Dr. Sham. Ba. Jois
ಸತ್ - ತ್ಯ ಮತ್ತು ಸತ್ಯ
ಸತ್ - ತ್ಯ ಮತ್ತು ಸತ್ಯ
Publisher - ಶಂಬಾ ವಿಚಾರ ವೇದಿಕೆ
- Free Shipping Above ₹400
- Cash on Delivery (COD) Available*
Pages - 27
Type - Paperback
Couldn't load pickup availability
ವೇದಗಳು ಅಪೌರುಷೇಯವೆಂಬುದು ಭಾರತೀಯ ಸನಾತನಿಗಳ ಬಲವಾದ ನಂಬಿಕೆ. ಆದರೆ ಮುಖ್ಯವಾದ ಋಗ್ವೇದದ ಸಂಕಲನ ಒಂದೇ ಬಾರಿ ಆಗಿಲ್ಲ. ಅದನ್ನು ವಿಭಾಗಿಸಿ, ಹೊಂದಿಸುವ ಕಾರ್ಯ ವೈವಸ್ವತ ಮನ್ವಂತರದ ಕಾಲದಲ್ಲಿಯೇ ೨೮ ಬಾರಿ ನಡೆದಿದೆಯೆಂಬುದು ವಿಷ್ಣು ಪುರಾಣದಿಂದ ತಿಳಿದುಬರುತ್ತದೆ (೩-೩-೯-೧೦). ಇಂತಹ ಒಂದೊಂದು ಪ್ರಯತ್ನದಲ್ಲಿಯೂ ಪ್ರಚಲಿತ ಕಾಲಮಾನದ ಪ್ರಭಾವಿಗಳು ಅವರವರ ನಂಬಿಕೆ, ಅನುಕೂಲ, ಮೈಲುಗೈ ತೋರಿಸಲು ಸಾಕಷ್ಟು ಬದಲಾವಣೆಗಳನ್ನು ಮಾಡಿರುವ ಸಾಧ್ಯತೆಗಳಿವೆ. ಇವೆಲ್ಲದರ ಫಲಿತವೇ ಇಂದು ಭಾರತೀಯ ಸಮಾಜದಲ್ಲಿ ಕಂಡುಬರುವ ಅಗಾಧ ಪ್ರಮಾಣದ ಸಾಂಸ್ಕೃತಿಕ ಸ್ಥಿತ್ಯಂತರ.
ಇಂತಹ ಸ್ಥಿತ್ಯಂತರವು ಉಂಟಾದ ಬಗೆ, ಸಂಭವಿಸಿರ ಬಹುದಾದ ಬದಲಾವಣೆಯ ಬೇರುಗಳನ್ನು ಎಳೆಎಳೆಯಾಗಿ ಬಿಡಿಸಿ ತೋರಿಸಿದ್ದಾರೆ ಕನ್ನಡ ನಾಡು ಕಂಡ ಅಪ್ರತಿಮ ಸತ್ಯಾನ್ವೇಷಿ ಡಾ|| ಶಂ.ಬಾ. ಜೋಶಿಯವರು. ಜಾಗತಿಕ ಪುರಾತನ ಸಂಸ್ಕೃತಿಗಳ ಅವಲೋಕನ, ಸಂಸ್ಕೃತಿಯ ಸ್ವರೂಪವನ್ನು ಹಿಡಿದಿಟ್ಟಿರುವ ಭಾಷಿಕ ಪ್ರತಿಮೆಗಳ ಅಧ್ಯಯನ, ಈ ಕ್ಷೇತ್ರದಲ್ಲಿ ನಡೆದಿರುವ ವ್ಯಾಸಂಗದ ಲೋಪದೋಷಗಳನ್ನು ಎತ್ತಿ ತೋರಿಸುವ ಮೂಲಕ ನಮ್ಮ ನಡೆ-ನುಡಿಗಳಲ್ಲಿರುವ ವೈರುಧ್ಯವನ್ನೂ, ಸಾಮಾಜಿಕ ನೈತಿಕ ಅಧಃಪತನಕ್ಕೆ ಕಾರಣಗಳನ್ನೂ ಎತ್ತಿ ತೋರಿಸಿದ್ದಾರೆ.
Share

Subscribe to our emails
Subscribe to our mailing list for insider news, product launches, and more.