Skip to product information
1 of 2

Dr.Venkoba Rao.M Hosakote

ರಾಧೇಯ : ಕರ್ಣ - ಆರಂಭ ಅಂತ್ಯ ಅನಂತ

ರಾಧೇಯ : ಕರ್ಣ - ಆರಂಭ ಅಂತ್ಯ ಅನಂತ

Publisher - ವಂಶಿ ಪಬ್ಲಿಕೇಷನ್ಸ್

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 100

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಭೀಷ್ಮ, ದ್ರೋಣ, ಅಶ್ವತ್ಥಾಮ ಮತ್ತು ಶಲ್ಯ ಮೊದಲಾದವರು ಕರ್ಣನ ಕುಲಹೀನನೆಂದು ತಿರಸ್ಕರಿಸುತ್ತಾರೆ. ಕರ್ಣನಿಗೆ ಇವರೆಲ್ಲರ ಸೊಕ್ಕನ್ನು ಕಂಡು ರೋಷ; ದುರ್ಯೋಧನನ ಅನ್ನವನ್ನುಂಡು ಅವನಿಗೆ ಇದುರು ಬೀಳುವ ಇವರ ಸ್ವಭಾವ ಕಂಡು ಕರ್ಣನಿಗೆ ಅಪನಂಬಿಕೆ. ಭೀಷ್ಮನಿಗೆ ಪಟ್ಟ ಕಟ್ಟಿದಾಗ, ಈ ಮುಪ್ಪಿನ ಮುದುಕನು ಶತ್ರುಗಳನ್ನು ಹೇಗೆ ಎದುರಿಸಿ ನಿಲ್ಲಬಹುದು! ತಾನೇ ಸಾಕಿದ ಮೊಮ್ಮಕ್ಕಳೊಡನೆ ಹೇಗೆ ಮನಸಿಟ್ಟು ಕಾಡಬಹುದು ಎಂದು ಕರ್ಣನಿಗೆ ಪ್ರಬಲವಾದ ಸಂದೇಹ; ಕುಲ ಕುಲ ಎಂದು ಮಾತೆತ್ತಿದ್ದಕ್ಕೆಲ್ಲಾ ತನ್ನ ಸೂತ ಕುಲವನ್ನು ದೂಷಿಸುವವರನ್ನು ಕಂಡು ಕರ್ಣನಿಗೆ ಸಹಿಸಲಾಗುವುದಿಲ್ಲ! ನಿಜವಾದ ಕುಲ ಯಾವುದೆಂದು ಕರ್ಣನು ಸಾರಿದನು. ಕರ್ಣನು ತಾನು ಕಾದುವುದು ಗೆಲುವಿಗಲ್ಲ, ಛಲಕ್ಕಾಗಿ ಎಂದಾಗ ಆತನ ಹೃದಯ ಪರಿವರ್ತನೆಯಿಂದ ಭೀಷ್ಮನ ಹೃದಯ ಕರಗಿತು. ಕರ್ಣನು ತನ್ನ ಶೌರವನ್ನು ತೋರಲು ಅವಕಾಶಕ್ಕಾಗಿ ಆತೊರೆಯುತ್ತಿದ್ದುದ್ದು, ವೀರನ ಉತ್ಸಾಹವನ್ನು ತೋರಿಸುತ್ತದೆ. ಇವರಿರ್ವರ ಗುರು ಪರಶುರಾಮ ಆದುದರಿಂದ ಇವರು ಬಂಧುಗಳು “ನೀನೆ ಮಗ ಕುಂತಿಯ ಗಾಂಧಾರಿಯ ಮಕ್ಕಳ ಲೆಕ್ಕದೆ ಮೊಮ್ಮನೈ" ಎಂದು ಭೀಷ್ಮನು ವಾತ್ಸಲ್ಯದ ಮಾತನ್ನಾಡಿದಾಗ, ಕರ್ಣನ ಮನಸ್ಸಿನ ದುಃಖವೆಲ್ಲವೂ ದೂರವಾಯಿತು. ಕುಲಹೀನನೆಂಬ ಅಪವಾದ ಈಗಾಗಲೇ ನನಗೆ ಬಂದಿರುವುದರಿಂದ, ಸಾವು-ಗೆಲುವುಗಳನ್ನು ಲೆಕ್ಕಿಸದೆ ನನ್ನ ಪೌರುಷದಿಂದ ನಿಮ್ಮನ್ನು ಮೆಚ್ಚಿಸುತ್ತೇನೆಂದ ಕರ್ಣನು, ಅರ್ಜುನನೊಂದಿಗೆ ನಡೆದ ಕಾಳಗದಲ್ಲಿ ಕರ್ಣನ ತೇಜಸ್ಸು ಪ್ರಜ್ವಲಿಸಿತು.. ಆರುವ ಸಮಯದಲ್ಲಿ ದೀಪದ ಕುಡಿ ಮತ್ತಷ್ಟು ಉರಿದೇಳುವ ಹಾಗೆ, ಕರ್ಣನು ತನ್ನ ಅಸ್ತಮಯ ಕಾಲದಲ್ಲಿ ತೇಜಸ್ಸಿನಿಂದ ತೊಳಗಿದನು. ಜೊತೆಗೆ

ಡಾ. ವೆಂಕೋಬರಾವ್ ಎಂ, ಹೊಸಕೋಟೆ

View full details