Skip to product information
1 of 2

Srujan Ganesh Hegade

ಪಾದುಕೆಯ ಕಣ್ಣಂಚಿನಲ್ಲಿ

ಪಾದುಕೆಯ ಕಣ್ಣಂಚಿನಲ್ಲಿ

Publisher -

Regular price Rs. 80.00
Regular price Rs. 80.00 Sale price Rs. 80.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 80

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಇದೊಂದು ಸೃಷ್ಟಿಶೀಲತೆಯ ಫಲಿತ ವರ್ತಮಾನದಿಂದ ಅತೀತಕ್ಕೂ, ಅತೀತದಿಂದ ವರ್ತಮಾನಕ್ಕೂ ನಿರಂತರವಾಗಿ ಚಲಿಸುವುದು ಕೃತಿಯ ಮೆರುಗು.

ಸೃಜನ್ ಕೌಶಲವಿರುವುದು ವರ್ಣನಾ ನೈಪುಣ್ಯದಲ್ಲಿ. ಇದು ಈ ಕಾಲದಿಂದ ಆ ಕಾಲಕ್ಕೆ ಕೊಂಡೊಯ್ದು ಓದುಗ ನಂದಿಗ್ರಾಮ, ಕೋಸಲ, ಕೇಕೆಯ, ಚಿತ್ರಕೂಟದಲ್ಲೆಲ್ಲ ಅಡ್ಡಾಡುವಂತೆ ಮಾಡುತ್ತದೆ.

ಸೃಜನ್ ಪದ್ಯಗಂಧಿಯಾದ ಗದ್ಯಶೈಲಿಯವರು. ಯಕ್ಷಗಾನದ ಉದಯೋನ್ಮುಖ ಭಾಗವತರಾಗಿರುವುದು ಅವರ ಈ ಶೈಲಿಯನ್ನು ಪ್ರಭಾವಿಸಿರಬಹುದು. ಈ ಶೈಲಿ ಅಭ್ಯಾಸದಿಂದ ರೂಢಿಸಿಕೊಂಡಂತಿರದೆ, ಸಹಜವಾಗಿದೆ.

'ತ್ರೇತೆಯ ಮಜ್ಜಿಗೆ ಮಡಿಸುವ ವಿಧಿ; ಮಂಧರೆ. ನವನೀತ ಹೊರ ತೆಗೆಯಲು' ಎನ್ನುವಂತಹ ಸಾಲುಗಳು ಕೃತಿಗೆ ಹೊಳಪು ನೀಡಿವೆ. ಇಂತಹ ಒಳನೋಟದ ಲೆಕ್ಕವಿಲ್ಲದ ಸಾಲುಗಳು ಇಲ್ಲಿವೆ.

ಮುಳುಗಿಯೂ ಮುಳುಗದ 'ಗುಂಡೂಮನೆ' ಎನ್ನುವ ಕಲೆ-ಸಾಹಿತ್ಯಗಳ ತವನಿಧಿಯ ಹೊಸ ಭರವಸೆ ಸೃಜನ್. ಸಮಕಾಲೀನ ಮನಸ್ಸುಗಳು ಇನ್ನೆಲ್ಲೋ ಸುಖ ಅರಸುವಾಗ ಕಲೆ-ಸಾಹಿತ್ಯಗಳಲ್ಲಿ, ಅದರಲ್ಲೂ ಹಳೆಯದರ ವಿಸ್ತರಣದಲ್ಲಿ ಈ ಯುವಮನಸ್ಸು ತೊಡಗಿರುವುದು ನೆಮ್ಮದಿಯನ್ನು ನೀಡುತ್ತದೆ.

ಕೃತಿಯಿದು ಪೂರ್ವಸೂರಿಗಳ ಭಾವಕ್ಕೆ ಭಂಗ ತಾರದೇ ಹೊಸತನವನ್ನು ಮೈಗೂಡಿಸಿಕೊಂಡಿರುವುದು ಮೆಚ್ಚುಗೆಯನ್ನು ಮೂಡಿಸುತ್ತದೆ. ಇನ್ನೊಂದರ ಚಿಗುರಾದ ಬಂದಳಿಕೆಯನ್ನು ಬೆಳೆಯಗೊಡದೆ ನಾವೀನ್ಯದ ಚಿಗುರು ಹೊತ್ತು ಬೇರಿನ ಪ್ರಾಚೀನತೆಯನ್ನು ಬಿತ್ತರಿಸಿದರೆ ಅದು ಬೆಳವಣಿಗೆ. ಈ ಕೃತಿ ಹಾಗಿದೆ. ಕೃತಿಯನ್ನು ಓದುತ್ತಾ ಕಾಲ-ದೇಶ ಮರೆತೆ; ನಾಲ್ಕು ಮಾತು ಬರೆಯುವ ಅವಕಾಶಕ್ಕೆ ಹೆಮ್ಮೆಯಾಂತೆ ಎಂದರೆ ನಾನು ಕೃತಿಯನ್ನು ಗೌರವಿಸಿದಂತಾಯಿತು. ನವನವೋನ್ನೇಷಶಾಲಿಯಾಗಿ ವರ್ಧಿಸುತ್ತಲೇ ಇರಲಿ ಕವಿತ್ವ ಎನ್ನುವುದು ಶುಭಾಕಾಂಕ್ಷೆ.

ವಿದ್ವಾನ್ ಜಗದೀಶಶರ್ಮಾ ಸಂಪ

View full details