ಪ್ರಮೀಳಾ ಸ್ವಾಮಿ
Publisher: ಅಕ್ಷರ ಪ್ರಕಾಶನ
Couldn't load pickup availability
ಜೀವನದ ಮುಖ್ಯ ಕರ್ತವ್ಯ ಮುಗಿದ ಮೇಲೆ ಹಿರಿಯ ಜೀವ
ವೊಂದು ಈ ಜಗಲಿಯಲ್ಲಿ ಮನೆ ಮಂದಿಯೊಂದಿಗೆ, ತನ್ನ ಸಂದಕಾಲದ ಮಾಯೆಯನ್ನು
ಮೆಲುಕುವಂತೆ ಸುರುವಾಗುವ ಈ ಕೃತಿಯಲ್ಲಿ ಇವೆಲ್ಲ ಅವಿಭಾಜ್ಯವಾಗಿ ಅಂಟಿ ಬಂದಂತೆ, ಅಸಂಗತವೆನ್ನಿಸದಂತೆ, ಮುಂದಿನ ಪೀಳಿಗೆಗಳಿಗೆ ದಾಟಿಸುವ ಸಿರಿ ಅರಿವಿನಂತೆ ಪ್ರಸ್ತಾಪವಾಗಿದೆ. ಇದರಿಂದಾಗಿ ಕೃತಿಗೆ ಅದರದೇ ಆದ ಅಸ್ಮಿತೆಯೂ ಪಾಪ್ತವಾಗಿದೆ. ಮತ್ತು ಇದು ಸುತರಾಂ ಒಬ್ಬ ಪುರುಷ ಬರೆಯಬಹುದಾದ ಬರವಣಿಗೆಯ ಅಲ್ಲ ಆಗಿಸಿದೆ.
-ವೈದೆಹಿ
ಒಂದು ಊರಿನಲ್ಲಿ ಬದುಕಿ ಬಾಳಿದ ಲೇಖಕಿಯ ಸ್ಮೃತಿಚಿತ್ರ, ಹಾಗೆಯೇ ಒಂದು ಸಮುದಾಯದ ಆಹಾರ ಪದ್ಧತಿಯನ್ನು ಕುರಿತ ಪಾಕಶಾಸ್ತ್ರದ ಕೈಪಿಡಿ, ಹೀಗೆ, ಲೇಖಕಿಯು ತನ್ನ ಬಾಲ್ಯದ ಕೃತಿಗಳನ್ನು ಹಾಗೂ ತನ್ನ ಸಮುದಾಯದ ವಿಶಿಷ್ಟ ಖಾದ್ಯಗಳ ತಯಾರಿಕೆಯ ವಿವರಗಳನ್ನು ಒಂದು ಪದದಲ್ಲಿ ಬೆರೆಸಿ ಈ ಕಥನವನ್ನು ಕಟ್ಟಿಕೊಟ್ಟಿದ್ದಾರೆ.
'ಊರೆಂಬ ಉದರ' ಉದರಕ್ಕೆ ಸುಗ್ರಾಸಭೋಜನ! ಮನಕ್ಕೆ ಆಪ್ಯಾಯಮಾನ: ಮಾಹಿತಿಪೂರ್ಣ, ರಸಪೂರ್ಣ, ಮಹತ್ವಪೂರ್ಣಕೃತಿ,
