ಎನ್. ಎಲ್. ಆನಂದ್, ಗುಂಡಪ್ಪ ದೇವಿಕೇರಿ
Publisher:
Regular price
Rs. 190.00
Regular price
Sale price
Rs. 190.00
Unit price
per
Shipping calculated at checkout.
Couldn't load pickup availability
ನಾಡೋಜ ನಾರಾಯಣ ರೆಡ್ಡಿಯವರ ಜೀವನ ಕಥನವನ್ನು ಸರಳವಾಗಿ ಉತ್ಸಾಹ ಮತ್ತು ಅಭಿಮಾನದಿಂದ ನಿರೂಪಿಸಿರುವವರು ಮಿತ್ರರಾದ ಎನ್. ಎಲ್. ಆನಂದ್ ಮತ್ತು ಗುಂಡಪ್ಪ ದೇವಿಕೇರಿ ಅವರು. ಇಬ್ಬರೂ ಎಲ್ಲಾ ನಿಜಾಂಶಗಳನ್ನು ಸಂಗ್ರಹಿಸಿ, ನೇರವಾಗಿ ನಾರಾಯಣ ರೆಡ್ಡಿಯವರಿಂದಲೇ ವಿಷಯ ಸಂಗ್ರಹ ಮಾಡಿ, ಸೊಗಸಾಗಿ ಈ ಕತೆಯನ್ನು ಹೇಳಿಕೊಂಡು ಹೋಗಿದ್ದಾರೆ. ಅವರು ಬಳಸಿರುವ ಭಾಷೆ, ಸಾಹಿತ್ಯ ಎಲ್ಲವೂ ಜೀವಂತವಾಗಿವೆ. ಓದಲು ಸಂತೋಷವಾಗುತ್ತದೆ. ಸಾವಯವ ಯೋಗಿ ಎಂದು ಹೆಸರು ಪಡೆಯಲು ಮತ್ತು ಅವರಿಗೆ ದೇಶವಿದೇಶಗಳ ಕೃಷಿ ತಜ್ಞರಿಂದ, ಸರಕಾರಗಳಿಂದ ಸಂದಿರುವ ಪ್ರಶಸ್ತಿಗಳು ಅಷ್ಟೇನೂ ಸುಲಭವಾಗಿ ದೊರೆತಿಲ್ಲ. ಅವರು ರಾತ್ರಿ ಹಗಲು ಹೆಂಡತಿ ಮಕ್ಕಳೊಂದಿಗೆ ಅನ್ನ-ನೀರು ಕಡೆಗಣಿಸಿ ದುಡಿದಿದ್ದಾರೆ. ಶಿಸ್ತು, ಶ್ರದ್ಧೆ, ಸಂಕಲ್ಪಗಳಿಂದ, ಧರ್ಮ ಜೀವನದಲ್ಲಿಯೇ ನಡೆದು ಬಂದಿದ್ದಾರೆ; ಅಸಂಖ್ಯ ಕಷ್ಟಗಳನ್ನು ಅನುಭವಿಸಿದ್ದಾರೆ.
