Rahamath Tarikere
ನೇತು ಬಿದ್ದ ನವಿಲು
ನೇತು ಬಿದ್ದ ನವಿಲು
Publisher - Lankesh Prakashana
- Free Shipping Above ₹400
- Cash on Delivery (COD) Available*
Pages - 284
Type - Paperback
Couldn't load pickup availability
ಸಮಕಾಲೀನ ಹಾದು ಜನಪರ ಚಳುವಳಿ ಹಾಗೂ ನಾಯಕತ್ವಗಳನ್ನು ಕುರಿತು ಕನ್ನಡದ ಕವಿಯೊಬ್ಬರು ಸೃಷ್ಟಿಸಿರುವ ವಿಷಾದ ರೂಪಕವಿದು. ಆದರೆ ನಿರಾಶೆ ಮತ್ತು ವಿಷಾದಗಳು ಖಾಯಮ್ಮಾಗಿ ಇರಬೇಕಿಲ್ಲವಷ್ಟೆ. ಜೀವಂತವೂ ಚಲನಶೀಲವೂ ಆದ ಸಮಾಜದಲ್ಲಿ ಈ ನಿರಾಶೆ ಮತ್ತು ವಿಷಾದಗಳು, ಸ್ವವಿಮರ್ಶೆಯ ಮೂಲಕ ಹೊಸ ಚೈತನ್ಯದ ಶೋಧವಾಗಿ ಬದಲಾಗಬಹುದು; ಜೀವಪರ ಚಳುವಳಿಗಳ ಹುಟ್ಟಿನ ಭರವಸೆಯಾಗಿ ರೂಪಾಂತರ ಪಡೆಯಬಹುದು. ದೇವನೂರರ 'ಒಡಲಾಳ'ದಲ್ಲಿ ಪುಟಗೌರಿಯು ನವಿಲಿನ ಚಿತ್ರ ಬಿಡಿಸಲು ಹೊರಟಾಗ ಬಿಳಿಗೋಡೆಯೇನು ಸಿದ್ಧವಾಗಿರುವುದಿಲ್ಲ; ಆಕೆ, ದೀಪದ ಮಸಿಹಿಡಿದು ಕಪ್ಪಗಾಗಿದ್ದ ಗೋಡೆಯನ್ನು ಭಿತ್ತಿಯನ್ನಾಗಿಸಿಕೊಂಡು, ಅದರ ಎದೆಯ ಮೇಲೆ ನವಿಲನ್ನು ಬಿಡಿಸುತ್ತಾಳೆ. ಪ್ರತಿಕೂಲ ಸನ್ನಿವೇಶದಲ್ಲೇ ನಮ್ಮ ಕನಸಿನ ಸಮಾಜದ ಕಲ್ಪನೆಯ ಚಿತ್ರ ಬಿಡಿಸಲು. ತಾತ್ವಿಕಭಿತ್ತಿಗಳನ್ನು ಹುಟ್ಟಿಸಿಕೊಳ್ಳಬೇಕಿದೆ. ಭಾರತದಲ್ಲಿ ಫ್ಯಾಸಿಸ್ಟರು ಏಕನಾಯಕನನ್ನು ಮುಂದಿಟ್ಟುಕೊಂಡು ಅಧಿಕಾರ ಹಿಡಿಯುವ ತರಾತುರಿಯಲ್ಲಿರುವ ಈ ಹೊತ್ತಲ್ಲೇ, ಹೊಸಭಿತ್ತಿಯ ಮತ್ತು ಹೊಸಚಿತ್ರಗಳ ಸುಳಿವುಗಳೂ ನಮ್ಮ ಪರಿಸರದಲ್ಲಿ ಮೂಡುತ್ತಿವೆ. ಹಲವು ಪರಿಯಲ್ಲಿರುವ ಈ ಸುಳಿವುಗಳು ಈ ಲೇಖನಗಳಲ್ಲಿ ಪ್ರಸ್ತಾಪಗೊಂಡಿವೆ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.