Skip to product information
1 of 2

Vaibhav Purandare, To Kannada : B. S. Jayaprakasha Narayana

ಸಾವರ್ಕರ್ - ಹಿಂದೂತ್ವದ ಜನಕನ ನಿಜಕತೆ

ಸಾವರ್ಕರ್ - ಹಿಂದೂತ್ವದ ಜನಕನ ನಿಜಕತೆ

Publisher - ವಸಂತ ಪ್ರಕಾಶನ

Regular price Rs. 440.00
Regular price Rs. 440.00 Sale price Rs. 440.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 480

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಕ್ರಾಂತಿಕಾರಿ ದೇಶಭಕ್ತರೋ ಅಥವಾ ಬ್ರಿಟಿಷರೊಂದಿಗೆ ಷಾಮೀಲಾಗಿದ್ದವರೋ?

ಗಾಂಧೀಜಿಯ ಹತ್ಯೆಯ ಹಿಂದೆ ಇವರ ಕೈವಾಡವಿತ್ತೇ?

ಇವರೊಬ್ಬ ನಾಸ್ತಿಕರೋ ಅಥವಾ ಹಿಂದೂ ರಾಷ್ಟ್ರೀಯವಾದಿಯೋ?

ಭಾರತದ ಇತಿಹಾಸದಲ್ಲಿ ಇರುವ ನೂರಾರು ಚಿತ್ತಾಕರ್ಷಕ ವ್ಯಕ್ತಿಗಳಲ್ಲಿ ನಾಯಕ ದಾಮೋದರ ಸಾವರ್ಕರ್ ಕೂಡ ಒಬ್ಬರು. ತಮ್ಮ ಬದುಕಿನ ಪೂರ್ವಾರ್ಧದಲ್ಲಿ ಹಿಂದೂ-ಮುಸ್ಲಿಂ ಐಕ್ಯತೆಯ ಪ್ರಬಲ ಪ್ರತಿಪಾದಕರಾಗಿದ್ದ ಇವರು, ಬಳಿಕ ಹಿಂದುತ್ವದ ಅಧ್ವರ್ಯುವಾದರು! ಬ್ರಿಟಿಷರ ಆಳ್ವಿಕೆ ಕೊನೆಗೊಂಡು, ನಮಗೆ ಪೂರ್ಣಸ್ವರಾಜ್ಯವೇ ಬೇಕೆಂದು ಕಾಂಗ್ರೆಸ್ಸಿಗಿಂತ ಇಪ್ಪತ್ತು ವರ್ಷಗಳ ಮೊದಲೇ ಆಗ್ರಹಿಸಿದ ನಾಯಕರೆಂದರೆ ಸಾವರ್ಕರ್. ಬಳಿಕ ನಡೆದ ಕ್ವಿಟ್ ಇಂಡಿಯಾ ಚಳವಳಿಯಲ್ಲೂ ಇವರು ಪಾಲ್ಗೊಳ್ಳಲಿಲ್ಲ. ನಿಜ ಹೇಳಬೇಕೆಂದರೆ ನೆಹರು, ಅಂಬೇಡ್ಕರ್ ಮತ್ತು ಕಮ್ಯುನಿಸ್ಟರು ಕೂಡ ಇದರಿಂದ ದೂರವೇ ಇದ್ದರು! ತಮ್ಮ ತಾರುಣ್ಯದ ದಿನಗಳಲ್ಲಿ ಗಾಂಧೀಜಿಯವರೊಂದಿಗೆ ಸ್ನೇಹಸಂಬಂಧವನ್ನು ಹೊಂದಿದ್ದ ಸಾವರ್ಕರ್, ನಂತರದ ದಿನಗಳಲ್ಲಿ ಅವರ ಹಲವು ವಿಚಾರಗಳನ್ನು ತರ್ಕಬದ್ಧವಾಗಿ ವಿರೋಧಿಸಿದರು.

ಸಾವರ್ಕರ್ ತಮ್ಮ ಮಾತೃಭಾಷೆಯಾದ ಮರಾಠಿಯಲ್ಲಿ ಎಂಟು ಸಂಪುಟಗಳಷ್ಟು ಅಗಾಧ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ. ಆದರೆ, ಸಾವರ್ಕರ್ ಅವರಿಗೆ ಸಂಬಂಧಿಸಿದಂತೆ ಬಂದಿರುವ ಇದುವರೆಗಿನ ಯಾವೊಂದು ಕೃತಿಯೂ ಈ ಸಾಹಿತ್ಯ ರಾಶಿಯನ್ನು ಗಮನಿಸಿಲ್ಲ ಹೀಗೆ ಅಜ್ಞಾತವಾಗಿದ್ದ ಮರಾಠಿ ಪತ್ರಿಕೆಗಳು, ಸಾವರ್ಕರ್ ಅವರ ಅನೇಕ ಸಮಕಾಲೀನರ ಬರಹಗಳು, ನ್ಯಾಯಾಲಯ ಮತ್ತು ಸರಕಾರಿ ದಾಖಲಾತಿಗಳು, ಧ್ವನಿಮುದ್ರಣಗಳು ಇತ್ಯಾದಿಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ಮೂಲಲೇಖಕರು ಈ ಕೃತಿಯನ್ನು ರಚಿಸಿದ್ದಾರೆ. ಸಾವರ್ಕರ್ ಅವರಿಗೆ ಸಂಬಂಧಿಸಿದಂತೆ ಹೊಸಹೊಸ * ಸಂಗತಿಗಳನ್ನು ಬೆಳಕಿಗೆ ತಂದಿರುವುದು ಈ ಜೀವನಚರಿತ್ರೆಯ ಹೆಗ್ಗಳಿಕೆ. ಇಂತಹ ಕೃತಿಯನ್ನು' ಬಿ.ಎಸ್. ಜಯಪ್ರಕಾಶ ನಾರಾಯಣ ಅವರು ಅಷ್ಟೇ ಸಮರ್ಥವಾಗಿ, ತಿಳಿಗನ್ನಡದಲ್ಲಿ ಕನ್ನಡಕ್ಕೆ ತಂದಿದ್ದಾರೆ.

ಇಂತಹ ಕೃತಿಗಳು ಕನ್ನಡಕ್ಕೆ ಹೆಚ್ಚುಹೆಚ್ಚು ಬರಬೇಕು.

View full details