Dr.A Madhava Udupa
ಸಮರಸವೇ ಜೀವನ
ಸಮರಸವೇ ಜೀವನ
Publisher -
- Free Shipping Above ₹400
- Cash on Delivery (COD) Available*
Pages - 100
Type - Paperback
Couldn't load pickup availability
ಆರ್ಷೇಯವಾಣಿ, ದಾಸವಾಣಿಗಳ ಸುಮಧುರ ಸಾಂಗತ್ಯವು ಈ ಕೃತಿಯನ್ನು ಸುಸಂಪನ್ನವಾಗಿಸಿದೆ. ಆರ್ಷೇಯವಾಣಿ ಎಂದರೆ ಋಷಿಮುನಿಪ್ರಣೀತ ವೇದ, ಉಪನಿಷತ್ತು, ಪುರಾಣಗಳ ಸಂದೇಶ, ವಿವಾಹದ ವಿಧಿ-ವಿಧಾನಗಳು ಅವುಗಳನ್ನೆಲ್ಲ ಒಳಗೊಂಡಿದ್ದು, ಪ್ರತಿಯೊಂದು ವಿಧಿ-ವಿಧಾನದ ಅರ್ಥ-ಉದ್ದೇಶಗಳ ಜೊತೆ ಆ ಉದ್ದೇಶ ಸಾರ್ಥಕವಾಗಲು ಆಚರಣೆ ಹೇಗಿರಬೇಕೆಂಬುದನ್ನೂ ಇಲ್ಲಿ ತಿಳಿಸಲಾಗಿದೆ. ಇನ್ನು ದಾಸವಾಣಿ ಎಂದರೆ ಕೀರ್ತನೆಗಳ ಮೂಲಕ ಹರಿದಾಸರಿತ್ತ ಸಂದೇಶ.
ಹರಿದಾಸರು ಅನೇಕರಿದ್ದರೂ ಇಲ್ಲಿ ದಾಸಶ್ರೇಷ್ಠರಾದ ಪುರಂದರದಾಸ, ಕನಕದಾಸ, ವಿಜಯದಾಸ, ಮಹಿಪತಿದಾಸರ ಸಂದೇಶಗಳನ್ನಷ್ಟೇ ಪರಿಗಣಿಸಲಾಗಿದೆ. ವ್ಯಕ್ತಿತ್ವವಿಕಸನಕ್ಕೆ ಆಧ್ಯಾತ್ಮಿಕ, ನೈತಿಕ, ಮಾನಸಿಕ ಹಾಗೂ ದೈಹಿಕ ಎಂಬ ನಾಲ್ಕು ಆಯಾಮಗಳಿದ್ದು, ಆ ನಾಲ್ಕು ಆಯಾಮಗಳ ಸುಮಧುರ ಸಾಮರಸ್ಯವೇ ವ್ಯಕ್ತಿತ್ವವಿಕಸನದ ಮೂಲಮಂತ್ರ ಎಂಬುದನ್ನು ದಾಸರು ಜಗಜ್ಜಾಹೀರು ಮಾಡಿದ್ದಾರೆ. ಭಕ್ತಿಭಾವದ ಪರಾಕಾಷ್ಠೆಯಿಂದ ಮನಸ್ಸಿನ ವೀಣೆಯನ್ನು ಸುಲಭವಾಗಿ ಮಿಡಿಯಬಹುದು ಅಥವಾ ಮನಸ್ಸಿನೊಡನೆ ಸುಲಭವಾಗಿ ಸಾಮರಸ್ಯವನ್ನು ಸಾಧಿಸಬಹುದು ಎಂಬುದನ್ನೂ ಅವರು ಸಾರಿದ್ದಾರೆ. ಸಂಸಾರದಲ್ಲಾಗಲೀ, ಸಮಾಜದಲ್ಲಾಗಲೀ ಯಶಸ್ಸಿನ ಕೀಲಿಕೈಯೇ ಸಾಮರಸ್ಯದಿಂದ ಒಂದಾಗಿ ಬದುಕುವುದು ಎಂಬುದನ್ನೂ ಅವರು ಒತ್ತಿಹೇಳಿದ್ದಾರೆ.
ಯಾವುದೇ ಶಾಸ್ತ್ರದೊಂದಿಗೂ ಸಾಮರಸ್ಯ ಬೆಳೆಸಿಕೊಂಡು ಜೀವನಪಾಠವನ್ನು ಆ ಶಾಸ್ತ್ರದ ಭಾಷೆಯ ಎರಕದಲ್ಲಿ ಮೂಡಿಸಬಹುದೆಂಬುದನ್ನು ವ್ಯವಹಾರಶಾಸ್ತ್ರದ ಪ್ರಾತ್ಯಕ್ಷಿಕೆಯ ಮೂಲಕ ಅವರು ಮನಗಾಣಿಸಿದ
Share

Subscribe to our emails
Subscribe to our mailing list for insider news, product launches, and more.