prof.shivaramaiah
ನಿಚ್ಚಂ ಪೊಸತು
ನಿಚ್ಚಂ ಪೊಸತು
Publisher - ವಂಶಿ ಪಬ್ಲಿಕೇಷನ್ಸ್
- Free Shipping Above ₹350
- Cash on Delivery (COD) Available*
Pages - 158
Type - Paperback
Couldn't load pickup availability
ಪಂಪನ ಆದಿ ಪುರಾಣ ಮತ್ತು ವಿಕ್ರಮಾರ್ಜುನ ವಿಜಯ ಕನ್ನಡ ಭಾಷಾ ರಾಷ್ಟ್ರೀಯತೆಯ ಅಮೃತ ಕಲಶಗಳು; ಕನ್ನಡಿಗರ ಎರಡು ಸಾಂಸ್ಕೃತಿಕ ಕಣ್ಣುಗಳು ಎಂದಿದ್ದಾರೆ ಡಾ.ಎಲ್.ಬಸವರಾಜು. ಡಾ. ಜಿ.ಎಸ್. ಶಿವರುದ್ರಪ್ಪನವರೆಂದಂತೆ 'ಕನ್ನಡ ಸಾಹಿತ್ಯದ ಪ್ರಥಮ ನವೋದಯಕ್ಕೆ ಪಂಪನೇ ಪ್ರೇರಕ,' ಸಾವಿರ ವರ್ಷದ ನಮ್ಮ ಸಾಹಿತ್ಯದ ಇತಿಹಾಸದಲ್ಲಿ ಪಂಪ ಪರಂಪರೆಯ ಪ್ರವರ್ತಕ, ಪಂಪನಿಂದ ಹಿಡಿದು ಇಂದಿನ ತನಕ ಅವನ ಪ್ರಭಾವಗಳು, ಅವನ ಆಲೋಚನೆಗಳು 'ನಿಚ್ಚಂ ಪೊಸತೆಂಬಂತೆ" ಹರಿದು ಬಂದಿವೆ. 'ಮನುಷ್ಯ ಜಾತಿ ತಾನೊಂದೆ ವಲಂ' ಎಂದು ಈ ಕವಿ ಆದಿ ಪುರಾಣದಲ್ಲಿ ಹೇಳಿದ ಮಾತು ರವಿ ಚಂದ್ರ ತಾರಾಂಬರದಂತೆ ಕನ್ನಡ ಭಾಷೆ ಇರುವವರೆಗೂ ರಾರಾಜಿಸುತ್ತದೆ. ಆದಿ ಪುರಾಣ ಮತ್ತು ಪಂಪ ಭಾರತ ಮನುಕುಲದ ಆತ್ಮವಿಕಾಸದ ಔನ್ನತ್ಯಕ್ಕೆ ಹಿಡಿದ ಮಹಾನ್ ಕಾವ್ಯ ರೂಪಕಗಳು. ಇವು ಜಾಗತಿಕ ಸಾಹಿತ್ಯದಲ್ಲಿ ಸಮ ಸಮಾನ ನಿಲ್ಲುವಂತಹ ಸತ್ವ ಗುಣಸಂಪನ್ನವಾಗಿವೆ. ಹಿತಮಿತ ಮೃದು ವಚನದಲ್ಲಿ ಪಂಪನ ಚಂಪೂ ಕಾವ್ಯಗಳ ಇಂಪು ಸಹೃದಯ ಲೋಕವನ್ನು ಸೆಳೆದಿಡುತ್ತದೆ
Share

Subscribe to our emails
Subscribe to our mailing list for insider news, product launches, and more.