Ashoka
ಮುನಿಸಂಚಾರ
ಮುನಿಸಂಚಾರ
Publisher - ವಂಶಿ ಪಬ್ಲಿಕೇಷನ್ಸ್
- Free Shipping Above ₹400
- Cash on Delivery (COD) Available*
Pages - 320
Type - Paperback
Couldn't load pickup availability
"ಕಾಲ ಎನ್ನುವುದು ಸರ್ವವ್ಯಾಪಿ. ಇಡೀ ಬ್ರಹ್ಮಾಂಡದಲ್ಲಿ ಕಾಲವು ನಿತ್ಯ ನಿರಂತರ ಸತ್ಯ. ನಿಲ್ಲದೆ ಸದಾ ಚಲಿಸುತ್ತಿರುವ ಈ ಕಾಲದಲ್ಲಿ ಮನುಷ್ಯ ಬ್ರಹ್ಮಾಂಡದ ಆದಿ ಮತ್ತು ಅಂತ್ಯವನ್ನು ಕಂಡುಹಿಡಿಯಲು ಪ್ರಯತ್ನಪಡುತ್ತಲೇ ಇದ್ದಾನೆ. ಆದರೆ ಕೆಲವೊಮ್ಮೆ ತನಗೆ ಅರಿವಿಲ್ಲದೆ ಕಾಲದಲ್ಲಿ ಬಂದಿಯಾಗುತ್ತಾನೆ.
ದಟ್ಟವಾದ ಕಾಡಿನಲ್ಲಿ ಹೇರಳವಾಗಿ ಆಯುರ್ವೇದ ಸಸ್ಯಗಳು ದೊರಕುವ ಒಂದು ಜಾಗವಿದೆ; ಅದರ ಹೆಸರೇ ಅತೀಂದ್ರ ಬೆಟ್ಟ. ಈ ಬೆಟ್ಟದ ತಪ್ಪಲಲ್ಲಿ ಸಾವಿರಾರು ವರ್ಷಗಳಿಂದ ಆಯುಷ್ಮಾನ್ ಜನಾಂಗದವರು ವಾಸಿಸುತ್ತಿದ್ದಾರೆ. ಅತೀಂದ್ರ ಬೆಟ್ಟ ಅದೆಷ್ಟು ನಿಗೂಢತೆಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿದೆಯೆಂದರೆ, ಇಲ್ಲಿನ ನಿಗೂಢತೆಗಳನ್ನು ಹುಡುಕಲು ಬರುವ ಯಾವೊಬ್ಬನೂ ಜೀವಸಹಿತ ಉಳಿದಿಲ್ಲ. ಜ್ಞಾನಮೂರ್ತಿ ಎಂಬ ವಿಜ್ಞಾನಿ ಈ ಬೆಟ್ಟಕ್ಕೆ ಬಂದು, ಆಯುಷ್ಮಾನ್ಗಳ ವಿಶ್ವಾಸಗಳಿಸಿ, ಅತೀಂದ್ರ ಬೆಟ್ಟದ ನಿಗೂಢತೆ ಮತ್ತು ಆಯುಷ್ಮಾನ್ ಜನಾಂಗದ ಅಗೋಚರತೆಯನ್ನು ಕಂಡುಹಿಡಿಯಲು ಪ್ರಯತ್ನಿಸಿ, ನಿಗೂಢವಾಗಿಯೇ ಅಗೋಚರತೆಗೆ ಬಲಿಯಾದ.
ಜ್ಞಾನಮೂರ್ತಿಯ ಸಾವಿನ ರಹಸ್ಯವನ್ನು ಕಂಡುಹಿಡಿಯಲು ಇವನ ಮಗ ಹರ್ಷ ಮತ್ತದೇ ನಿಗೂಢತೆಯ ಬೆನ್ನುಬಿದ್ದ. ಜ್ಞಾನಮೂರ್ತಿ ತನ್ನ ಸಾವಿನ ಮುಂಚೆ ಪತ್ತೇದಾರಿ ಚಿದಾನಂದನಿಗೆ ಬರೆದ ಪತ್ರದಲ್ಲಿದ್ದ ವಿಷಯಗಳನ್ನು ಇಟ್ಟುಕೊಂಡು ತಂದೆಯ ಸಾವಿನ ರಹಸ್ಯವನ್ನು ಹುಡುಕುತ್ತಾ ತನ್ನ ಜೀವನವನ್ನೇ ಕಳೆದುಬಿಟ್ಟ. ತನಗೇ ಅರಿವಿಲ್ಲದೆ ಕಾಲದಲ್ಲಿ ಬಂದಿಯಾದ; ಬಂಧನದಿಂದ ಹೊರಬರಲು ಪ್ರಯತ್ನಿಸಿ ಕಾಲದಲ್ಲಿ ಲೀನವಾದ.
ಅತೀಂದ್ರ ಬೆಟ್ಟದ ರಹಸ್ಯ ಯಾವುದು? ಆಯುಷ್ಮಾನರ ಜೊತೆಗಿದ್ದ ಪಂಚವರ್ಣ ಜನಾಂಗ ಯಾವುದು? ಪಂಚವರ್ಣ ಜನಾಂಗದಲ್ಲಿದ್ದ ದಾಸಿಸ್ಗಳೆಂದರೆ ಯಾರು? ಈ ಕಾಡುಜನಗಳ ಅಗೋಚರ ರಹಸ್ಯಗಳನ್ನು ಜ್ಞಾನಮೂರ್ತಿ ಮತ್ತು ಮಗ ಹರ್ಷ ಭೇದಿಸುತ್ತಾರೋ ಇಲ್ಲವೋ ಎಂಬುವುದೇ 'ಮುನಿಸಂಚಾರ' ಕಾದಂಬರಿಯ ಒಳಗಿರುವ ಹೂರಣ.
ಕಾಲಾಯ ತಸ್ಮೈ ನಮಃ.
Share

Subscribe to our emails
Subscribe to our mailing list for insider news, product launches, and more.