Skip to product information
1 of 1

Maasti Venkatesha Iyyangar

ಸಂಕ್ಷಿಪ್ತ ವಾಲ್ಮೀಕಿ ರಾಮಾಯಣ

ಸಂಕ್ಷಿಪ್ತ ವಾಲ್ಮೀಕಿ ರಾಮಾಯಣ

Publisher -

Regular price Rs. 350.00
Regular price Rs. 350.00 Sale price Rs. 350.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
''ಆದಿಕವಿ ವಾಲ್ಮೀಕಿ' ಪುಸ್ತಕವನ್ನು ಬರೆಯಿಸುವ ದಿನಗಳಲ್ಲಿ (೧೯೩೮ರಲ್ಲಿ. ನನಗೆ ರಾಮಾಯಣದಲ್ಲಿ ವಾಲ್ಮೀಕಿಯದೇ ಅಹುದು ಎನ್ನಬಹುದಾದ ಭಾಗವನ್ನು ಒಂದು ಪುಸ್ತಕವಾಗಿ ಪ್ರಕಟಿಸಿದರೆ ಚೆನ್ನ ಆದೀತು ಎನ್ನಿಸಿತು. ಆ ಸುಮಾರಿನಲ್ಲಿ ಮದರಾಸಿನ ಶ್ರೀ ಜಿ.ಎ. ನಟೇಶನ್‌ರವರು ತಾವು ಪ್ರಕಟಿಸಿದ ''ಸಂಕ್ಷಿಪ್ತ ರಾಮಾಯಣ'' ಪುಸ್ತಕದ ಒಂದು ಪ್ರತಿಯನ್ನು ನನಗೆ ಕಳುಹಿಸಿಕೊಟ್ಟರು. ಅದನ್ನು ನೋಡಿ ನಾನು ಇಂಥ ಒಂದು ಸಂಕ್ಷಿಪ್ತ ರಾಮಾಯಣವನ್ನು ಕನ್ನಡ ಅರ್ಥದೊಂದಿಗೆ ಪ್ರಕಟಿಸಿದರೆ ನಮ್ಮ ಜನಕ್ಕೆ ಒಂದು ಸೇವೆ ಸಲ್ಲಿಸಿದಂತಾಗುತ್ತದೆ ಎಂದುಕೊಂಡೆನು. ಬೇರೆ ಕೆಲಸಗಳ ಮಧ್ಯದಲ್ಲಿ ಈ ಕೆಲಸವನ್ನು ಮುಂದಕ್ಕೆ ತಳ್ಳುತ್ತಾ ಬಂದದ್ದಾಯಿತು. ಈ ಅಂತರದಲ್ಲಿ "ಶ್ರೀರಾಮ ಪಟ್ಟಾಭಿಷೇಕ" ಕಾವ್ಯ ಪ್ರಕಟವಾಯಿತು. ಇತ್ತೀಚೆಗೆ ಉತ್ತರಕಾಂಡ ವಾಲ್ಮೀಕಿಯ ರಚನೆ ಅಲ್ಲ ಎಂದು ಪ್ರತಿಪಾದಿಸುವ ''ಉತ್ತರಕಾಂಡ ವಿಚಾರ" ಎಂಬ ವಿಮರ್ಶನ ಪ್ರಬಂಧವನ್ನು ರಚಿಸಿದ್ದಾಯಿತು. ಇದೆಲ್ಲ ಆಗಿ ಕಳೆದ ವರ್ಷ ನಾನು ವಾಲ್ಮೀಕಿಯ ಇಡೀ ಕಾವ್ಯವನ್ನು ಪ್ರಕಟಿಸುವ ಯೋಚನೆಯನ್ನು ಬಿಟ್ಟು ಸಂಕ್ಷೇಪಣದ ಕಾರ್ಯದಲ್ಲಿ ತೊಡಗಿ ಎರಡು ತಿಂಗಳಲ್ಲಿ ಅದನ್ನು ಮುಗಿಸಿದೆನು, ಭಾಷಾಂತರವನ್ನು ಹೇಳಿ ಬರೆಯಿಸಲು ಎರಡು ತಿಂಗಳು ಹಿಡಿಯಿತು. ಪುಸ್ತಕವನ್ನು ಇದೀಗ ನಮ್ಮ ಜನರ ಕೈಯಲ್ಲಿ ಇಡುತ್ತಿದ್ದೇನೆ.

-ಮಾಸ್ತಿ ವೆಂಕಟೇಶ ಅಯ್ಯಂಗಾರ್
View full details