Veerabhadra
Publisher - ಪಂಚಮಿ ಪಬ್ಲಿಕೇಷನ್ಸ್
Regular price
Rs. 280.00
Regular price
Rs. 280.00
Sale price
Rs. 280.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಕನ್ನಡ ಸಾಹಿತ್ಯ ಲೋಕದಲ್ಲಿ ಅನನ್ಯ ಚೇತನದಂತೆ, ತೆರೆಮರೆಯಲ್ಲೇ ಅಪಾರ ಕೊಡುಗೆಯನ್ನು ನೀಡಿದ ಹಿರಿಯ ಕಥೆಗಾರರಾಗಿರುವ ವೀರಭದ್ರರು ಮತ್ತೆ ಈ ಕೃತಿಯ ಮೂಲಕ ಬಂದಿದ್ದಾರೆ. ಈಗಿನ ಆಂಧ್ರಪ್ರದೇಶಕ್ಕೆ ಸೇರಿಕೊಂಡಿರುವ ಅಧೋನಿ ಜಿಲ್ಲೆಯಲ್ಲಿ ಹುಟ್ಟಿದ ವೀರಭದ್ರರು, ಒಂದು ರೀತಿಯಲ್ಲಿ ಬಳ್ಳಾರಿ ಮತ್ತು ಅಧೋನಿ ಸೀಮೆಯ ಸೊಗಡನ್ನು ತಮ್ಮ ಬರಹಗಳಲ್ಲಿ ಮುಖ್ಯವಾಗಿ ಬಳಸಿಕೊಂಡಿರುವುದು, ಅವರ ಕಥೆಗಳನ್ನು ಓದಿದವರಿಗೆ ಅರ್ಥವಾಗುತ್ತದೆ. ಇಪ್ಪತ್ತರ ಹರೆಯದಲ್ಲೇ ಪ್ರಜಾವಾಣಿ ಕಥಾಸ್ಪರ್ಧೆಯಲ್ಲಿ ಗೆದ್ದದ್ದು, ಸ್ವತಂತ್ರವಾಗಿ ತೆಲುಗು, ಹಿಂದಿ ಭಾಷೆಯ ಕತೆ ಕಾದಂಬರಿಗಳನ್ನು ಅನುವಾದ ಮಾಡುವುದರ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಐವತ್ತು ಅರವತ್ತರ ದಶಕದಲ್ಲೇ ಭರವಸೆಯನ್ನು ಮೂಡಿಸಿದರು. ಈ ಕೃತಿಯ ಮೂಲಕ ಆಂಧ್ರಪ್ರದೇಶದ ಪ್ರಖ್ಯಾತ ಕತೆಗಾರರ ಜನಪ್ರಿಯ ಕಥೆಗಳನ್ನು ಕನ್ನಡದ ಸೊಗಡಿಗೆ ತಕ್ಕಂತೆ ಅನುವಾದ ಮಾಡಿ ಹೊಸತಲೆಮಾರಿನ ಬರಹಗಾರರಿಗೆ ಪರಿಚಯಿಸಿದ್ದಾರೆ.
