1
/
of
1
S. Narasimha Rao
ಪಂಚಾಂಗದ ಮೂಲಭೂತ ಅಂಶಗಳು
ಪಂಚಾಂಗದ ಮೂಲಭೂತ ಅಂಶಗಳು
Publisher - ಡಿ.ವಿ.ಕೆ ಮೂರ್ತಿ
Regular price
Rs. 40.00
Regular price
Rs. 40.00
Sale price
Rs. 40.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages -
Type -
Gift Wrap
Rs. 15.00
Gift Box
Rs. 225.00
Couldn't load pickup availability
ನರಸಿಂಹರಾವ್, 1948 ರಲ್ಲಿ ಹೊಳೇನರಸೀಪುರದಲ್ಲಿ ಜನಿಸಿದವರು. 1968 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿಯನ್ನು ಪಡೆದರು. ಅವರು ಉತ್ಪಾದನಾ ಕ್ಷೇತ್ರ (ಕಾರ್ಖಾನೆ) ದಲ್ಲಿಯೂ, ವಿದ್ಯಾ ಕ್ಷೇತ್ರದಲ್ಲಿಯೂ ವಹಿವಾಟು ವ್ಯವಸ್ಥಾಪನಾ ಕುಶಲತೆ ಪಡೆದಿದ್ದಾರೆ. ಈಗ ಮಹಾವಿದ್ಯಾಲಯ (ಕಾಲೇಜು)ಗಳು, ಗುಣಮಟ್ಟದ ಗರಿಷ್ಠ ಸ್ಥಾನವನ್ನು ಮುಟ್ಟಿ, ಅದನ್ನು ಉಳಿಸಿಕೊಂಡುಬರಲು ಬೇಕಾಗುವ ವ್ಯವಸ್ಥೆಯನ್ನು ಮಾಡಲು ಸಹಾಯ ಮಾಡುತ್ತಿದ್ದಾರೆ.
ಅವರು ಆಕಸ್ಮಿಕವಾಗಿ ಪಂಚಾಂಗಕರ್ತರಾದರು. 1997ರ ಮಧ್ಯದಲ್ಲಿ, ಅವರು ಪಂಚಾಂಗದಲ್ಲಿ ತಮಗೆ ಕಂಡ ವೈಚಿತ್ರಗಳ ಬಗ್ಗೆ ಮದ್ರಾಸಿನಲ್ಲಿರುವ ತಮ್ಮ ಕುಟುಂಬ ಪುರೋಹಿತರಾದ ಭಷ್ಠ ಪದ್ಮನಾಭಾಚಾರ್ಯರಲ್ಲಿ ವಿಚಾರಿಸಿದರು. ಅವರೋ ತಾವೇ 1968 ರಿಂದ ಪಂಚಾಂಗಕರ್ತರು. ಅವರ ಪಂಚಾಂಗವು ತಮಿಳಿನಲ್ಲಿ “ತಂಜಾವೂರ್ ಪಂಚಾಂಗಂ” ಎಂಬ ಹೆಸರಿನಲ್ಲಿ 1867-68 ನಿಂದ ಪ್ರಕಟವಾಗುತ್ತಿವೆ. ಆಚಾರ್ಯರು, ನರಸಿಂಹರಾವಿಗೆ ಉತ್ತರವಾಗಿ ಪಂಚಾಂಗ ಗುಣಿಸುವುದನ್ನೇ ಹೇಳಿಕೊಟ್ಟು, 1998-99 ಬಹುಧಾನ್ಯ ಸಂವತ್ಸರದಿಂದ, ಪಂಚಾಂಗವನ್ನು ತಯಾರಿಸಲು ಬಿಟ್ಟುಕೊಟ್ಟಿದ್ದಾರೆ.
2004-05 ತಾರಣ ಸಂವತ್ಸರದಿಂದ ಇಂಗ್ಲಿಷಿನಲ್ಲಿ “ಪಂಚಾಂಗಂ ಇನ್ ಇಂಗ್ಲಿಷ್" ಮತ್ತು 2007-08 ಸರ್ವಜಿತ್ ಸಂವತ್ತರದಿಂದ ಕನ್ನಡದಲ್ಲಿ “ಮಾಧ್ಯ ಪಂಚಾಂಗ” ಎಂಬ ಶೀರ್ಷಿಕೆಗಳಲ್ಲಿ ಕ್ಯಾಲೆಂಡರ್ ರೂಪದಲ್ಲಿಯೂ ಪಂಚಾಂಗವನ್ನು ಪ್ರಕಟಿಸುತ್ತಿದ್ದಾರೆ. ಉಪಯೋಗಿಸುವವರು ಸುಲಭವಾಗಿ ವಿಷಯವನ್ನು ನೋಡಿ ಗ್ರಹಿಸಲಿಕ್ಕಾಗುವುದೇ ಅವರ ಪಂಚಾಂಗಗಳ ವಿಶೇಷ.
