Dr. Gajanana Sharma
ಪುನರ್ವಸು - ಕಾದಂಬರಿ
ಪುನರ್ವಸು - ಕಾದಂಬರಿ
Publisher - ಅಂಕಿತ ಪುಸ್ತಕ
- Free Shipping Above ₹400
- Cash on Delivery (COD) Available*
Pages -
Type -
Couldn't load pickup availability
ವಿಶ್ವೇಶ್ವರಯ್ಯನವರ ಕಾಲಘಟ್ಟ, ಆ ಕಾಲದ ಕಾಡು, ನಿರ್ಮಾನುಷ ಜೋಗದ ಪರಿಸರ, ಸುತ್ತುಮುತ್ತಲ ಹಳ್ಳಿಗಳು, ಕೃಷ್ಣರಾವ್ ವಸುಧಾರ ದಾಂಪತ್ಯ, ಕಡಾಂಬಿ, ಫೋರ್ಟ್ಸ್ ಮುಂತಾದ ಅಧಿಕಾರಿಗಳ ಶ್ರದ್ಧೆ, ತುಂಗಕ್ಕಯ್ಯ, ದತ್ತಪ್ಪ ಹೆಗಡೆ, ಶರಾವತಿ, ಭವಾನಿಯಂಥ ಪಾತ್ರಗಳು, ಲೇಖಕರು ವಿವರಿಸುವ ಮರಗಿಡಗಳು, ಪರಿಸರ ಇವೆಲ್ಲವೂ ಅನನ್ಯ. ಇಲ್ಲಿ ಅನುಭವ ಮತ್ತು ನೆನಪು ಮಿಳಿತಗೊಂಡು ಕಾಲಾತೀತವಾದ ರಸಾನುಭೂತಿಯನ್ನು ಒದಗಿಸುತ್ತದೆ ಅನ್ನುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ.
ಕಾದಂಬರಿಯಲ್ಲಿ ಲೇಖಕರು ಎರಡು ಮಹತ್ವದ ಮಜಲುಗಳನ್ನು ದಾಟಿದ್ದಾರೆ. ಒಂದು, ನಮಗೆ ಈವರೆಗೆ ಗೊತ್ತಿದ್ದ ಶರಾವತಿಗಿಂತ ಭಿನ್ನವಾದ ಶರಾವತಿಯನ್ನು ತೋರಿಸಿಕೊಟ್ಟಿದ್ದು, ಎರಡು, ಶರಾವತಿಯ ಪರಿಸರದ ಜೊತೆಗೇ ಬದುಕನ್ನು ಹೆಣೆದದ್ದು. ಇವೆರಡೂ ಅವರನ್ನು ವಿಶಿಷ್ಟವಾದ ಕಥನಕಾರರನ್ನಾಗಿ ಮಾಡಿದೆ. ಇಡೀ ಕತೆಯಲ್ಲಿ ಮನೋಲಹರಿಯಷ್ಟೇ ಗಾಢವಾಗಿ ವ್ಯಾವಹಾರಿಕ ವಿವರಗಳೂ ಬರುತ್ತದೆ. ಆ ವಿವರಗಳ ಒಳಗೆ ಈ ವಿವರಗಳು ಸೇರಿಕೊಳ್ಳುವ ಬಗೆ ಸೊಗಸಾಗಿದೆ. ಇಂಥ ಕತೆಗಳು ಕನ್ನಡದಲ್ಲಿ ಅಪರೂಪ, ಇಂಗ್ಲಿಷಿನಲ್ಲಿ ಅನೇಕರು ಹೀಗೆ ವಾಸ್ತವ ಮತ್ತು ಕಲ್ಪನೆಯನ್ನು ಬೆಳೆಯುವ ಕೆಲಸ ಮಾಡಿದ್ದಾರೆ. ಇದು ಒಂದು ರೀತಿಯಲ್ಲಿ ಕಥಾಸಾಕ್ಷ್ಯಚಿತ್ರದಂತಿದೆ.
-ಜೋಗಿ
Share

If you’re planning to start reading books and looking for the perfect one to begin with, here’s my recommendation.
You’ll get completely attached to the characters, and you definitely won’t regret reading it. Hopefully, you never come across another book quite like this one
ಪುನರ್ವಸು - ಕಾದಂಬರಿ
ಎಂತಹ ಅದ್ಭುತವಾದಂತಹ ಕಾದಂಬರಿ ಪ್ರತಿಯೊಬ್ಬ ಓದುಗರು ಸಹ ಓದಬೇಕಾದಂತಹ ಕಾದಂಬರಿ. ವಿಚಾರ, ಮಾಹಿತಿ ಸ್ಪಷ್ಟವಾಗಿದೆ. ಪ್ರತಿಯೊಂದು ಪಾತ್ರದಲ್ಲಿಯೂ ಸಹ ಜೀವಂತಿಕೆಯಿದೆ, ಕಣ್ತುಂಬಿ ಮನ ತುಂಬಿ ಬರುವಂತಹ ಪಾತ್ರೆಗಳು. ಗಜಾನನ ಶರ್ಮ ಸರ್ ಗೆ ನನ್ನ ಕಡೆಯಿಂದ ದೊಡ್ಡ ಧನ್ಯವಾದಗಳು. ಇಂತಹ ಕಾದಂಬರಿಯನ್ನು ಕನ್ನಡದಲ್ಲಿ ಪರಿಚಯಿಸಿರೋದಕ್ಕೆ 🙏🙏🙏🙏🙏🙏
ಪುನರ್ವಸು - ಕಾದಂಬರಿ
ಸೂಪರ್ ಕಾದಂಬರಿ.....ಅದರಲ್ಲೂ ದತ್ತಪ್ಪ ಹೆಗಡೆ,ತುಂಗಕ್ಕಯ್ಯ,ವಸುದಾ,ಇತ್ಯಾದಿ ಪಾತ್ರಗಳು ಹೃದಯಸ್ಪರ್ಶಿಯಾಗಿವೆ.ಕಾದಂಬರಿ ಓದುವಾಗ ಗೊತ್ತಿಲ್ಲದೆ ಕಣ್ಣು ಒದ್ದೆಯಾಗುವುದು.
Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.