Pro. S. G. Siddharamayya
Publisher - ಸಪ್ನ ಬುಕ್ ಹೌಸ್
Regular price
Rs. 150.00
Regular price
Rs. 150.00
Sale price
Rs. 150.00
Unit price
per
- Free Shipping Above ₹200
- Cash on Delivery (COD) Available
Pages - 167
Type - Paperback
ಇಲ್ಲಿಯ ಬರಹಗಳು ಬಹುತೇಕ ಸಾಂದರ್ಭಿಕವಾಗಿ ಬರೆದ ಲೇಖನಗಳು. ಇವುಗಳಿಗೆ ಒಂದು ಚಾರಿತ್ರಿಕ ಸನ್ನಿವೇಶ ಸ್ಪರ್ಶ ಇರುವ ಕಾರಣದಿಂದಾಗಿ ಹಾಗೂ ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸಿದ ಕಾರಣದಿಂದಾಗಿ ಈ ಕೃತಿಗೆ 'ಸಾಂದರ್ಭಿಕ' ಎಂದು ಕರೆದಿದ್ದೇನೆ. ಸ್ವಾತಂತ್ರೋತ್ತರ ಭಾರತದಲ್ಲಿ 21ನೇ ಶತಮಾನದ ಪ್ರಾರಂಭಿಕ ದಶಕಗಳು ಇಡೀ ದೇಶದ ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಅಪಾಯತರುವ ರೀತಿಯಲ್ಲಿ ಜನತೆಯನ್ನು ಧಾರ್ಮಿಕ ಸಮೂಹ ಸನ್ನಿಗೆ ದೂಡಿದ ಕಾಲಘಟ್ಟ. ಇದು ಕಾರಣ, ಇದರ ವಿರುದ್ಧ ದನಿ ಎತ್ತದೇ ಇರುವ ಯಾವುದೇ ಸುಶಿಕ್ಷಿತ ಪ್ರಜ್ಞಾವಂತ ಪ್ರಜೆ ಮಾನವೀಯತೆಯ ಪರ ನಿಲ್ಲದವನಾಗುತ್ತಾನೆ. ಅರ್ಥಾತ್ ಸಮಾಜ ದ್ರೋಹಿಯಾಗುತ್ತಾನೆ. ಕ್ರಿಯೆ ಇಲ್ಲದ ಅರಿವು ಹೀನವಪ್ಪುದು ಎಂದು ಶರಣರು ಹೇಳಿದ್ದಾರೆ. ಅದರಂತೆ ಈ ಸಮಾಜ ದ್ರೋಹಿಗಳ ಅರಿವು ನಿಷ್ಪ್ರಯೋಜಕ ತಮ್ಮ ಅರಿವಿಗೆ ತಾವೇ ಅಪವಾದವಾಗಿ ನಿಲ್ಲುವ ಇಂಥವರು ಹಿಪೋಕ್ರೇಟ್ಗಳಾಗುತ್ತಾರೆ. ಜಾಣಮೌನದ ಅವಕಾಶವಾದಿ ಗಳಾಗುತ್ತಾರೆ. ಶರಣರು ಅಂತರಂಗ ಬಹಿರಂಗಗಳ ಆತ್ಮಸಂಗವೆಂದು ಕರೆದ ಹಿನ್ನೆಲೆಯೊಳಗೆ, ಇವರ ನಡೆನುಡಿಗಳು ಲೊಳಲೊಟ್ಟೆಯಾಗುತ್ತದೆ.