ಈ ಪುಸ್ತಕವನ್ನು ಸಾಮಾನ್ಯ ಜನರಿಗೆ ಪಂಚಾಂಗದಲ್ಲಿನ ಅಂಶಗಳ ಪರಿಚಯಕ್ಕಾಗಿ ಬರೆಯಲಾಗಿದೆ. ಪಂಚಾಂಗದಲ್ಲಿ ಕಂಡುಬರುವ ಕುತೂಹಲಕಾರಿ ವೈಚಿತ್ರಗಳ (ಉದಾಹರಣೆಗೆ: ಒಂದು ದಿನದಲ್ಲಿ ಎರಡು ತಿಥಿ ಬರುವುದು, ಎರಡು ದಿನಗಳಲ್ಲಿ ಒಂದೇ ತಿಥಿ ಇರುವುದು, ಇತ್ಯಾದಿ) ಕಾರಣಗಳನ್ನು ವಿಶದವಾಗಿ ತಿಳಿಸಿದ್ದಾರೆ.
ಅವರು ಆಕಸ್ಮಿಕವಾಗಿ ಪಂಚಾಂಗಕರ್ತರಾದರು. 1997ರ ಮಧ್ಯದಲ್ಲಿ, ಅವರು ಪಂಚಾಂಗದಲ್ಲಿ ತಮಗೆ ಕಂಡ ವೈಚಿತ್ರಗಳ ಬಗ್ಗೆ ಮದ್ರಾಸಿನಲ್ಲಿರುವ ತಮ್ಮ ಕುಟುಂಬ ಪುರೋಹಿತರಾದ ಭಷ್ಠ ಪದ್ಮನಾಭಾಚಾರ್ಯರಲ್ಲಿ ವಿಚಾರಿಸಿದರು. ಅವರೋ ತಾವೇ 1968 ರಿಂದ ಪಂಚಾಂಗಕರ್ತರು. ಅವರ ಪಂಚಾಂಗವು ತಮಿಳಿನಲ್ಲಿ “ತಂಜಾವೂರ್ ಪಂಚಾಂಗಂ” ಎಂಬ ಹೆಸರಿನಲ್ಲಿ 1867-68 ನಿಂದ ಪ್ರಕಟವಾಗುತ್ತಿವೆ. ಆಚಾರ್ಯರು, ನರಸಿಂಹರಾವಿಗೆ ಉತ್ತರವಾಗಿ ಪಂಚಾಂಗ ಗುಣಿಸುವುದನ್ನೇ ಹೇಳಿಕೊಟ್ಟು, 1998-99 ಬಹುಧಾನ್ಯ ಸಂವತ್ಸರದಿಂದ, ಪಂಚಾಂಗವನ್ನು ತಯಾರಿಸಲು ಬಿಟ್ಟುಕೊಟ್ಟಿದ್ದಾರೆ.
2004-05 ತಾರಣ ಸಂವತ್ಸರದಿಂದ ಇಂಗ್ಲಿಷಿನಲ್ಲಿ “ಪಂಚಾಂಗಂ ಇನ್ ಇಂಗ್ಲಿಷ್" ಮತ್ತು 2007-08 ಸರ್ವಜಿತ್ ಸಂವತ್ತರದಿಂದ ಕನ್ನಡದಲ್ಲಿ “ಮಾಧ್ಯ ಪಂಚಾಂಗ” ಎಂಬ ಶೀರ್ಷಿಕೆಗಳಲ್ಲಿ ಕ್ಯಾಲೆಂಡರ್ ರೂಪದಲ್ಲಿಯೂ ಪಂಚಾಂಗವನ್ನು ಪ್ರಕಟಿಸುತ್ತಿದ್ದಾರೆ. ಉಪಯೋಗಿಸುವವರು ಸುಲಭವಾಗಿ ವಿಷಯವನ್ನು ನೋಡಿ ಗ್ರಹಿಸಲಿಕ್ಕಾಗುವುದೇ ಅವರ ಪಂಚಾಂಗಗಳ ವಿಶೇಷ.
ಈ ಪುಸ್ತಕವನ್ನು ಸಾಮಾನ್ಯ ಜನರಿಗೆ ಪಂಚಾಂಗದಲ್ಲಿನ ಅಂಶಗಳ ಪರಿಚಯಕ್ಕಾಗಿ ಬರೆಯಲಾಗಿದೆ. ಪಂಚಾಂಗದಲ್ಲಿ ಕಂಡುಬರುವ ಕುತೂಹಲಕಾರಿ ವೈಚಿತ್ರಗಳ (ಉದಾಹರಣೆಗೆ: ಒಂದು ದಿನದಲ್ಲಿ ಎರಡು ತಿಥಿ ಬರುವುದು, ಎರಡು ದಿನಗಳಲ್ಲಿ ಒಂದೇ ತಿಥಿ ಇರುವುದು, ಇತ್ಯಾದಿ) ಕಾರಣಗಳನ್ನು ವಿಶದವಾಗಿ ತಿಳಿಸಿದ್ದಾರೆ.
Share

H
Hanumanthu ವಿವರಣೆ ಚೆನ್ನಾಗಿದೆ
Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.