Devanoora Mahadeva
ಆರ್|ಎಸ್|ಎಸ್|ಆಳ ಮತ್ತು ಅಗಲ
ಆರ್|ಎಸ್|ಎಸ್|ಆಳ ಮತ್ತು ಅಗಲ
Publisher - ನವಕರ್ನಾಟಕ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 64
Type - Paperback
Couldn't load pickup availability
ಹೌದು, ಛಿದ್ರತೆಯೇ ದೆವ್ವ; ಐಕ್ಯತೆಯೇ ದೈವ-ಎಂಬ ವಿವೇಕ ನಮ್ಮದೂ ಆಗಬೇಕಾಗಿದೆ. ಇಂದು ಛಿದ್ರತೆ ಮಿತಿಮೀರುತ್ತಿದೆ. ಅಧರ್ಮವು ಧರ್ಮದ ಮುಖವಾಡ ತೊಟ್ಟು ಕುಣಿದು ಕುಪ್ಪಳಿಸುತ್ತಿದೆ. ಅಸಮಾನತೆಯೇ ನೀತಿಯಾಗುತ್ತಿದೆ! ಧರೆಹತ್ತಿ ಉರಿದೊಡೆ ನಿಲ್ಲುವುದೆಂತು ಅಂತಾಗಿಬಿಟ್ಟಿದೆ. ಇಂತಹ ಆಳ್ವಿಕೆ ಎಲ್ಲಿಗೆ ತಲುಪಬಹುದು?
ಕೂಗುಮಾರಿ ಮನೆಮುಂದೆ ಬಂದು ಕೂಗಿದಾಗ ಅದಕ್ಕೆ 'ಓ'ಗೊಟ್ಟರೆ ಅಥವಾ 'ಕರೆದವರು ಯಾರು?' ಅಂತ ಕೂಗುಮಾರಿಗೆ ಸ್ಪಂದಿಸಿದರೆ, ಅವರು ರಕ್ತ ಕಾರಿಕೊಂಡು ಸಾಯುತ್ತಾರೆ ಎನ್ನುವುದು ನಮ್ಮ ಜನಪದರ ನಂಬಿಕೆ. ಅದಕ್ಕಾಗಿ 'ನಾಳೆ ಬಾ' ಅಂತ ಬಾಗಿಲ ಮುಂದೆ ಬರೆದಿರುತ್ತಾರೆ.
ಛಿದ್ರತೆಯ, ತಾರತಮ್ಯ ಬಿತ್ತನೆ ಮಾಡುವ ಕೂಗುಮಾರಿಗಳ ಗುಂಪು ನಮ್ಮ ಮನೆ ಮುಂದೆ ಬಂದು ಕೂಗಿದಾಗ, ಅದಕ್ಕೆ 'ಓ'ಗೊಡದೆ, 'ನಾಳೆ ಬಾ' ಎಂದು ನಾವೂ ಕೂಡ ನಮ್ಮ ಜನಪದರಂತೆ ಬಾಗಿಲಲ್ಲಿ ಬರೆದಿಡಬೇಕಾಗಿದೆ. ನಾವು ಓಗೊಟ್ಟರೆ, ಅದರೊಡನೆ ದನಿಗೂಡಿಸಿದರೆ, ಆ ಕ್ಷಣದಿಂದಲೇ ನಮ್ಮ ಪತನವು ಹೆಜ್ಜೆ ಇಡತೊಡಗುತ್ತದೆ. ಹಳ್ಳಿಗಾಡಿನ ಅನುಭವಜನ್ಯವಾದ 'ಛಿದ್ರತೆಯೇ ದೆವ್ವ; ಐಕ್ಯತೆಯೇ ದೈವ' ಎಂಬ ವಿವೇಕ ನಮ್ಮದೂ ಆಗಬೇಕಾಗಿದೆ.
(ಆರ್.ಎಸ್.ಎಸ್. ಆಳ ಮತ್ತು ಅಗಲದ ಒಳಗಿಂದ)
Share

Subscribe to our emails
Subscribe to our mailing list for insider news, product launches, and more.