M. R. Dattatri
ಸರ್ಪಭ್ರಮೆ
ಸರ್ಪಭ್ರಮೆ
Publisher - ಅಂಕಿತ ಪುಸ್ತಕ
- Free Shipping Above ₹400
- Cash on Delivery (COD) Available*
Pages - 206
Type - Paperback
Couldn't load pickup availability
ನೋಡಿ, ನಿಮ್ಮ ಹುಬ್ಬುಗಳು ಮೇಲೆದ್ದವಲ್ಲವೇ, ಮನಸ್ಸಿನಲ್ಲಿ ಗೊಂದಲವು ತುಂಬಿಕೊಂಡಿತಲ್ಲವೇ? ಮಾನವ ವಿಜಯದ, ಅಸಾಮಾನ್ಯ ಸಾಮರ್ಥ್ಯದ ಕತೆಗಳು ಬೇಕು ಆದರೆ ಈ ಬಗೆಯ ಫ್ಯಾಂಟಸಿಯಲ್ಲ ಎಂದು ನಿಮ್ಮ ಮನಸ್ಸು ಆಗಲೇ ಚೀರುತ್ತಿರಬಹುದು. ಈ ಕಾರಣಕ್ಕೇನೇ ನಾನು ಇದನ್ನು ಯಾರಿಗೂ ಹೇಳಿರಲಿಲ್ಲ. ಕತೆ ಪ್ರಾರಂಭಿಸುವ ಮುನ್ನವೇ ನೀವು ನಿಮ್ಮ ತೀರ್ಮಾನಕ್ಕೆ ಬಂದು ಕತೆಯ ಪರಿಸಮಾಪ್ತಿ ಮಾಡಿಬಿಡುತ್ತೀರಿ. ದಯವಿಟ್ಟು ಕಾಯಿರಿ. ನಿಮ್ಮ ಕನಸಿನಲ್ಲಿ ಅನ್ಯಗ್ರಹ ಜೀವಿಗಳು ಕಾಣಿಸುತ್ತಿಲ್ಲ ಎಂದ ಮಾತ್ರಕ್ಕೆ ಈ ಗ್ರಹದ ಯಾವ ಜೀವಿಯ ಕನಸಿನಲ್ಲೂ ಕಾಣಿಸುವುದಿಲ್ಲ ಎಂದು ನಿಮ್ಮದಷ್ಟೇ ಅನುಭವವನ್ನು ಸಾರ್ವತ್ರಿಕಗೊಳಿಸಲು ಯಾರು ನಿಮಗೆ ಅಧಿಕಾರ ಕೊಟ್ಟರು?
..
ಪುತಿನರ “ಕಣಿವೆಯ ಮುದುಕ" ಎನ್ನುವ ಕವಿತೆಯಲ್ಲಿ ಮಳೆಮಿಂಚಿನ ಕತ್ತಲಕಾಡಿನಲ್ಲಿ ಒಂಟಿಯಾಗಿ ನಡೆಯುವ ಒಬ್ಬ ಹುಡುಗ ಅನಿರೀಕ್ಷಿತವಾಗಿ ಭೇಟಿಯಾಗುವ ಒಬ್ಬ ಮುದುಕನನ್ನು ಮನಸಾರೆ ಅರಿಯಲು ಅವನೊಂದಿಗೆ ಮೌನದಲ್ಲಿ ಹೆಜ್ಜೆ ಹಾಕುತ್ತಾನೆ. ಕವಿ ಅದ್ಭುತವಾಗಿ ಕವಿತೆಯನ್ನು ಮುಗಿಸುತ್ತಾರೆ - "ನುಡಿಯು ತಿಳುಹಲು ಬಲ್ಲುದೇನ; ಮೌನ ನುಡಿದಾ ದುಗುಡವ?". ಹಾಗೆ ನಿಮಗೂ ಎಷ್ಟು ಮಾತಿನಲ್ಲಿ ಮತ್ತು ಎಷ್ಟು ಮೌನದಲ್ಲಿ ನನ್ನ ಕತೆಯನ್ನು ದಾಟಿಸುತ್ತೇನೆಂದು ತಿಳಿದಿಲ್ಲ. ಎರಡಕ್ಕೂ ಶ್ರುತಿಗೊಂಡಿರಿ.
Share

Subscribe to our emails
Subscribe to our mailing list for insider news, product launches, and more.