Skip to product information
1 of 1

B. J. Parvathi, V. Sonare

ನಿಜಶರಣ ಅಂಬಿಗರ ಚೌಡಯ್ಯ

ನಿಜಶರಣ ಅಂಬಿಗರ ಚೌಡಯ್ಯ

Publisher - ಸ್ನೇಹ ಬುಕ್ ಹೌಸ್

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಸಾಹಿತ್ಯದ ಕೃಷಿಗೆ ಬೇಕಾಗುವುದು ಫಲವತ್ತಾದ ಅನುಭವ ಮತ್ತು ಅದನ್ನು ಅಭಿವ್ಯಕ್ತಿಸುವ ರೀತಿ, ಅದಕ್ಕೆ ಯಾವುದೇ ವೃತ್ತಿ ಅಥವಾ ಶೈಕ್ಷಣಿಕ ಸಂದರ್ಭದಲ್ಲಿ ಆಯ್ಕೆ ಮಾಡಿಕೊಂಡ ವಿಷಯಗಳ ಹಂಗಿಲ್ಲ. ಕಾರಣ, ಬಿ.ಜೆ, ಪಾರ್ವತಿ ಸೋನಾರೆಯವರು ತಮ್ಮನ್ನು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೀತಿ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿಯುವರಿಗೆ ಆ ವೃತ್ತಿಯೇ ಸಾಹಿತ್ಯ ಕೃಷಿಗೆ ಫಲವತ್ತಾದ ಭೂಮಿಯನ್ನು ಒದಗಿಸಿಕೊಡುತ್ತಿದೆ ಎಂದರೆ ಅತಿಶಯೋಕ್ತಿಯಾಗದು:

ಹನ್ನೆರಡನೆ ಶತಮಾನದ ಶಿವಶರಣರಲ್ಲಿಯೇ ಅಂಬಿಗರ ಚೌಡಯ್ಯನವರು ವಿಶೇಷವಾಗಿ ಕಂಗೊಳಿಸುವ ದೈತ್ಯ ಪ್ರತಿಭೆಯ ವಚನಗಳ ವಿಶ್ಲೇಷಣೆಗೆ ಕೈಹಾಕಿರುವುದು ಸಾಹಸವೇ ಸರಿ, ಇದು ಕರಿಯನ್ನು ಕನ್ನಡಿಯಲ್ಲಿ ಹಿಡಿಯುವ ಕೆಲಸವಾಗಿದೆ. ಈ ಕಾರ್ಯದಲ್ಲಿ ಶ್ರೀಮತಿ ಬಿ.ಜೆ. ಪಾರ್ವತಿ ಸೋನಾರೆಯವರು ಭಾಗಶ ಯಶಸ್ವಿಯಾಗಿದ್ದಾರೆ. ಚೌಡಯ್ಯನವರ ವಚನಗಳಲ್ಲಿ ಏಕರೂಪತೆಯಿಲ್ಲ ಅದನ್ನು ಸಾಧಿಸುವುದು ಇಂದಿನ ಸಂಶೋಧಕರಿಗೆ ಬಹುದೊಡ್ಡ ಸವಾಲಿನ ಕೆಲಸವಾಗಿದೆ. ಲೇಖಕಿ ಈ ಸವಾಲನ್ನು ಸ್ವೀಕರಿಸಿ ಗೆದ್ದರೆ, ಕನ್ನಡ ಸಾರಸ್ವತಲೋಕದಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ.

ಇವರ ವಚನ ವಿಶ್ಲೇಷಣೆ 'ಸುಲಿದ ಬಾಳೆಯ ಹಣ್ಣಿನಂತಿದೆ' ತುಂಬಾ ಸರಳವಾಗಿ ಮನವರಿಕೆಯಾಗುತ್ತದೆ. ಅಲ್ಲಿ ಉತ್ತಮ ಶಿಕ್ಷಕಿಗಿಂತಲೂ ಮಾತೃಸ್ವರೂಪಿಯಾಗಿ ಕಾಣುತ್ತಾರೆ. ತಾಯಿ ತನ್ನ ಮಕ್ಕಳಿಗೆ ತಿಳಿ ಹೇಳುವಂತೆ ತುಂಬಾ ಆಪ್ತವಾಗಿ ಮನಸ್ಸನ್ನು ತಟ್ಟಿ ಎಬ್ಬಿಸುತ್ತಾರೆ. ಇವರ ಈ ಸಾಹಿತ್ಯ ಕೃಷಿ ನಿರಂತರವಾಗಿ ಸಾಗಲೆಂದು ಹಾರೈಸುವೆನು.

ಡಾ. ಮಲ್ಲನಾಥ ಎಸ್, ತಳವಾರ ರಾವೂರ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)