Skip to product information
1 of 2

Dr. K. S. Narayanacharya

ರಾಜಸೂಯ ತಂದ ಅನರ್ಥ

ರಾಜಸೂಯ ತಂದ ಅನರ್ಥ

Publisher - Sahithya Prakashana

Regular price Rs. 500.00
Regular price Rs. 500.00 Sale price Rs. 500.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 416

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

"...ಶ್ರೀಮಹಾಭಾರತವು ಎಂದೋ ಮುಗಿದುಹೋದ ಕಥೆಯಾಗಿದ್ದು ಇಂದಿನವರಿಗೆ ತೀರ ಅಪ್ರಸ್ತುತವಾದ ಕೇವಲ ಐತಿಹಾಸಿಕ ಗ್ರಂಥ ಎಂಬುದು ಪಾಮರರ ಅಜ್ಞಶ್ರದ್ಧೆಯಾದರೆ; ಅದು ಇಂದಿಗೂ ಮನರಂಜನೆಯ ರೂಪದಲ್ಲಿ ಮಾತ್ರ ಉಪಯುಕ್ತವೆಂಬುದು ಅರ್ಧಪಾಮರರ, ಅರ್ಧ ತಿಳುವಳಿಕೆಯ, ಇಂದಿನ ಬಹುಪಾಲು 'ಬುದ್ಧಿಜೀವಿಗಳೆಂದುಕೊಳ್ಳುವವರ' ಭ್ರಾಂತ, ಭ್ರಾಮಕ ಶ್ರದ್ಧೆ!

ಇವೆರಡಕ್ಕಿಂತ ಭಿನ್ನವಾಗಿ, ಅದು ಎಂದೆಂದೂ ನಿತ್ಯನೂತನವಾಗಿರುವ, ಈ ಭರತಖಂಡದ, ಜಗತ್ತಿನ ಆಗುಹೋಗುಗಳ ಬಗೆಗೆ ಮಾರ್ಮಿಕವಾಗಿ, ಸಾಂಕೇತಿಕವಾಗಿ ಎಚ್ಚರ ನೀಡುವ, ಪ್ರಜ್ಞಾ ಉದ್ಬೋಧಕ ಗ್ರಂಥ. ಇದೇ ಉತ್ತಮೋತ್ತಮ ಸಾಹಿತ್ಯ ಎಂಬುದು ಕೆಲವರ ಮಟ್ಟಿಗಾದರೂ ಉಳಿದಿರುವ ನೈಜ ಪ್ರಜ್ಞೆ. ಶ್ರೀ ಮಹಾಭಾರತವನ್ನು ಮೂಲದಲ್ಲಿ ಶ್ರದ್ಧೆಯಿಂದ ಹಿಡಿದ ಯಾವನಿಗೂ ಸಾಧ್ಯವಾಗುವ ಶ್ರದ್ಧೆ ಇದು. ಸಂಶೋಧನೆಯ ಹೆಸರಲ್ಲಿ ಮಹಾಭಾರತದ ಭಾಗಗಳನ್ನು ವ್ಯಾಸಕೃತವಲ್ಲವೆಂದು ಅಲ್ಲಗಳೆಯುವ ಪಶ್ಚಿಮ ಬುದ್ಧಿಯ ಓದುಗನಿಗೆ ಈ ಶ್ರದ್ಧೆ ಎಟುಕಲಾರದು! ಅದು ಭಾರತೀಯರ ಪ್ರಜ್ಞೆಯೇ ಆಗಲಾರದು!

ಈಗ ಹಾಗೆ ಸಹಜ ಶ್ರದ್ಧೆಯಿಂದ ಮೂಲವನ್ನು ಓದುವವರೂ, ಅನುವಾದ ಮಾಡುವವರೂ, ಅಲ್ಲಿನ ಎಚ್ಚರಿಕೆಗಳನ್ನು ನಮಗೆ ತಿಳಿಸುವವರೂ ಇಲ್ಲದೆಯೇ ನಮ್ಮ ದೇಶದಲ್ಲಿ ಮಹಾಭಾರತ ಯುದ್ಧದ ಪುನರಾವರ್ತನೆಗಳು — ಯಾವುದಕ್ಕೆಲ್ಲ ಆಗಬಾರದೋ, ಅವಕ್ಕಾಗಿಯೇ — ನೀರಿಗೆ, ಭಾಷೆಗೆ, ನೆಲಕ್ಕೆ, ಜಾತಿಗೆ, ಸೌಲಭ್ಯಗಳಿಗೆ, ಪ್ರತಿಷ್ಠೆಗೆ, ಹೆಣ್ಣು-ಹೊನ್ನುಗಳಿಗೆ ಸದಾ ಆಗುತ್ತಲೇ ಬಂದಿವೆ! ಜಗತ್ತಿನಲ್ಲಿ ಬೇರೆಡೆಯೂ ಇವೇ ಕಾಣಬರಲು ವ್ಯಾಸದೃಷ್ಟಿ ಬೇಕು."

- ಕೆ. ಎಸ್. ನಾರಾಯಣಾಚಾರ್ಯ ('ಆ ಹದಿನೆಂಟು ದಿನಗಳು' ಆತ್ಮನಿವೇದನದಲ್ಲಿ)

View full details