Srinidhi Publications
ನಾರಾಯಣ ಹೃದಯ ಲಕ್ಷ್ಮಿ ಹೃದಯ ಸ್ತೋತ್ರ
ನಾರಾಯಣ ಹೃದಯ ಲಕ್ಷ್ಮಿ ಹೃದಯ ಸ್ತೋತ್ರ
Publisher - ಶ್ರೀನಿಧಿ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 32
Type - Paperback
Couldn't load pickup availability
* ಶ್ರೀಲಕ್ಷ್ಮೀ ನಾರಾಯಣರು ಆದಿ ದಂಪತಿಗಳಾಗಿ ಶ್ರೀಹರಿಯು ಮೂಲ ಪ್ರಕೃತಿ ಪುರುಷರಾಗಿ ಜಗದ ಪಾಲನಾಕ್ರಿಯೆಯನ್ನು, ಲೋಕ ಕಲ್ಯಾಣವನ್ನು ನಿರಂತರ ಮಾಡುತ್ತಾ ಅಗ್ರಪೂಜಿತರಾಗಿದ್ದಾರೆ.
* ಲಕ್ಷ್ಮೀನಾರಾಯಣರ ಸ್ಮರಣೆ ಮಾತ್ರದಿಂದ ಸಕಲ ಕಷ್ಟಗಳೂ ನಿವಾರಣೆಗೊಂಡು ಇಹಲೋಕದ ಸಕಲ ಕಾಮನೆಗಳೂ ನೆರವೇರುತ್ತದೆ. ಇದಕ್ಕೆ ಭಗವಂತನಲ್ಲಿ ನಂಬಿಕೆ – ಶ್ರದ್ದೆ ಅತಿಮುಖ್ಯವೆನಿಸುತ್ತದೆ.
* ದಾಸಸಾಹಿತ್ಯದಲ್ಲಿ ಶ್ರೀಹರಿಯ ಮಹಿಮೆಯನ್ನು ಮೆರೆದಿದ್ದು ಪ್ರಸ್ತುತ ಶ್ರೀಜಗನ್ನಾಥದಾಸರ ನಾರಾಯಣ ಹೃದಯ ಮತ್ತು ಲಕ್ಷ್ಮೀ ಹೃದಯ ಪದ್ಯರೂಪಿ - ಸ್ತೋತ್ರಗಳು ಶೀಘ್ರಫಲಪ್ರದ ಮತ್ತು ಜನಜನಿತ.
* ಮೂಲ ಸಂಸ್ಕೃತದಲ್ಲಿ ಉತ್ತವಾಗಿರುವಂತಹ ಅಥರ್ವಣ ರಹಸ್ಯದ ಶ್ರೀಲಕ್ಷ್ಮೀನಾರಾಯಣರ ಹೃದಯ ಸ್ತೋತ್ರಗಳ ಪಾರಾಯಣ - ಪಠಣದಿಂದ ಅಧಿಕ ಶುಭಫಲಗಳು ಬರುತ್ತವೆ. ಆದರೆ ಸಂಸ್ಕೃತದ ಪದ್ಯಗಳನ್ನು ಉಚ್ಚರಿಸಲು ಕಷ್ಟಪಡುವ ಇಂದಿನ ಕಾಲದಲ್ಲಿ ಓದಿದ ಮಾತ್ರಕ್ಕೆ ಅರ್ಥವಾಗುವುದೇ? ಸಧ್ಯಕ್ಕೆ ಅದು ಕಬ್ಬಿಣದ ಕಡಲೆ ಅಷ್ಟೇ!
* ಪ್ರಸ್ತುತ ಈ ಪುಸ್ತಕದಲ್ಲಿ ಶ್ರೀಜಗನ್ನಾಥದಾಸರಿಂದ ರಚಿಸಲ್ಪಟ್ಟ ನಾರಾಯಣ ಹೃದಯ, ಲಕ್ಷ್ಮೀಹೃದಯ ಪದ್ಯಗಳನ್ನು ದಪ್ಪಾಕ್ಷರದಲ್ಲಿ ಮುದ್ರಿಸಿ ನೀಡುತ್ತಿದ್ದೇವೆ. ಕನ್ನಡದಲ್ಲೇ ಈ ಪದ್ಯಗಳು ಇರುವುದರಿಂದ (ಸರಳವಾಗಿರುವುದರಿಂದ) ಇದನ್ನು ಹೇಳಿಕೊಂಡೇ ಅರ್ಥೈಸಬಹುದಾಗಿದೆ. ನಾವು ಏನನ್ನು ಹೇಳುತ್ತಿದ್ದೇವೆಂದು ಮೊದಲು ನಮಗೆ ತಿಳಿದಾಗಲೇ ಆ ಪ್ರಾರ್ಥನೆ ಸ್ತೋತ್ರಾದಿಗಳ ಫಲ ನಮ್ಮನ್ನು ಸೇರುತ್ತದೆ ಎಂಬುದು ಸತ್ಯಕ್ಕೆ ದೂರವಿಲ್ಲದ ವಿಚಾರ.
* ಈ ಪುಸ್ತಕದ ಪಾರಾಯಣವು ಅತ್ಯಂತ ಶ್ರೇಯಸ್ಕರ. ಶುಭಫಲದಾಯಕ ಮತ್ತು ಮಂಗಳಕರವೆನಿಸುವುದು.
* ಶ್ರದ್ದೆ - ಭಕ್ತಿಯಿಂದ ನಿತ್ಯಾಪ್ತಿಕಗಳ ನಂತರ ದೈವ ಸನ್ನಿಧಿಯಲ್ಲಿ ಏಕಚಿತ್ತದಿಂದ ಇದನ್ನು ಪಠಿಸಬೇಕು.
* ಆಸ್ತಿಕರೆಲ್ಲರಿಗೂ ಈ ಸಂಗ್ರಹ ಪ್ರಿಯವೆನಿಸುವುದೆಂಬ ನಂಬಿಕೆಯೊಂದಿಗೆ.
Share

Subscribe to our emails
Subscribe to our mailing list for insider news, product launches, and more.