Shivananda Kalave
ಒಂದು ತುತ್ತಿನ ಕಥೆ
ಒಂದು ತುತ್ತಿನ ಕಥೆ
Publisher - Sahithya Prakashana
- Free Shipping Above ₹400
- Cash on Delivery (COD) Available*
Pages - 176
Type - Paperback
Couldn't load pickup availability
ಹೊಲದಲ್ಲಿ ಹಸಿರು ಚಿತ್ರ ಬರೆದವರ ಬದುಕು ಅರಿಯುತ್ತ ಕಳೆದು ಹೋಗುವಲ್ಲಿ ಎಂಥದೋ ಖುಷಿಯಿದೆ. ಕೃಷಿ ಸಾಧಕರ ದರ್ಶನಕ್ಕೆ ಹೋದ ಬರಹಗಾರ ಶಿವಾನಂದ ಕಳವೆ ಕಂಡ ನೋಟಗಳನ್ನು 'ಒಂದು ತುತ್ತಿನ ಕತೆ'ಯಲ್ಲಿ ದಾಖಲಿಸಿದ್ದಾರೆ. ಇದು ಈಗಾಗಲೇ ಪ್ರಕಟವಾದ 'ಮಣ್ಣಿನ ಓದು' ಕೃತಿಯ ಮುಂದಿನ ಭಾಗ, ಕಳವೆ ಕೃಷಿ ಪ್ರವಾಸ ಕಥನದ ಪಿರಡನೇ ಕೃತಿಯಾಗಿದೆ.
ಹೊಲ, ಹಳ್ಳಿಗಳಲ್ಲಿ ಕುಳಿತು ರೈತರ ಜೊತೆ ಮಾತಾಡುತ್ತ ಹೋದ ಕಳವೆ ನಾವು ಅರಿಯದ ವಿಶೇಷಗಳ ದರ್ಶನ ಮಾಡಿಸಿದ್ದಾರೆ. ಸರಣಿ ಆತ್ಮಹತ್ಯೆ, ಬರ, ಅಕಾಲಿಕ ಮಳೆ ಪರಿಣಾಮದಿಂದಾಗಿ ಕೃಷಿ ಬದುಕು ಸಂಕಟದಲ್ಲಿದೆ, ಸೋಲಿನ ಕತೆ ಹೇಳುವುದಷ್ಟೇ ನಮ್ಮ ಕೆಲಸವಲ್ಲ. ಬದುಕಿನ ದಾರಿ ತೋರಿಸುವದೂ ಅಗತ್ಯವಿದೆ. ಮನೆಮಂದಿಯೆಲ್ಲ ಕುಳಿತು ದಿನವೂ ಒಂದೊಂದೇ 'ತುತ್ತಿನ ಕತೆ' ಓದಿದರೆ ಅನ್ನದ ಅರಿವಾಗಬಹುದು. ಗ್ರಾಮದ ಹೊಲದೆಡೆಯಿಂದ ಎತ್ತಿ ತಂದ ಬರಹಗಳಿವು. ನಾಡಿನ ರೈತರು ಕಳವೆಯವರ ಮೂಲಕ ಒಂದಿಷ್ಟು ಕೃಷಿ ಬೆಳಕಿನ ಬೀಜಗಳನ್ನು ನಮಗೆಲ್ಲ ಕಳಿಸಿದ್ದಾರೆ. ಇವನ್ನು ನಮ್ಮ ಮಿದುಳಿನಲ್ಲಿ ಊರುವ ಪರಿಣಾಮಕಾರಿ ಕಾರ್ಯಕ್ಕೆ ಕಳವೆ ಕೈಹಾಕಿದ್ದಾರೆ. 'ಒಂದು ತುತ್ತಿನ ಕತೆ' ಕೃಷಿ ಜಾಗೃತಿ ಮೂಡಿಸುವ ಒಂದು ಪರಿಣಾಮಕಾರಿ ಪ್ರಯತ್ನವಾಗಿದೆ.
Share

Subscribe to our emails
Subscribe to our mailing list for insider news, product launches, and more.