Dr. K. S. Narayanacharya
ಮತ್ಸ್ಯನಗರಿಯಲ್ಲಿ ಪಾಂಡವರು
ಮತ್ಸ್ಯನಗರಿಯಲ್ಲಿ ಪಾಂಡವರು
Publisher - Sahithya Prakashana
- Free Shipping Above ₹400
- Cash on Delivery (COD) Available*
Pages - 328
Type - Paperback
Couldn't load pickup availability
"ಸುಳ್ಳು ಮಹಾಭಾರತ ಕೃತಿಗಳು, ವಿಕೃತಿಗಳು ಅಡಗಿ, ಶುದ್ಧ ವ್ಯಾಸದರ್ಶನ ನಿಮ್ಮ ಹೃದಯ ಮುಟ್ಟದಿದ್ದರೆ, ನಮ್ಮ ದೇಶಕ್ಕೆ ವ್ಯಾಸರಿಂದ ಆಗಬೇಕಾದ ಲಾಭವೇನು? ಮಹಾಭಾರತವು ನಮಗೆ ದಾರ್ಶನಿಕ ಗ್ರಂಥ; ಕುಕವಿಗಳ ಚೆಲ್ಲಾಟದ ಆಡುಂಬೊಲವಲ್ಲ! ಬರೀ ಕಾವ್ಯವಲ್ಲ! ಬರೀ ಮನರಂಜನೆಯ, ಹವ್ಯಾಸದ, 'time killing', 'time-filling gap' ಅಲ್ಲ ಎಂದು ಖಾರವಾಗಿ ಬರೆಯಬೇಕಾಗಿದೆ.
ಕುಮಾರವ್ಯಾಸನ ಕರ್ಣ ಈಗಣ ಜಾತಿ ರಾಜಕಾರಣದಲ್ಲಿ ಮಾಡುತ್ತಿರುವ ಕೋಲಾಹಲ ನೋಡಿ! ಪಂಪನ ಕರ್ಣ ಮಾಡಿರುವ ಅವಾಂತರ ನೋಡಿ! Can a spurious work create so much havoc? ಮಹಾಕಾವ್ಯ ಹುಡುಗಾಟಿಕೆಯ ವಿಷಯವೋ, ಕ್ಷುಲ್ಲಕ ರಾಜಕಾರಣಿಗಳ ಕಾಲೆಂದೋ ಆಗಬಾರದು. ಅಂದರೆ ಮೂಲ ಕೃತಿಗಳನ್ನೇ ಓದಬೇಕು. ಓದಲು ಸಂಸ್ಕೃತ ಬೇಕು!
ಸಂಸ್ಕೃತ ಮತ್ತು ಸಂಸ್ಕೃತಿ ದ್ವೇಷದ ಈ ಕಾಲದಲ್ಲಿ, ಈ ಕೊರತೆ ತುಂಬಲು ನಾನು ಮೂಲಕೃತಿಯ ಈ ರೋಚಕ ರೂಪಾಂತರ, ಅಲಂಕಾರ, ಪೂರಣ, ಶೃಂಗಾರಗಳ ಕಾರ್ಯ ಕೈಗೊಂಡೆ. ಈ ಹಿಂದಿನ ನನ್ನ ಕೃತಿಗಳು ಹತ್ತಾರು ಮುದ್ರಣ ಕಂಡಿವೆ ಎಂದರೆ ನನ್ನ ಕಾರ್ಯ ಸಾರ್ಥಕ ಎಂದು ಭಾವಿಸುತ್ತೇನೆ. ಓದುಗರ ಮೆಚ್ಚುಗೆಯೇ ನನಗೆ ಪ್ರಶಸ್ತಿ."
- ಕೆ. ಎಸ್. ನಾರಾಯಣಾಚಾರ್ಯ (ನಿವೇದನೆಯಲ್ಲಿ)
Share

Subscribe to our emails
Subscribe to our mailing list for insider news, product launches, and more.