K. S. Nisar Ahmed
Publisher - ಸಪ್ನ ಬುಕ್ ಹೌಸ್
Regular price
Rs. 125.00
Regular price
Rs. 125.00
Sale price
Rs. 125.00
Unit price
per
- Free Shipping Above ₹200
- Cash on Delivery (COD) Available
Pages -
Type -
ಕನ್ನಡ ಕಾವ್ಯದಲ್ಲಿ ಮುಕ್ತ ಛಂದದ ಅತಿಯಾದ ಬಳಕೆಯ ಫಲಿತವಾಗಿರುವ ಏಕತಾನತೆಯನ್ನು ನೀಗಿಸಿ ಲವಲವಿಕೆ ಮತ್ತು ಗೇಯ ವೈವಿಧ್ಯದ ಹಲವು ಅಪೂರ್ವ ಪ್ರಯೋಗಗಳನ್ನು ಮಾಡಿ ನವೋದಯ ಮತ್ತು ನಮ್ಮ ಸಂಪ್ರದಾಯಗಳಿಗೆ ಅನನ್ಯ ಧಾತುಗಳನ್ನು ಕೂಡಿಸಿದವರು ಮಹತ್ವದ, ಜನಾದರಣೀಯ ಹಿರಿಯ ಕವಿ, ವೈಚಾರಿಕ ಗದ್ಯ ಕರ್ತ, ವಿಮರ್ಶಕ ಮತ್ತು ತರ್ಜುಮೆಕಾರರಾದ ಪ್ರೊ|| ಕೆ.ಎಸ್. ನಿಸಾರ್ ಅಹಮದ್.
ನಿಸಾರರ ಗೀತೆಗಳಲ್ಲಿ ವಸ್ತು ಸಮೃದ್ಧಿಯ ಜೊತೆಗೆ ಸಂವೇದನಶೀಲತೆ, ಮಾತುಗಾರಿಕೆಯ ಮೋಹಕತೆ ಮತ್ತು ಸಂವಹನದ ಸುಭಗತೆಗಳು ನಿಚ್ಚಳವಾಗಿ ಒಡಗೂಡಿ ಉತ್ಕಟ ಹೃದಯಾನುಭೂತಿಗೆ ಅವಕಾಶ ಮಾಡಿಕೊಡುತ್ತವೆ.
ಅತ್ಯಲ್ಪ ಕಾಲದಲ್ಲಿ 27, ಆವೃತ್ತಿಗಳನ್ನು ಕಂಡಿರುವ ಬೆರಳಣಿಕೆಯ ಅಪರೂಪದ ಕನ್ನಡ ಕವನ ಸಂಗ್ರಹಗಳಲ್ಲಿ ಅಗ್ರಪಂಕ್ತಿಯಲ್ಲಿದೆ. ಈ 'ನಿತ್ಯೋತ್ಸವ' ಸಂಕಲನ. ಹಾಗೆಯೇ 1978ರಲ್ಲಿ ಬಿಡುಗಡೆಗೊಂಡು ಸುಗಮ ಸಂಗೀತ ಪ್ರಾಕಾರಕ್ಕೆ ಶ್ರೀಕಾರ ಬರೆದ, ಇಂದಿಗೂ ಅತ್ಯಂತ ಅತ್ಯಂತ ಜನಪ್ರಿಯವಾಗಿರುವ ಕನ್ನಡದ ಮೊಟ್ಟ ಮೊದಲನೆಯ ದನಿ ಸುರುಳಿ ಮತ್ತು ಸಿ.ಡಿ.(ಸಾಂದ್ರಿಕೆ)ಗಳ 'ನಿತ್ಯೋತ್ಸವ'ದ ಭಾವಗೀತೆಗಳಿಗೆ ಇದು ಆಕರ ಕೃತಿ.
ನಿಸಾರರ ಗೀತೆಗಳಲ್ಲಿ ವಸ್ತು ಸಮೃದ್ಧಿಯ ಜೊತೆಗೆ ಸಂವೇದನಶೀಲತೆ, ಮಾತುಗಾರಿಕೆಯ ಮೋಹಕತೆ ಮತ್ತು ಸಂವಹನದ ಸುಭಗತೆಗಳು ನಿಚ್ಚಳವಾಗಿ ಒಡಗೂಡಿ ಉತ್ಕಟ ಹೃದಯಾನುಭೂತಿಗೆ ಅವಕಾಶ ಮಾಡಿಕೊಡುತ್ತವೆ.
ಅತ್ಯಲ್ಪ ಕಾಲದಲ್ಲಿ 27, ಆವೃತ್ತಿಗಳನ್ನು ಕಂಡಿರುವ ಬೆರಳಣಿಕೆಯ ಅಪರೂಪದ ಕನ್ನಡ ಕವನ ಸಂಗ್ರಹಗಳಲ್ಲಿ ಅಗ್ರಪಂಕ್ತಿಯಲ್ಲಿದೆ. ಈ 'ನಿತ್ಯೋತ್ಸವ' ಸಂಕಲನ. ಹಾಗೆಯೇ 1978ರಲ್ಲಿ ಬಿಡುಗಡೆಗೊಂಡು ಸುಗಮ ಸಂಗೀತ ಪ್ರಾಕಾರಕ್ಕೆ ಶ್ರೀಕಾರ ಬರೆದ, ಇಂದಿಗೂ ಅತ್ಯಂತ ಅತ್ಯಂತ ಜನಪ್ರಿಯವಾಗಿರುವ ಕನ್ನಡದ ಮೊಟ್ಟ ಮೊದಲನೆಯ ದನಿ ಸುರುಳಿ ಮತ್ತು ಸಿ.ಡಿ.(ಸಾಂದ್ರಿಕೆ)ಗಳ 'ನಿತ್ಯೋತ್ಸವ'ದ ಭಾವಗೀತೆಗಳಿಗೆ ಇದು ಆಕರ ಕೃತಿ.