Anantha C M
ಸಾಗದ ದಾರಿ
ಸಾಗದ ದಾರಿ
Publisher -
- Free Shipping Above ₹400
- Cash on Delivery (COD) Available*
Pages - 136
Type - Paperback
Couldn't load pickup availability
ಯುವ ಸಾಹಿತಿಗಳ ಲೋಕದಲ್ಲಿ ತಮ್ಮದೇ ಆದ ಸ್ಪಷ್ಟ ಶೈಲಿ ಮತ್ತು ಪ್ರಾಮಾಣಿಕ ಧ್ವನಿಯುಳ್ಳ ಅನಂತ್ ಸಿ. ಎಂ. ಅವರು "ಸಾಗದ ದಾರಿ" ಕೃತಿಯ ಮೂಲಕ ಕನ್ನಡ ಕಥಾ ಸಾಹಿತ್ಯಕ್ಕೆ ಹೊಸ ಶಕ್ತಿ ಹಾಗೂ ಹೊಸ ಚಿಂತನೆಗಳನ್ನು ನೀಡಿದ್ದಾರೆ.
ತಮ್ಮ ಕರ್ತವ್ಯಪರ ಜೀವನವನ್ನು ಯಾವತ್ತೂ ಹಿಂದಿಕ್ಕದೆ ಸಾಹಿತ್ಯವನ್ನು ಕೇವಲ ಹವ್ಯಾಸವಾಗಿ ಮಾತ್ರವಲ್ಲದೆ, ಆತ್ಮಸಾಧನೆಯಾಗಿ ಬೆಳೆಸಿಕೊಂಡಿರುವ ಇವರು ನಿಜಕ್ಕೂ ಯುವ ಪೀಳಿಗೆಗೆ ಪ್ರೇರಣೆ. ಈ ಕೃತಿಯ ನಾಯಕ ಕೈಮಗ್ಗದ ರಾಮಣ್ಣ ಸಾಧಾರಣ ಗ್ರಾಮೀಣ ವ್ಯಕ್ತಿಯಾಗಿದ್ದರೂ ನೈತಿಕತೆ, ಶ್ರಮ, ಧೈರ್ಯ ಹಾಗೂ ಮಾನವೀಯ ಮೌಲ್ಯಗಳ ಪ್ರತಿರೂಪ. ಅನೇಕ ಕಷ್ಟ-ಸಂಕಷ್ಟಗಳ ನಡುವೆಯೂ ತಮ್ಮ ನಂಬಿಕೆಯನ್ನು ಬಿಡದೆ ಗುರಿಯನ್ನು ಸಾಧಿಸುವ ರಾಮಣ್ಣ ಇಂದಿನ ಯುವಕರಿಗೆ ಒಂದು ಮಾದರಿ ಪಾತ್ರ. ಆತನ ಜೀವನಯಾನವು ಕೇವಲ ಕಥಾಧಾರಿತವಲ್ಲ, ನೈತಿಕ ಮೌಲ್ಯಗಳ ದೀಪಸ್ತಂಭವಾಗಿಯೂ ಪರಿಣಮಿಸುತ್ತದೆ.
ಅನಂತ್ ಸಿ. ಎಂ. ಅವರು ಗ್ರಾಮೀಣ ಜೀವನದ ನೈಜ ಚಿತ್ರಣವನ್ನು ಅದರ ಸೌಂದರ್ಯ ಮತ್ತು ಸಂಕೀರ್ಣತೆಗಳೊಂದಿಗೆ ಚಿತ್ರಿಸಿದ್ದಾರೆ. ಓದುಗನ ಕಣ್ಣಿಗೆ ಕಟ್ಟುವಂತೆ ಅವರು ನಿರ್ಮಿಸಿರುವ ಕಥಾ ಪ್ರಪಂಚದಲ್ಲಿ ಮಣ್ಣಿನ ವಾಸನೆ, ಬದುಕಿನ ಹೋರಾಟ, ಕನಸುಗಳ ಕಾವ್ಯ ಎಲ್ಲವೂ ಸ್ಪಷ್ಟವಾಗಿ ಕಾಣುತ್ತದೆ. "ಸಾಗದ ದಾರಿ" ಕೃತಿ ಕೇವಲ ಒಂದು ಕಥೆಯಲ್ಲ, ಅದು ಜೀವನದ ಪಾಠವನ್ನು ನೀಡುವ ದಾರಿ. ಈ ಕೃತಿಯ ಮೂಲಕ ಅನಂತ್ ಸಿ. ಎಂ. ಅವರು ತಮ್ಮ ಸಾಹಿತ್ಯ ಯಾನಕ್ಕೆ ಒಂದು ಗಟ್ಟಿಯಾದ ನಿಲ್ದಾಣ ನಿರ್ಮಿಸಿದ್ದಾರೆ ಎನ್ನುವುದು ಖಚಿತ.
ಅವರ ಮುಂದಿನ ಸಾಹಿತ್ಯ ದಾರಿಯಲ್ಲಿ ಇನ್ನೂ ಹೆಚ್ಚಿನ ಸೃಜನಶೀಲ ಕೃತಿಗಳು ಮೂಡಿಬರಲಿ ಎನ್ನುವುದೇ ನಮ್ಮೆಲ್ಲರ ಆಶಯ. ಈ ಕೃತಿಯು ಅವರ ಸಾಹಿತಿಕ ಪಯಣಕ್ಕೆ ಒಂದು ಹೆಬ್ಬಾಗಿಲಾಗಲಿ ಎಂಬ ಹಾರೈಕೆಗಳೊಂದಿಗೆ.
ಡಾ. ಸಂತೋಷ್ ಕುಮಾರ್ ಎಂ.ಬಿ.
ಹಿರಿಯ ವಿಭಾಗೀಯ ವೈದ್ಯಕೀಯ ಅಧಿಕಾರಿ, ನೈಋತ್ಯ ರೈಲ್ವೆ, ಶಿವಮೊಗ್ಗ.
Share

Subscribe to our emails
Subscribe to our mailing list for insider news, product launches, and more.