Dr Lakshman V A
ಪಿ.ಎಚ್.ಸಿ. ಕವಲುಗುಡ್ಡ 24/7
ಪಿ.ಎಚ್.ಸಿ. ಕವಲುಗುಡ್ಡ 24/7
Publisher -
- Free Shipping Above ₹400
- Cash on Delivery (COD) Available*
Pages - 216
Type - Paperback
Couldn't load pickup availability
ಕೆಂಡದ ದಾರಿಯನ್ನು ತುಳಿದು ಬಂದಿದ್ದೆ.
ನಾಲ್ಕು ವರ್ಷಗಳ ಹಿಂದೆ... ಆ ಗಾಯ ಇನ್ನೂ ವಾಸಿಯಾಗಿರಲಿಲ್ಲ; ಮತ್ತೆ ಮತ್ತೆ ರಸಿಕೆಯೇರಿ ಹಿಂಸಿಸುತ್ತಲೇ ಇತ್ತು. ಅದನ್ನು ಕಥೆ ಎನ್ನಿರಿ, ಕಾದಂಬರಿ ಎನ್ನಿರಿ, ಅಖಂಡ ಕಾವ್ಯವೆನ್ನಿರಿ... ಏನಂದರೂ ಸರಿಯೇ! ಮನುಕುಲವನ್ನು ಇನ್ನಿಲ್ಲದಂತೆ ಪೀಡಿಸಿ ಕಾಡಿಸಿದ 'ಕೋವಿಡ್' ಎಂಬ ಮಹಾಮಾರಿ ಕೊಟ್ಟ ಏಟು ಅಷ್ಟಿಷ್ಟಲ್ಲ. ಕಾಯಿಲೆಯ ಹೆಸರು ನೆನಪಿಸಿಕೊಂಡರೇ ಇನ್ನೂ ಪತರಗುಟ್ಟಿ ಹೋಗುತ್ತೇನೆ. ಹಗಲಿನಲ್ಲಿ, ಇರುಳಿನಲ್ಲಿ, ಕನಸಿನಲ್ಲಿ, ಕನವರಿಕೆಯಲ್ಲಿ, ಹೊತ್ತೂಗೊತ್ತಿಲ್ಲದ ಹೊತ್ತಿನಲ್ಲೂ ದುಸ್ವಪ್ನವಾಗಿ ಕಾಡಿದ ಬೇತಾಳದಂತೆ ಬೆನ್ನೇರಿ, ಬೇಡ ಬೇಡವೆಂದರೂ ಬಂದು ಕಾಡುವ ಪರಮ ಹಿಂಸೆಯ ನೆನಪುಗಳು ಅವು.
ಅಖಂಡ ನಾಲ್ಕು ವರ್ಷಗಳ ಚಿಂತನ-ಮಂಥನ, ಪಾತ್ರಗಳ ಪರದಾಟ... ಇಂದು ಬರೆದೇನು, ನಾಳೆ ಬರೆದೇನು... ಉಹುಂ, ನನಗೆ ಬರೆಯಲಾಗುವುದಿಲ್ಲ. ನಾನೇಕೆ ಬರೆಯಲಿ? ಒಮ್ಮೆ ಹಾಯ್ದು ಬಂದ ಕೆಂಡದ ದಾರಿಯನ್ನು ಮತ್ತೊಮ್ಮೆ ಯಾಕೆ ಹಾಯಬೇಕು? ಇಲ್ಲ... ಇಲ್ಲ, ಬರೆಯದೇ ನಾನು ಹಗುರಾಗಲಾರೆ. ನಾನು ಬರೆಯದಿದ್ದರೆ ಈ ಪಾತ್ರಗಳೇ ಬಂದು ಒಂದು ದಿನ ನನ್ನನ್ನು ಮುಗಿಸಿಬಿಡಬಹುದು. ಹೆಗಲ ಭಾರ ಇಳಿಸದೆ ವಿಧಿಯಿರಲಿಲ್ಲ. ಅಬ್ಬಬ್ಬ ಅಂದರೆ ನೂರು ಪುಟವಾಗಬಹುದೆಂದು ಮನಸ್ಸಿನಲ್ಲಿ ಒಂದು ನೀಲನಕ್ಷೆಯಿತ್ತು. ಆದರೆ ಅದು ಹಾಗಾಗಲಿಲ್ಲ. ಆರಂಭ ನನ್ನ ಕೈಯಲ್ಲೇ ಇತ್ತು, ಅಂತ್ಯವನ್ನು ಮಾತ್ರ ಪಾತ್ರಗಳೇ ಪೋಷಿಸಿಕೊಂಡವು.
Share

Subscribe to our emails
Subscribe to our mailing list for insider news, product launches, and more.