Jayakeerti. H
ಮುಕ್ತ ಜಿನದತ್ತ - ಹೊಂಬುಜ ಕ್ಷೇತ್ರದ ಐತಿಹಾಸಿಕ ಕಾದಂಬರಿ
ಮುಕ್ತ ಜಿನದತ್ತ - ಹೊಂಬುಜ ಕ್ಷೇತ್ರದ ಐತಿಹಾಸಿಕ ಕಾದಂಬರಿ
Publisher -
- Free Shipping Above ₹400
- Cash on Delivery (COD) Available*
Pages - 224
Type - Paperback
Couldn't load pickup availability
ಹೊಂಬುಜ ಕ್ಷೇತ್ರದ ಮಾತೆ ಪದ್ಮಾವತೀ ದೇವಿಯವರ ಪಾದಾಂಬುಜಕ್ಕೆ ಪೊಡಮಟ್ಟು, ಈ ಮುಕ್ತ ಜಿನದತ್ತ ಎಂಬ ಐತಿಹಾಸಿಕ' [ಆಧ್ಯಾತ್ಮಿಕ] ಕಾದಂಬರಿ ಉತ್ತರ ಭಾರತದ ಮಥುರಾ ನಗರದಿಂದ ಕಾರಣಾಂತರದಿಂದ ಬಂದ ಜನದತ್ತರಾಯನಿಗೆ ದೈವೀ ಸಾಕ್ಷಾತ್ಕಾರವಾದ ಪುಣ್ಯ ಕಥೆ.
ಆತ ಲೊಕ್ಕಿ ವೃಕ್ಷದ ಬಳಿ ಬಂದು ವಿಶ್ರಮಿಸುತ್ತಿದ್ದಾಗ ಕನಸಲ್ಲಿ ಮಾತ ಪದ್ಮಾವತೀ ದೇವಿ ಪ್ರತ್ಯಕ್ಷಳಾಗಿ ತಾನಿಲ್ಲೇ ನೆಲೆ ನಿಲ್ಲುವೆನೆಂದು ತಿಳಿಸಿದ ಮೇಲೆ, ಅಲ್ಲಿ ಮಂದಿರ ನಿರ್ಮಾಣವಾದುದೊಂದು ಪುಣ್ಯೆತಿಹಾಸ..! ಜಿನದತ್ತರಾಯ ಮುಂದೆ ಆ ಕ್ಷೇತ್ರದ ಒಡೆಯನಾಗಿ ಸಾಮ್ರಾಜ್ಯ ನಿರ್ಮಿಸಿ, ಹೊಂಬುಜ ಕ್ಷೇತ್ರವನ್ನು ದೇಶದ ಉದ್ದಗಲಕ್ಕೂ ಖ್ಯಾತಿಗೆ ತರುತ್ತಾನೆ.
ಮುಂದೆ, ಆತನಿಗೆದುರಾಗುವ ಪರೀಕ್ಷೆಯಲ್ಲಿ ಮನುಷ್ಯ ಸಹಜ ವ್ಯಾಮೋಹಕ್ಕೊಳಗಾಗಿ ತಪ್ಪೆಸಗಿ ತಲೆ ಬಾಗುವಂತಾಗುತ್ತದೆ. ಇದರಿಂದ ಬೇಸತ್ತ ಜಿನದತ್ತ ಮುಂದೆ ಜಿನ ದೀಕ್ಷೆ ಪಡೆದು ಭವ ಮುಕ್ತನಾಗುತ್ತಾನೆ ಎಂಬುದು ಈ ಕಾದಂಬರಿಯ ಸಾರ
ಇದನ್ನು ಬರೆದ ಲೇಖಕರಾದ ಶ್ರೀ ಜಯಕೀರ್ತಿ ಹೆಚ್ ಇವರು ಜೈನ ಸಿದ್ಧಾಂತದ ವಿಚಾರಗಳನ್ನು ಸಮರ್ಥವಾಗಿ ಪ್ರತಿಪಾದಿಸಲು ಯತ್ನಿಸಿದ್ದಾರೆ. ಓದುಗರಿಗೂ, ಈ ಕಾದಂಬರಿ ಮಹತ್ವಪೂರ್ಣ ಪ್ರೇರಣಿ ನೀಡಲಿದೆ ಎನ್ನುವ ಅನಿಸಿಕೆ ನನ್ನದು.
-ಜಿ. ಎಂ. ಕೋಮಲ, ಪ್ರಕಾಶಕರು
Share

Subscribe to our emails
Subscribe to our mailing list for insider news, product launches, and more.