ತರಬೇತಿದಾರರಾಗಿ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಮಾಲೆಯಲ್ಲಿ ಇವರ 'ನೀವು ಯಶಸ್ವೀ ಗೃಹಿಣಿಯೆ?' ಎಂಬ ಕೃತಿ ಸಹ ಪ್ರಕಟವಾಗಿ ಹಲವು ಮುದ್ರಣಗಳನ್ನು ಕಂಡಿದೆ.
ಶಾಲಾ ಮಕ್ಕಳ ಪೋಷಕರು ತಮ್ಮ ಮಕ್ಕಳ ನಡವಳಿಕೆಗಳನ್ನು, ಒಲವನ್ನು ಅರಿತುಕೊಂಡು, ಹೆತ್ತವರೆಂಬ ಕಾರಣಕ್ಕೆ ಅವರ ಮೇಲೆ ಮಾನಸಿಕ ಒತ್ತಡ ಹಾಕದೆ, ಮಕ್ಕಳ ವ್ಯಕ್ತಿತ್ವ ಅರಳುವಂತೆ ಮಾಡಲು ಹೇಗೆ ಸಹಾಯಕರಾಗ ಬಹುದು ಎಂಬುದನ್ನು ತಿಳಿಸಿಕೊಡುವ ಈ ಕೃತಿಯನ್ನು ಶ್ರೀಮತಿ ಶಾಂತಾ ನಾಗರಾಜ್ ರಚಿಸಿದ್ದಾರೆ. ಶಿಕ್ಷಕಿಯಾಗಿ ಅನುಭವ ಇರುವ ಇವರ ಹಲವು ಕೃತಿಗಳು ಪ್ರಕಟವಾಗಿವೆ. ಅಂಕಣಕಾರ್ತಿಯಾಗಿ, ಆಪ್ತ ಸಮಾಲೋಚಕರಾಗಿ, ರಂಗ ತರಬೇತಿದಾರರಾಗಿ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಮಾಲೆಯಲ್ಲಿ ಇವರ 'ನೀವು ಯಶಸ್ವೀ ಗೃಹಿಣಿಯೆ?' ಎಂಬ ಕೃತಿ ಸಹ ಪ್ರಕಟವಾಗಿ ಹಲವು ಮುದ್ರಣಗಳನ್ನು ಕಂಡಿದೆ.
